ಸಾಂದರ್ಭಿಕ ಚಿತ್ರ  
ರಾಜ್ಯ

ಪ್ರೌಢಶಾಲೆ ಹಂತದಲ್ಲಿ ಶಾಲೆ ತೊರೆಯುವ ಬಾಲಕಿಯರು: ಬಿಹಾರ, ಉತ್ತರ ಪ್ರದೇಶ ಹಿಂದಿಕ್ಕಿದ ಕರ್ನಾಟಕ !

2025-26ರ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ 9 ಮತ್ತು 10ನೇ ತರಗತಿಯ 13.9% ಬಾಲಕಿಯರು ಶಾಲೆ ತೊರೆದಿದ್ದಾರೆ.

ಮಂಗಳೂರು: ಕಳೆದ ಮೂರು ವರ್ಷಗಳಲ್ಲಿ ಪ್ರೌಢಶಾಲಾ ಹಂತದಲ್ಲಿ ಬಾಲಕಿಯರ ಶಾಲಾ ತೊರೆಯುವಿಕೆ (Dropout) ಪ್ರಮಾಣದಲ್ಲಿ ಇಳಿಕೆ ಕಂಡಿದ್ದರೂ, ಕರ್ನಾಟಕವು ಇನ್ನೂ ದೇಶದ ಪ್ರಮುಖ ರಾಜ್ಯಗಳಲ್ಲಿ ಅತಿ ಹೆಚ್ಚು ಡ್ರಾಪ್‌ಔಟ್‌ ಪ್ರಮಾಣ ಹೊಂದಿರುವ ರಾಜ್ಯವಾಗಿ ಮುಂದುವರಿದಿದೆ. ಈ ಮಾಹಿತಿ ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾದ ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಂ ಫಾರ್ ಎಜುಕೇಶನ್ ಪ್ಲಸ್ (UDISE+) 2025-26ರ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

2025-26ರ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ 9 ಮತ್ತು 10ನೇ ತರಗತಿಯ 13.9% ಬಾಲಕಿಯರು ಶಾಲೆ ತೊರೆದಿದ್ದಾರೆ. ಇದು ರಾಷ್ಟ್ರದ ಸರಾಸರಿ 8%ಕ್ಕಿಂತ ಬಹಳ ಹೆಚ್ಚಾಗಿದೆ. ರಾಜ್ಯದಲ್ಲಿ ಈ ಪ್ರಮಾಣ 2023-24ರಲ್ಲಿ 19.6%, 2024-25ರಲ್ಲಿ 14.6% ಇದ್ದು, ಇದೀಗ 13.9%ಕ್ಕೆ ಇಳಿದಿದ್ದರೂ, ದೇಶದ ದೊಡ್ಡ ರಾಜ್ಯಗಳಲ್ಲಿ ಅತಿ ಹೆಚ್ಚು ಡ್ರಾಪ್‌ಔಟ್‌ ಪ್ರಮಾಣ ಹೊಂದಿರುವ ರಾಜ್ಯ ಎಂಬ ಸ್ಥಾನದಿಂದ ಹೊರಬಂದಿಲ್ಲ.

ಇದೇ ಅವಧಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರೌಢಶಾಲಾ ಹಂತದ ಬಾಲಕಿಯರ ಡ್ರಾಪ್‌ಔಟ್‌ ಪ್ರಮಾಣ ಸತತವಾಗಿ ಇಳಿಕೆಯಾಗಿದೆ. 2023-24ರಲ್ಲಿ 12.6% ಇದ್ದದ್ದು, 2024-25ರಲ್ಲಿ 9.6% ಹಾಗೂ 2025-26ರಲ್ಲಿ 8%ಕ್ಕೆ ಇಳಿದಿದೆ. ಇದರಿಂದ ಇತರ ರಾಜ್ಯಗಳ ಪ್ರಗತಿಗೆ ಹೋಲಿಸಿದರೆ ಕರ್ನಾಟಕದ ಸುಧಾರಣೆಯ ವೇಗ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗಿದೆ.

