ಪ್ರಿಯಾಂಕ್ ಖರ್ಗೆ ಹಾಗೂ ಚಲನ್ 
ರಾಜ್ಯ

Mr. ಪ್ರಿಯಾಂಕ್ ಖರ್ಗೆ, ಸೀಟ್‌ಬೆಲ್ಟ್‌, ವೇಗದ ಮಿತಿ ನಿಮಗೆ ಅನ್ವಯಿಸುವುದಿಲ್ಲವೇ?

ನಿಮ್ಮ ವಾಹನದ ಮೇಲೆ ಒಟ್ಟು 2,500 ರೂ. ಮೊತ್ತದ 4 ಚಲನ್‌ಗಳು ಬಾಕಿ ಉಳಿದಿರುವುದರಿಂದ, ಈಗ ಶೇ. 50 ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಲು ಮತ್ತು ನಿಮ್ಮ ಬಾಕಿಗಳನ್ನು ಆದಷ್ಟು ಬೇಗ ಪಾವತಿಸುವಂತೆ ನಾವು ಬಲವಾಗಿ ಸೂಚಿಸುತ್ತೇವೆ.

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, Mr. ಖರ್ಗೆ, ಸೀಟ್‌ಬೆಲ್ಟ್‌, ವೇಗದ ಮಿತಿ ನಿಮಗೆ ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿದೆ.

ಪ್ರಿಯಾಂಕ್ ಖರ್ಗೆ ಅವರ ಕಾರು ಸಂಚಾರಿ ನಿಯಮ ಉಲ್ಲಂಘಿಸಿರುವ ಚಲನ್ ಅನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಕರ್ನಾಟಕ, ಪ್ರಿಯಾಂಕ್ ಖರ್ಗೆ ಅವರೇ ಸಂಚಾರ ನಿಯಮಗಳು ರಸ್ತೆಯಲ್ಲಿರುವ ಪ್ರತಿಯೊಬ್ಬರಿಗೂ ನಿಜವಾಗಿಯೂ ಜೀವನಾಡಿಳಾಗಿವೆ ಎಂಬ ನಿಮ್ಮ ಮಾತನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ.

ಆದರೆ... ಸೀಟ್‌ಬೆಲ್ಟ್‌ ಮತ್ತು ವೇಗದ ಮಿತಿ ನಿಮಗೆ ಅನ್ವಯಿಸುವುದಿಲ್ಲವೇ, ಖರ್ಗೆ ಅವರೇ? ನಿಮ್ಮ ವಾಹನ, KA42 GA 0099, ಅತೀ ವೇಗವಾಗಿ ಚಲಿಸುವ ಮೂಲಕ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದೆ! ಎಂದು ಬಿಜೆಪಿ ತಿರುಗೇಟು ನೀಡಿದೆ.

ನಿಮ್ಮ ವಾಹನದ ಮೇಲೆ ಒಟ್ಟು 2,500 ರೂ. ಮೊತ್ತದ 4 ಚಲನ್‌ಗಳು ಬಾಕಿ ಉಳಿದಿರುವುದರಿಂದ, ಈಗ ಶೇ. 50 ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಲು ಮತ್ತು ನಿಮ್ಮ ಬಾಕಿಗಳನ್ನು ಆದಷ್ಟು ಬೇಗ ಪಾವತಿಸುವಂತೆ ನಾವು ಬಲವಾಗಿ ಸೂಚಿಸುತ್ತೇವೆ ಎಂದು ಬಿಜೆಪಿ ಪೋಸ್ಟ್ ಮಾಡಿದೆ.

ಇತ್ತೀಚಿಗೆ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ, ಸಂಚಾರ ನಿಯಮಗಳು ಕೇವಲ ರಸ್ತೆಯ ಮೇಲೆ ಇರುವ ಗೆರೆಗಳು ಮಾತ್ರವಲ್ಲ; ಅವು ಪ್ರತಿಯೊಬ್ಬರೂ ನಿಮ್ಮೊಂದಿಗೆ ಹಂಚಿಕೊಳ್ಳುವ ಜೀವನಾಡಿ. ಒಂದು ಕ್ಷಣದ ನಿರ್ಲಕ್ಷ್ಯವು ವರ್ಷಗಳ ಕನಸುಗಳನ್ನು ನುಚ್ಚುನೂರಾಗಿಸಬಹುದು. ನಿಮ್ಮದಷ್ಟೇ ಅಲ್ಲ, ಬೇರೆಯವರದ್ದೂ ಕೂಡ. ಹಳೆಯ ಪ್ರಮಾದಗಳನ್ನು ಸರಿಪಡಿಸಿಕೊಳ್ಳಲು ಇದು ನಿಮಗೆ ಮತ್ತೊಂದು ಅವಕಾಶ. ಬಾಕಿ ಇರುವ ಎಲ್ಲಾ ಚಲನ್‌ಗಳನ್ನು 50% ರಿಯಾಯಿತಿಯಲ್ಲಿ ಪಾವತಿಸಿ, 100% ಜವಾಬ್ದಾರಿಯುತ ಚಾಲನೆಗೆ ಬದ್ಧರಾಗಿ ಎಂದು ಪೋಸ್ಟ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ- ಸ್ವಾತಂತ್ರ್ಯ ದಿನದ ಹಿನ್ನೆಲೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮುರ್ಮು ಮಾತು

ಬೆಂಗಳೂರು: ಟೆಕ್ಕಿ ಪತ್ನಿ ಹತ್ಯೆಗೈದು ತಾನೂ ನೇಣಿಗೆ ಶರಣಾದ ಇಂಜಿನಿಯರ್; ತಾಯಿಗೆ ಕಳಿಸಿದ್ದ ವಾಯ್ಸ್ ಮೆಸೇಜ್‌ನಲ್ಲಿ ಸ್ಫೋಟಕ ಕಾರಣ ಬಹಿರಂಗ!

ರಾಜ್ಯ ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್: ವೇತನ ಹಿಂಬಾಕಿ ಬಿಡುಗಡೆ

ಸಚಿವ ಜಮೀರ್ ಅಹ್ಮದ್ ಧ್ವಜಾರೋಹಣ ಮಾಡದಷ್ಟು ದೊಡ್ಡವರೇ? ವಿಧಾನಸಭೆಯಲ್ಲಿ ಬಿಜೆಪಿ ಪ್ರತಿಭಟನೆ! ಸಚಿವ ಸ್ಥಾನದಿಂದ ವಜಾಕ್ಕೆ ಒತ್ತಾಯ

ಸರ್ಕಾರಿ ಜಾಗದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ ಮಸೂದೆ: RSSಗೆ ಕಡಿವಾಣ? ಕಾಂಗ್ರೆಸ್ - ಬಿಜೆಪಿ ನಡುವೆ ವಾಕ್ಸಮರ!