ಯಾದಗಿರಿ: ಯಾದಗಿರಿಯ ವಡಗೇರ ತಾಲೂಕಿನ ಬಸವನಗರ ಬಳಿಯಲ್ಲಿರುವ ಕ್ವಾರಿಗೆ ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲು ಜಾರಿಬಿದ್ದು ಇಬ್ಬರು ಬಾಲಕಿಯರೂ ಸೇರಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತರನ್ನು 35 ವರ್ಷದ ಗುಂಡಮ್ಮ, 11 ವರ್ಷದ ಸುಜಾತಾ ಮತ್ತು 9 ವರ್ಷದ ಶಿವಕಾಂತಾ ಎಂದು ಗುರುತಿಸಲಾಗಿದೆ.
ಬಟ್ಟೆ ತೊಳೆಯುವಾಗ ಕ್ವಾರಿಗೆ ಇಬ್ಬರು ಬಾಲಕಿಯರು ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಗುಂಡಮ್ಮ ತನ್ನದೇ ಸೀರೆಯನ್ನು ಕೊಟ್ಟಿದ್ದಾರೆ. ನೀರಿನಿಂದ ಮೇಲೆ ಬರುವ ಆತುರದಲ್ಲಿ ಬಾಲಕಿಯರು ಸೀರೆಯನ್ನು ಜೋರಾಗಿ ಎಳೆದಿದ್ದರಿಂದ ಗುಂಡಮ್ಮ ಸಹ ನೀರಿಗೆ ಬಿದ್ದಿದ್ದು ಮೂವರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ವಡಗೇರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.