ರಾಜಾ ಸೀಟ್ ವ್ಯೂ ಪಾಯಿಂಟ್ online desk
ರಾಜ್ಯ

ಕೊಡಗಿನಲ್ಲಿ ಭಾರೀ ಮಳೆ: ಜುಲೈ 12 ರವರೆಗೆ ಪ್ರವಾಸಿಗರಿಗೆ ರಾಜಾ ಸೀಟ್ ಪ್ರವೇಶ ನಿರ್ಬಂಧ

ಏತನ್ಮಧ್ಯೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಹಾಳಾದ ರಸ್ತೆಯನ್ನು ಸರಿಪಡಿಸಲು ಮಡಿಕೇರಿಯಲ್ಲಿ ದುರಸ್ತಿ ಕಾರ್ಯ ಮುಂದುವರೆದಿದ್ದು, ಸಂಚಾರ ಅಸ್ತವ್ಯಸ್ತತೆ ಉಂಟಾಗಿದೆ.

ಕೊಡಗು: ಕೊಡಗಿನ ಹಲವಾರು ಭಾಗಗಳಲ್ಲಿ ಭಾರೀ ಮಳೆ ಮುಂದುವರೆದಿದ್ದು, ಜುಲೈ 10 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮಡಿಕೇರಿ ತಾಲ್ಲೂಕಿನ ಬೆಂಗೂರು ಗ್ರಾಮದಲ್ಲಿ 24 ಗಂಟೆಗಳಲ್ಲಿ 8 ಇಂಚುಗಳಿಗಿಂತ ಹೆಚ್ಚು ಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 2.38 ಇಂಚು ಮಳೆಯಾಗಿದೆ. ಏತನ್ಮಧ್ಯೆ, ನಗರದಲ್ಲಿ ಹಾನಿಗೊಳಗಾದ ರಸ್ತೆಯ ದುರಸ್ತಿ ಕಾರ್ಯ ಕೈಗೊಳ್ಳಲು ಮಡಿಕೇರಿಯ ರಾಜಾ ಸೀಟ್ ನ್ನು ಜುಲೈ 12 ರವರೆಗೆ ಭೇಟಿಗಾಗಿ ಮುಚ್ಚಲಾಗುತ್ತದೆ.

ಕರಡಿಗೋಡು ಮತ್ತು ಸಿದ್ದಾಪುರ ಪ್ರದೇಶಗಳಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಗ್ರಾಮದ ರಸ್ತೆ ಜಲಾವೃತವಾಗಿದೆ. ಸಂಬಂಧಪಟ್ಟ ನೋಡಲ್ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು, ತುರ್ತು ಸಂದರ್ಭದಲ್ಲಿ ನಿವಾಸಿಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಬಿರುಗಾಳಿ ಮತ್ತು ಮರಗಳು ಉರುಳಿಬಿದ್ದ ಪರಿಣಾಮ ಹಲವಾರು ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ತಂತಿಗಳು ಹಾನಿಗೊಳಗಾದ ನಂತರ ಜಿಲ್ಲೆಯಾದ್ಯಂತ ವಿದ್ಯುತ್ ಸರಬರಾಜು ಅಸ್ಥಿರವಾಗಿದೆ. ಕಳೆದ ಮೂರು ದಿನಗಳಿಂದ ವಿದ್ಯುತ್ ತಂತಿಗಳು ಅಸ್ತವ್ಯಸ್ತಗೊಂಡಿರುವುದರಿಂದ ಹಲವಾರು ಒಳನಾಡಿನ ಗ್ರಾಮಗಳು ಕತ್ತಲೆಯಲ್ಲಿವೆ.

ಏತನ್ಮಧ್ಯೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಹಾಳಾದ ರಸ್ತೆಯನ್ನು ಸರಿಪಡಿಸಲು ಮಡಿಕೇರಿಯಲ್ಲಿ ದುರಸ್ತಿ ಕಾರ್ಯ ಮುಂದುವರೆದಿದ್ದು, ಸಂಚಾರ ಅಸ್ತವ್ಯಸ್ತತೆ ಉಂಟಾಗಿದೆ.

