ಆರೋಪಿ ಕೆನ್ನೆತ್ ಬಂಧನ 
ರಾಜ್ಯ

ಕೆ ಆರ್ ಪುರ ತ್ರಿವಳಿ ಕೊ*ಲೆ ಪ್ರಕರಣ: ಕೊನೆಗೂ ಪ್ರಿಯಕರ ಕೆನ್ನೆತ್ ಬಂಧನ, ಆರೋಪಿ ಶ್ವೇತಾಗೆ 7 ದಿನ ಪೊಲೀಸ್ ಕಸ್ಟಡಿ

ಕೆಆರ್ ಪುರಂನಲ್ಲಿ ಸ್ವಂತ ತಂದೆ-ತಾಯಿ ಮತ್ತು ತಂಗಿಯನ್ನು ಕೊಂದು ಪರಾರಿಯಾಗಿದ್ದ ಶ್ವೇತಾಳನ್ನು ಬಂಧಿಸಿದ ಮಾರನೇ ದಿನವೇ ಪೊಲೀಸರು ಆಕೆಯ ಪ್ರಿಯಕರ ಕೆನ್ನೆತ್ ನನ್ನು ಕೂಡ ಬಂಧಿಸಿದ್ದಾರೆ.

ಬೆಂಗಳೂರು: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಕೆಆರ್ ಪುರಂ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು 2ನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಶ್ವೇತಾಳ ಪ್ರಿಯಕರ ಕೆನ್ನೆತ್ ನನ್ನು ಬಂಧಿಸಿದ್ದಾರೆ.

ಕೆಆರ್ ಪುರಂನಲ್ಲಿ ಸ್ವಂತ ತಂದೆ-ತಾಯಿ ಮತ್ತು ತಂಗಿಯನ್ನು ಕೊಂದು ಪರಾರಿಯಾಗಿದ್ದ ಶ್ವೇತಾಳನ್ನು ಬಂಧಿಸಿದ ಮಾರನೇ ದಿನವೇ ಪೊಲೀಸರು ಆಕೆಯ ಪ್ರಿಯಕರ ಕೆನ್ನೆತ್ ನನ್ನು ಕೂಡ ಬಂಧಿಸಿದ್ದಾರೆ.

ಘಟನೆ ಬಳಿಕ ಇಬ್ಬರೂ ಪುದುಚೇರಿಗೆ ಪರಾರಿಯಾಗಿ ಅಲ್ಲಿ ಬೇರೆ ಬೇರೆಯಾಗಿ ತಲೆಮರೆಸಿಕೊಂಡಿದ್ದರು. ಇದೀಗ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಶ್ವೇತಾಳನ್ನು ಬಂಧಿಸಿದ್ದ ಪೊಲೀಸರು ಆಕೆಯನ್ನು 47ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆಕೆಯನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣದ ಹಲವು ನಿಗೂಢ ಅಂಶಗಳನ್ನು ಭೇದಿಸಲು ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

ತಲೆಮರಿಸಿಕೊಂಡಿದ್ದ ಕೆನೆತ್ ಬಂಧನಕ್ಕಾಗಿ 3 ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಪುದುಚೇರಿ ಹಾಗೂ ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರೆದಿತ್ತು. ಇದೀಗ ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

6 ವಿಶೇಷ ತಂಡ ರಚನೆ

ಇನ್ನು ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಕೆ.ಆರ್.ಪುರ ಪೊಲೀಸರು ಒಟ್ಟು 6 ವಿಶೇಷ ತಂಡಗಳನ್ನು ರಚಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತಾಂತ್ರಿಕ ಸಾಕ್ಷ್ಯಗಳು, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪ್ರಕರಣದ ಪ್ರತಿಯೊಂದು ಕೊಂಡಿಯನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

80 ಲಕ್ಷದ ದುಬಾರಿ ವಾಚ್ ಆರೋಪ: ಪ್ರದೀಪ್ ಈಶ್ವರ್ ಆರೋಪಕ್ಕೆ HDK ತಿರುಗೇಟು, ಅಂಬೇಡ್ಕರ್ ಚಿತ್ರವಿರುವ HMT ವಾಚ್ ಬೆಲೆಯೆಷ್ಟು?

ನಾನೇ ಸೀರೆ ಕಟ್ ಮಾಡಿ ವೈಶಾಖ್‌ ಮೃತದೇಹ ಕೆಳಗೆ ಇಳಿಸಿದ್ದೆ: ಪೊಲೀಸರ ಮುಂದೆ ನಟಿ ಕೃಷಿ ತಾಪಂಡ ಹೇಳಿದ್ದೇನು?

ಮತ್ತೆ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದಲ್ಲಿ ರೈಲು ಕೈಕೊಟ್ಟಿದ್ದೇಕೆ? ಅಸಲಿ ಕಾರಣ ಬಿಚ್ಚಿಟ್ಟ BMRCL

ಪಾಕಿಸ್ತಾನದಂತೆ ಭಾರತದಲ್ಲೂ ಬಹುಪತ್ನಿತ್ವ ಜಾರಿ ಮಾಡಿ: ವಿಧಾನಸಭೆಯಲ್ಲಿ NCP ಶಾಸಕಿ ಸನಾ ಮಲಿಕ್ ವಿವಾದಾತ್ಮಕ ಹೇಳಿಕೆ

ಡಿಕೆಶಿ ಜೊತೆ ಯಾವುದೇ ವ್ಯವಹಾರಿಕ, ಆತ್ಮೀಯತೆಯಿಲ್ಲ, ಅಪಪ್ರಚಾರ ಮಾಡುವವರಿಗೆ ದೇವರೇ ಬುದ್ಧಿ ಕೊಡಲಿ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