ಹೈದರಾಬಾದ್ ಯುವಕ ಅಶಿಶ್ ಕುಮಾರ್ 
ರಾಜ್ಯ

Covered 82 km in just 72 minutes': ಬೆಂಗಳೂರಿನಲ್ಲಿ ಈ ರೀತಿ ಸುತ್ತಾಡಲು ಇನ್ನೂ 10 ವರ್ಷ ಬೇಕು- ಹೈದರಾಬಾದ್ ಯುವಕನ ಪೋಸ್ಟ್ ವೈರಲ್! ತೀವ್ರ ಚರ್ಚೆ

ಈ ಸಾಮಾಜಿಕ ಮಾಧ್ಯಮ ಪೋಸ್ಟ್ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಹೈದರಾಬಾದ್‌ನ ಮೂಲಸೌಕರ್ಯಕ್ಕೆ ಹೊಂದಿಕೆಯಾಗಲು ಬೆಂಗಳೂರಿಗೆ "ಕನಿಷ್ಠ 10 ವರ್ಷಗಳ ಅಭಿವೃದ್ಧಿ ಅಗತ್ಯವಿದೆ" ಎಂದು ಬಳಕೆದಾರರು ಹೇಳಿದ್ದಾರೆ.

ಬೆಂಗಳೂರು: ಕೇವಲ 72 ನಿಮಿಷಗಳಲ್ಲಿ ನಗರದಲ್ಲಿ 82 ಕಿ.ಮೀ ಸುತ್ತಾಡಿದ್ದೇನೆ ಎಂದು ಹೈದರಾಬಾದಿನ ಯುವಕನೊಬ್ಬ ಮಾಡಿರುವ ಪೋಸ್ಟ್ ವೈರಲ್ ಆಗಿದ್ದು, ಬೆಂಗಳೂರಿನ ಮೂಲಸೌಕರ್ಯ ಕುರಿತು ಟೀಕಿಸಿದ್ದಾರೆ.

ಸಂಚಾರ ದಟ್ಟಣೆ ಮತ್ತು ನಗರ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ದೀರ್ಘಕಾಲದ ಪೈಪೋಟಿಯ ನಡುವೆ ಈ ಸಾಮಾಜಿಕ ಮಾಧ್ಯಮ ಪೋಸ್ಟ್ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಹೈದರಾಬಾದ್‌ನ ಮೂಲಸೌಕರ್ಯಕ್ಕೆ ಹೊಂದಿಕೆಯಾಗಲು ಬೆಂಗಳೂರಿಗೆ "ಕನಿಷ್ಠ 10 ವರ್ಷಗಳ ಅಭಿವೃದ್ಧಿ ಅಗತ್ಯವಿದೆ" ಎಂದು ಬಳಕೆದಾರರು ಹೇಳಿದ್ದಾರೆ.

ಆಶಿಶ್ ಕುಮಾರ್ , ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಗೂಗಲ್ ನಕ್ಷೆಗಳ ನ್ಯಾವಿಗೇಷನ್ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ಹೈದರಾಬಾದ್‌ನ ಔಟರ್ ರಿಂಗ್ ರಸ್ತೆಯಲ್ಲಿ ಕೇವಲ 72 ನಿಮಿಷಗಳಲ್ಲಿ 82 ಕಿ.ಮೀ ಕ್ರಮಿಸಿದ್ದೇನೆ. ಆದರೆ ಬೆಂಗಳೂರಿನಲ್ಲಿ ಇದೇ ರೀತಿ ಸಂಚರಿಸುವುದು ಪ್ರಸ್ತುತ ಅಸಾಧ್ಯ ಎಂದು ಬರೆದುಕೊಂಡಿದ್ದಾರೆ.