ರಸ್ತೆ ಮುಚ್ಚುವಿಕೆಯಿಂದ ಉಂಟಾಗುವ ಸಂಚಾರ ದಟ್ಟಣೆಯನ್ನು ತಡೆಗಟ್ಟಲು ಜುಲೈ 12 ರವರೆಗೆ ರಾಜಾ ಸೀಟ್ ಪ್ರವಾಸಿ ಕೇಂದ್ರವನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಎಸ್ ಜೆ ಸೋಮಶೇಖರ್ ಆದೇಶಿಸಿದ್ದಾರೆ. ರಾಜಾ ಸೀಟ್ ಬಳಿಯ ಎಂಜಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಇತರ ಖಾಸಗಿ ಬಸ್‌ಗಳು ಎರಡೂ ಕಡೆ ಸಂಚರಿಸುವುದರಿಂದ, ಸಂಚಾರ ದಟ್ಟಣೆಯನ್ನು ತಡೆಗಟ್ಟಲು ಜುಲೈ 12 ರವರೆಗೆ ಪ್ರವಾಸಿ ಕೇಂದ್ರವನ್ನು ಮುಚ್ಚಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬೆಂಗೂರಿನಲ್ಲಿ 211.5 ಮಿಮೀ, ಅರ್ವಥೋಕ್ಲುವಿನಲ್ಲಿ 124 ಮಿಮೀ ಮತ್ತು ಬಿರುನಾನಿ ಗ್ರಾಮಗಳಲ್ಲಿ 120 ಮಿಮೀ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಬಲಮುರಿಯ ಕಾವೇರಿ ನದಿಗಳು ತುಂಬಿ ತುಳುಕುತ್ತಿದ್ದು ತಗ್ಗು ಪ್ರದೇಶಗಳು ಪ್ರವಾಹದ ಆತಂಕವನ್ನು ಎದುರಿಸುತ್ತಿವೆ. ಕಾವೇರಿ ನದಿಯ ತಗ್ಗು ಪ್ರದೇಶಗಳಲ್ಲಿ ಹಲವಾರು ಕೃಷಿಭೂಮಿಗಳು ಜಲಾವೃತಗೊಂಡಿವೆ. ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು 2090 ಕ್ಯೂಸೆಕ್‌ಗಳಿಗೆ ಏರಿದೆ. 2838.68 ಅಡಿ ಗರಿಷ್ಠ ಸಾಮರ್ಥ್ಯದ ಡ್ಯಾಮ್ ನಲ್ಲಿ ನೀರಿನ ಮಟ್ಟ 2589 ಅಡಿಗಳಿಗೆ ಏರಿಕೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕದಲ್ಲಿ ಶೇ.80ಕ್ಕೂ ಹೆಚ್ಚು SIR ಫಾರಂಗಳನ್ನು ವಿತರಿಸಲಾಗಿದೆ: CEO ಅನ್ಬುಕುಮಾರ್

ಬೆಂಗಳೂರಿನಾಚೆಗೆ ಮತ್ತಷ್ಟು ಹೊಸ ಬೆಂಗಳೂರುಗಳ ನಿರ್ಮಾಣ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆ

IPL ಮೂಡ್ ನಿಂದ ಹೊರಬನ್ನಿ, ಎಲ್ಲಾ ಪಿಚ್‌ಗಳು ಒಂದೇ ಆಗಿರಲ್ಲ: Team India ಆಟಗಾರರಿಗೆ ಜೋಫ್ರಾ ಆರ್ಚರ್ ಪಾಠ

ಚನ್ನಪಟ್ಟಣ: ತಹಶೀಲ್ದಾರ್‌ಗೆ ಪ್ರಜ್ಞೆ ತಪ್ಪಿಸಿ, ಬಟ್ಟೆ ಬಿಚ್ಚಿ ದೌರ್ಜನ್ಯ; 10 ಲಕ್ಷ ರೂ ಗೆ ಬೇಡಿಕೆ, ಆರೋಪಿ ಬಂಧನ!

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾಧ್ಯಮ ಕಾರ್ಯದರ್ಶಿಯಾಗಿ ಪಿ.ತ್ಯಾಗರಾಜ್ ಸೇರಿದಂತೆ ಮೂವರನ್ನು ನೇಮಿಸಿ ಸರ್ಕಾರ ಆದೇಶ!