ಆರೋಪಿ ಇಮ್ರಾನ್ 
ರಾಜ್ಯ

ಚಿಕ್ಕಬಳ್ಳಾಪುರ: 13 ದಿನಗಳ ಹೆಣ್ಣು ಶಿಶುವನ್ನು ಸಂಪ್‌ಗೆ ಹಾಕಿ ಹತ್ಯೆಗೈದ ತಂದೆ!

ತಂದೆ ಇಮ್ರಾನ್ ಹಾಗೂ ತಾಯಿ ಮುಸ್ಕಾನ್‌ಗೆ 13 ದಿನಗಳ ಹಿಂದೆ ಹೆಣ್ಣು ಜನಿಸಿತ್ತು. ಬುಧವಾರ ರಾತ್ರಿ ಆರೋಪಿ ಇಮ್ರಾನ್ ಮಲಗಿದ್ದ ಮಗುವನ್ನು ಎತ್ತಿಕೊಂಡು ಸಂಪ್‌ಗೆ ಹಾಕಿದ್ದಾನೆ.

ಚಿಕ್ಕಬಳ್ಳಾಪುರ: ಹೆಣ್ಣು ಇಂದು ಎಲ್ಲಾ ಕ್ಷೇತ್ರದಲ್ಲೂ ಗಂಡಿಗೆ ಸಮನಾಗಿ ಪೈಪೋಟಿ ನೀಡುತ್ತಿದ್ದಾಳೆ. ಆದರೂ ಗಂಡು ಮಗು ಬಯಸಿ ಹೆಣ್ಣು ಮಗು ಕೊಲೆ ಮಾಡುವ ಪ್ರಕರಣಗಳು ಮುಂದುವರೆದಿದೆ.

ರಾಜಧಾನಿ ಬೆಂಗಳೂರಿನಿಂದ ಅನತಿ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ಇಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಗಂಡು ಮಗು ಬಯಸಿದ್ದ ಪಾಪಿ ತಂದೆಯೊಬ್ಬ, ಸ್ವಂತ ಹೆಣ್ಣು ಮಗುವನ್ನೇ ಸಂಪ್‌ಗೆ ಹಾಕಿ ಹತ್ಯೆ ಮಾಡಿರುವ ಘಟನೆ ಶಾಂತಿನಗರದಲ್ಲಿ ನಡೆದಿದೆ.

ತಂದೆ ಇಮ್ರಾನ್ ಹಾಗೂ ತಾಯಿ ಮುಸ್ಕಾನ್‌ಗೆ 13 ದಿನಗಳ ಹಿಂದೆ ಹೆಣ್ಣು ಜನಿಸಿತ್ತು. ಬುಧವಾರ ರಾತ್ರಿ ಆರೋಪಿ ಇಮ್ರಾನ್ ಮಲಗಿದ್ದ ಮಗುವನ್ನು ಎತ್ತಿಕೊಂಡು ಸಂಪ್‌ಗೆ ಹಾಕಿದ್ದಾನೆ. ಬಳಿಕ ತಾಯಿ ಎದ್ದು ಮಗು ಎಲ್ಲಿ ಎಂದು ಕೇಳಿದಾಗ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.

ತದನಂತರ ಮನೆಯವರ ಜೊತೆ ಹುಡುಕಾಡುವ ನಾಟಕ ಆಡಿದ್ದಾನೆ. ಕೊನೆಗೆ ಸಂಪ್ ನೀರು ಹೊರ ಹಾಕಿ ನೋಡಿದಾಗ ಮಗು ಶವವಾಗಿ ಪತ್ತೆಯಾಗಿದೆ.

ತದನಂತರ ಮನೆಯವರ ಜೊತೆ ಹುಡುಕಾಡುವ ನಾಟಕ ಆಡಿದ್ದಾನೆ. ಕೊನೆಗೆ ಸಂಪ್ ನೀರು ಹೊರ ಹಾಕಿ ನೋಡಿದಾಗ ಮಗು ಶವವಾಗಿ ಪತ್ತೆಯಾಗಿದೆ. ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಾಪಿ ತಂದೆ ಇಮ್ರಾನ್‌ನನ್ನು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CJP Protest: ಹೊಸ ಮಾತುಕತೆಯ ಪ್ರಸ್ತಾಪ ಮುಂದಿಟ್ಟ ಕೇಂದ್ರ ಸರ್ಕಾರ, ಪ್ರತಿಭಟನಾಕಾರರು ಎಲ್ಲಿ ಹೇಳ್ತಾರೋ ಅಲ್ಲಿಯೇ ಚರ್ಚೆಗೆ ಸಿದ್ಧ- ಜೀತೇಂದ್ರ ಸಿಂಗ್!

CJP ಪ್ರತಿಭಟನೆಗೆ ಅಣ್ಣಾ ಹಜಾರೆ ಎಂಟ್ರಿ: ಕಣ್ಣೀರು ಮೂಲಕ ಮೌನ ಚಳುವಳಿ ಆರಂಭಿಸಿದ ಹಜಾರೆ, Video!

ಸಿಂಧೂ ನದಿ ನೀರು ಒಪ್ಪಂದ ಮುಂದುವರಿಯಲು ಸಾಧ್ಯವೇ ಇಲ್ಲ: ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಬಿಗ್ ಶಾಕ್ ನೀಡಿದ ಭಾರತ!

ಮೋದಿ ಪ್ರತಿಕ್ರಿಯೆಗೆ ಕಾಕ್ರೋಚ್ ಕೆಂಡಾಮಂಡಲ; ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ - CJP

ಜು. 26 ರಂದು ಮುಂಬೈಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ: ಅಡ್ಡಿಗೆ ಯತ್ನಿಸಿದರೆ ಒದೆ ಬೀಳುತ್ತೆ- ವಾರ್ನಿಂಗ್ ಕೊಟ್ಟ ರಾಜ್ ಠಾಕ್ರೆ!