ಬೈಕ್ ಸವಾರ ಸೈಯದ್ ಸಮೀರ್ 
ರಾಜ್ಯ

ಬೆಂಗಳೂರು: ಸಿಂಗ್ನಲ್ ಜಂಪ್ ಮಾಡಿ, ಕಾರಿಗೆ ಡಿಕ್ಕಿ; ಚಾಲಕನಿಗೆ ಅವಾಚ್ಯ ಶಬ್ಬಗಳಿಂದ ಬೈದಿದ್ದ, ಬೈಕ್ ಸವಾರನ ಬಂಧನ!

ಜನವರಿ 26 ರಂದು ಈ ಘಟನೆ ನಡೆದಿದ್ದು, ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಬೆಂಗಳೂರು: ನಗರದ ಡಿಕೆನ್ಸನ್ ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿದಲ್ಲದೇ, ಕಾರಿಗೆ ಡಿಕ್ಕಿ ಹೊಡೆದು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬನಶಂಕರಿ ನಿವಾಸಿ ಸೈಯದ್ ಸಮೀರ್ ಎಂದು ಗುರುತಿಸಲಾಗಿದ್ದು, ಈತ ಕಿಡಿಗೇಡಿತನದ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 26 ರಂದು ಈ ಘಟನೆ ನಡೆದಿದ್ದು, ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಡಿಕೆನ್ಸನ್ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಮುಂದೆ, ಸಿಗ್ನಲ್ ಜಂಪ್ ಮಾಡಿದ ಸಮೀರ್, ಪ್ರವೀಣ್ ಎಂಬುವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ನಂತರ ಪ್ರವೀಣ್ ಪ್ರಶ್ನೆ ಮಾಡಿದಾಗ, ನೀನ್ಯಾರೋ ಮಾತಾಡೋಕೆ, ನನ್ನ ಬೈಕ್, ನನ್ನ ಇಷ್ಟ ಎಂದು ಅವಾಜ್ ಹಾಕಿದ್ದಾನೆ.

ಪೊಲೀಸರ ಮುಂದೆ ಈ ಹೇಳಿಕೆ ನೀಡು ಅಂತಾ ಪ್ರವೀಣ್ ಕೇಳಿದಾಗ, ಯಾವ ಪೋಲೀಸ್? ನಾನು ಯಾಕೆ ಬರಬೇಕು? ಕೇಳಲು ನೀವು ಯಾರು?" ಎಂದು ಪ್ರತ್ಯುತ್ತರ ನೀಡಿದ್ದಾನೆ.

ಅಲ್ಲದೇ ಮಣಿಪಾಲ ಸೆಂಟರ್ ಬಳಿ ಕಾರು ಚಾಲಕನನ್ನು ಅಡ್ಡಗಟ್ಟಿದ್ದು, ನಿಂದಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ನಂತರ ವಿಡಿಯೋದಲ್ಲಿ ಕ್ಷಮೆಯಾಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಜಿತ್ ಪವಾರ್ ದುರ್ಮರಣದಲ್ಲಿ 'ಪಿತೂರಿ' ನಡೆದಿದೆಯೇ? ಶರದ್ ಪವಾರ್ ಮೊದಲ ಪ್ರತಿಕ್ರಿಯೆ...

ಸರ್... ಹಾವಾಡಿಗರಿಗೆ ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಇಲ್ಲ: ನಟ ಕಿಶೋರ್

ಯುಜಿಸಿ ನಿಯಮಗಳ ವಿವಾದದ ಬಗ್ಗೆ ಪ್ರಧಾನಿಗೆ ರಕ್ತದಲ್ಲಿ ಬರೆದ ವ್ಯಕ್ತಿ

25 ಶಾಸಕರ ನಿಗಮ-ಮಂಡಳಿ ಅಧ್ಯಕ್ಷ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ; ಯಾರೆಲ್ಲಾ ಮುಂದುವರಿಕೆ?

News headlines 28-01-2026 | MUDA: CM ಗೆ ರಿಲೀಫ್; ಸರ್ಕಾರದ ವಿರುದ್ಧ ಬಿಜೆಪಿ ಟೆಲಿಫೋನ್ ಕದ್ದಾಲಿಕೆ ಆರೋಪ; ಮನೆಗೆಲಸದವರಿಂದ 18 ಕೋಟಿ ರೂ ಮೌಲ್ಯದ ಚಿನ್ನ, ಬೆಳ್ಳಿ ದರೋಡೆ

SCROLL FOR NEXT