"ಬೆಂಗಳೂರಿನಲ್ಲಿ 1 ಗಂಟೆ 12 ನಿಮಿಷಗಳಲ್ಲಿ 82 ಕಿ.ಮೀ ಕ್ರಮಿಸಲು ಕನಿಷ್ಠ 10 ವರ್ಷಗಳ ಅಭಿವೃದ್ಧಿ ಅಗತ್ಯವಿದೆ" ಎಂದು ಆತ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 3.57 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 1,400 ಕ್ಕೂ ಹೆಚ್ಚು ಲೈಕ್‌ ಬಂದಿವೆ.

ಹೈದರಾಬಾದ್ ಉತ್ತಮ ಮೂಲಸೌಕರ್ಯವನ್ನು ಹೊಂದಿದೆ. ಬೆಂಗಳೂರಿನ ಸಂಚಾರ ಪ್ರತಿದಿನ ಹದಗೆಡುತ್ತಿದೆ. ಕೆಲವು ಕಿಲೋಮೀಟರ್ ದೂರ ಸಂಚರಿಸಲು ಕನಿಷ್ಠ 1 ಗಂಟೆ ಬೇಕಾಗುತ್ತದೆ. ಎಲ್ಲೆಡೆ ಗುಂಡಿಗಳಿವೆ. ಹೈದರಾಬಾದ್ ಅದ್ಭುತ ಕೆಲಸ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

ಅದು ಸರಾಸರಿ ಸರಾಸರಿ 68 ಕಿಮೀ ಗಂಟೆಗೆ? ಹೌದು, ಶೀಘ್ರದಲ್ಲೇ ಆಗುವುದಿಲ್ಲ. ಮಧ್ಯರಾತ್ರಿಯಲ್ಲಿ 44 ವೇಗದ ಮಿತಿ ಅತ್ಯುತ್ತಮ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಆದಾಗ್ಯೂ ಇತರ ಬಳಕೆದಾರರು ಹೈದರಾಬಾದ್ ಯುವಕನ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದು, ಬೆಂಗಳೂರಿನ ರಸ್ತೆ ತೋರಿಸುವ Google Maps ನ್ಯಾವಿಗೇಷನ್ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಪ್ರಧಾನ್ ರಾಜೀನಾಮೆಯಿಂದ ಭಾರತ ಅಸ್ಥಿರಗೊಳಿಸುವ ವಿದೇಶಿ ಶಕ್ತಿಗಳ ಸಂಚು ವಿಫಲ': ಕೈಲಾಶ್ ವಿಜಯವರ್ಗೀಯ

ಭಾರತದಲ್ಲಿ ಮುಸ್ಲಿಮರು PM, CM ಆಗದಿರುವುದಕ್ಕೆ ಕಾರಣ ಏನು ಗೊತ್ತ? Owaisi ಮುಸ್ಲಿಮರ ದೊಡ್ಡ ಶತ್ರು: ಮೌಲಾನಾ ಸಾಜಿದ್

ಅಖಿಲೇಶ್ ಯಾದವ್‌ಗೆ ಅಸಾದುದ್ದೀನ್ ಓವೈಸಿಯಿಂದ ಯುಪಿ ಆಫರ್; Friend Request ಕಳಿಸಿದ್ದಾರೆ- ಬಿಜೆಪಿ ವ್ಯಂಗ್ಯ!

ಪ್ರಶ್ನೆ ಪತ್ರಿಕೆ ಸೋರಿಕೆ: ಪಂಜಾಬ್ ಶಿಕ್ಷಣ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ; ಏನೂ ಆಗೇ ಇಲ್ಲ- ಸಿಎಂ ಭಗವಂತ್ ಮಾನ್

ಸ್ಕ್ವಾಷ್‌ನಲ್ಲಿ ಇತಿಹಾಸ ಸೃಷ್ಟಿ: ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್ ಗರಿ ಮುಡಿಗೇರಿಸಿಕೊಂಡ ಅನಹತ್ ಸಿಂಗ್, PM ಮೋದಿ ಅಭಿನಂದನೆ!