ಈ ವಿಭಾಗದಲ್ಲಿ 15.6% ಡ್ರಾಪ್‌ಔಟ್‌ ಪ್ರಮಾಣದೊಂದಿಗೆ ಕೇಂದ್ರಾಡಳಿತ ಪ್ರದೇಶ ಲಡಾಖ್ ದೇಶದಲ್ಲೇ ಅತಿ ಹೆಚ್ಚು ಡ್ರಾಪ್‌ಔಟ್‌ ಹೊಂದಿದೆ.

2023-24ರಲ್ಲಿ 25.1% ಎಂಬ ಆತಂಕಕಾರಿ ಡ್ರಾಪ್‌ಔಟ್‌ ಪ್ರಮಾಣ ದಾಖಲಿಸಿದ್ದ ಬಿಹಾರ, 2025-26ರಲ್ಲಿ ಅದನ್ನು 9.1%ಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದೆ.

ಉತ್ತರ ಪ್ರದೇಶದಲ್ಲಿ 2023-24 ಹಾಗೂ 2025-26ರಲ್ಲಿ 7.3% ಡ್ರಾಪ್‌ಔಟ್‌ ಪ್ರಮಾಣ ದಾಖಲಾಗಿದ್ದು, 2024-25ರಲ್ಲಿ ಅದು 5.1%ಕ್ಕೆ ಇಳಿದಿತ್ತು.

ಪ್ರಮುಖ ರಾಜ್ಯಗಳ ಪೈಕಿ ಅಸ್ಸಾಂ ಕೂಡ 13.9% ಡ್ರಾಪ್‌ಔಟ್‌ ಪ್ರಮಾಣದೊಂದಿಗೆ ಕರ್ನಾಟಕದ ಮಟ್ಟದಲ್ಲೇ ಇದ್ದರೆ, ಗುಜರಾತ್ 13.3% ನಂತರದ ಸ್ಥಾನದಲ್ಲಿದೆ.

ಇದಕ್ಕೆ ವಿರುದ್ಧವಾಗಿ, ಕೇರಳ (3%), ತಮಿಳುನಾಡು (3.2%) ಹಾಗೂ ಹರಿಯಾಣ (3.8%) ಪ್ರೌಢಶಾಲಾ ಹಂತದಲ್ಲಿ ಬಾಲಕಿಯರ ಅತಿ ಕಡಿಮೆ ಡ್ರಾಪ್‌ಔಟ್‌ ಪ್ರಮಾಣ ದಾಖಲಿಸಿದ ರಾಜ್ಯಗಳಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೇಕೆದಾಟು ಯೋಜನೆಗೆ ಸಿಕ್ಕಿತು ಕೇಂದ್ರದ ಬಲ; ಕರ್ನಾಟಕಕ್ಕೆ ಕಾನೂನುಬದ್ಧ ಹಕ್ಕಿದೆ, ತಮಿಳುನಾಡಿನ ಸಮ್ಮತಿ ಅಗತ್ಯವೇ ಇಲ್ಲ ಎಂದ ಜಲಶಕ್ತಿ ಸಚಿವಾಲಯ

ಮರಳು ಮಾಫಿಯಾ ಹೆಡೆಮುರಿ ಕಟ್ಟಲು ಸರ್ಕಾರ ನಿರ್ಧಾರ; ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಕ್ಕೆ ಮುಂದು, ಕಣ್ಮುಚ್ಚಿ ಕೂರುವ ಪೊಲೀಸರಿಗೂ ತಟ್ಟಲಿದೆ ಬಿಸಿ..!

VB-G RAM G ಯೋಜನೆಗೆ ಹಣದ ಕೊರತೆಯೇ ಇಲ್ಲ, ಗ್ರಾಮೀಣ ಉದ್ಯೋಗಕ್ಕೆ 2,900 ಕೋಟಿ ರೂ. ಬಿಡುಗಡೆ: ರಾಜ್ಯ ಸರ್ಕಾರ

ಮೇಕೆದಾಟು ಯೋಜನೆಗೆ ಸಮ್ಮತಿ ಅಗತ್ಯವೇ ಇಲ್ಲ: ಕರ್ನಾಟಕದ ಹಕ್ಕು ಪುನರುಚ್ಚರಿಸಿದ ಕೇಂದ್ರ ಸರ್ಕಾರ ಡಿಕೆಶಿ ಧನ್ಯವಾದ

ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ; ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ದ್ರೋಹ ಮಾಡಿದೆ: ಆರ್. ಅಶೋಕ್ ಆರೋಪ