ಬೆಂಗಳೂರಿನ ಧೋಬಿ ಘಾಟ್ ಗಳು 
ರಾಜ್ಯ

ಬೇಸಿಗೆಯಲ್ಲಿ ಬತ್ತಿದ ಬೋರ್ ವೆಲ್ ಗಳು: ಬೆಂಗಳೂರಿನ ಧೋಬಿ ಘಾಟ್ ಗಳಲ್ಲಿ ನೀರಿನ ಅಭಾವ!

ಹಲಸೂರು ಕೆರೆಯಲ್ಲಿರುವ ಧೋಬಿ ಘಾಟ್ 50 ವರ್ಷಗಳಿಗೂ ಹೆಚ್ಚು ಹಳೆಯದಾಗಿದೆ. ಇಲ್ಲಿ 110 ಕ್ಕೂ ಹೆಚ್ಚು ವಾಶರ್ ಮ್ಯಾನ್ ಗಳು ಮತ್ತು ಅವರ ಕುಟುಂಬಗಳನ್ನು ಹೊಂದಿದೆ.

ಬೆಂಗಳೂರು: ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದ್ದು, ನಗರದ ವಿವಿಧೆಡೆ ಇರುವ ಧೋಬಿ ಘಾಟ್‌ಗಳ ಬಾವಿಗಳಲ್ಲಿ ನೀರಿನ ಪ್ರಮಾಣ ತಗ್ಗಿದೆ. ಇದು ಹೆಚ್ಚಾಗಿ ಹೋಟೆಲ್‌ಗಳು, ಆಸ್ಪತ್ರೆಗಳು ಮತ್ತು ಖಾಸಗಿ ಡ್ರೈ ಕ್ಲೀನರ್‌ಗಳನ್ನು ಗ್ರಾಹಕರಾಗಿ ಹೊಂದಿರುವ ವಾಶರ್ ಮ್ಯಾನ್ ಗಳಿಗೆ ತೊಂದರೆಯಾಗಿ ಪರಿಣಮಿಸಿದೆ. ನಗರದಲ್ಲಿ 30ಕ್ಕೂ ಹೆಚ್ಚು ಧೋಬಿ ಘಾಟ್‌ಗಳಿವೆ. ಇವುಗಳಲ್ಲಿ ಹೆಚ್ಚಿನವು ಸಾಂಪ್ರದಾಯಿಕ ಬಾವಿಗಳು ಮತ್ತು ಬೋರ್‌ವೆಲ್‌ಗಳನ್ನು ಅವಲಂಬಿಸಿವೆ.

ಹಲಸೂರು ಕೆರೆಯಲ್ಲಿರುವ ಧೋಬಿ ಘಾಟ್ 50 ವರ್ಷಗಳಿಗೂ ಹೆಚ್ಚು ಹಳೆಯದಾಗಿದೆ. ಇಲ್ಲಿ 110 ಕ್ಕೂ ಹೆಚ್ಚು ವಾಶರ್ ಮ್ಯಾನ್ ಗಳು ಮತ್ತು ಅವರ ಕುಟುಂಬಗಳನ್ನು ಹೊಂದಿದೆ. ಹಲಸೂರು ಧೋಬಿಘಾಟ್ ಮಡಿವಾಳ ಸಂಘದ ಅಧ್ಯಕ್ಷ ಹರಿಕಿಶನ್ ಮಾತನಾಡಿ, ಹಲಸೂರು ಕೆರೆಯಲ್ಲಿ ನೀರಿನ ಲಭ್ಯತೆ ಇರುವುದರಿಂದ ನಾವುಗಳು ಹೆಚ್ಚಾಗಿ ಕೊಳವೆಬಾವಿ ಹಾಗೂ ಕೊಳವೆಬಾವಿಯನ್ನೇ ಅವಲಂಬಿಸಿರುತ್ತೇವೆ. ಆದರೆ ಈಗ ಬಾವಿಗಳಲ್ಲಿ ನೀರಿನ ಕೊರತೆಯಾಗಿದೆ.

ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪುನರ್ ಶ್ಚೇತನನ ಕ್ರಮದಿಂದ ಮುಂದಿನ ಎರಡು ತಿಂಗಳು ನೀರಿನ ಕೊರತೆಯಾಗಲಿದೆ. ಬೋರ್‌ವೆಲ್ ಸಂಪೂರ್ಣ ಬತ್ತದಿದ್ದರೂ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಬೇಸಿಗೆಯ ಈ ಮೂರು ತಿಂಗಳುಗಳಲ್ಲಿ ನಾವು ಪಾಳಿಯಲ್ಲಿ ಬಟ್ಟೆ ಒಗೆಯುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಅದೇ ರೀತಿ ಅಶೋಕನಗರ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ತೊಂದರೆ ಎದುರಿಸುತ್ತಿದೆ. ಏಪ್ರಿಲ್‌ನಲ್ಲಿ ನೀರಿನ ಅಭಾವ ಹೆಚ್ಚಾಗುವ ಹಿನ್ನೆಲೆಯಲ್ಲಿ ಒಂದು ದೊಡ್ಡ ಹಾಗೂ ಹಳೆಯ ಬಾವಿಯನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ.

ಸಂಘದ ಅಧ್ಯಕ್ಷ ಲೋಕೇಶ್ ಪಿ ಮಾತನಾಡಿ, ‘ಮೂರು ಬಾವಿಗಳಿದ್ದು, ಈಗಾಗಲೇ ಎರಡು ಬಾವಿಗಳಲ್ಲಿ 40 ಅಡಿಯಿಂದ 20 ಅಡಿ ನೀರಿನ ಮಟ್ಟ ಕುಸಿದಿದ್ದು, ಮೂರನೇ ಬಾವಿಯಲ್ಲಿ ಪ್ಲಾಸ್ಟಿಕ್ ಹಾಗೂ ಕಲುಷಿತ ನೀರು ಹಿಡಿದಿದೆ. ಅದರ ಪುನಶ್ಚೇತನಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಬೇಸಿಗೆ ಕಾಲದಲ್ಲಿ ಆಸ್ಪತ್ರೆಗಳು ಮತ್ತು ಹೋಟೆಲ್‌ಗಳಿಗೆ ಸಮಯೋಚಿತ ಸೇವೆಯನ್ನು ನೀಡುವುದು ನಮ್ಮ ದೊಡ್ಡ ಕಾಳಜಿಯಾಗಿದೆ. ಕೆಲವೊಮ್ಮೆ, ನೀರಿನ ಕೊರತೆಯಿಂದಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಅವರು ಹೇಳಿದರು.

ಬೆಂಗಳೂರಿನ ಧೋಬಿ ಘಾಟ್ ಗಳು

ತಿಮ್ಮಯ್ಯ ರಸ್ತೆಯ ಧೋಬಿ ಘಾಟ್‌ ವಾಷರ್‌ಮನ್‌ ಪರಮೇಶ್‌ ಮಾತನಾಡಿ, ‘ಕಳೆದ ಕೆಲ ವರ್ಷಗಳಿಂದ ಎರಡು ಬೋರ್‌ವೆಲ್‌ಗಳು ಸಂಪೂರ್ಣ ಬತ್ತಿ ಹೋಗಿವೆ. ಈಗ ಸಾಂಪ್ರದಾಯಿಕ ಬಾವಿಯನ್ನೇ ಅವಲಂಭಿಸಿದ್ದೇವೆ.ಬೇಸಿಗೆಯಲ್ಲಿ ಈ ನೀರೂ ಕಡಿಮೆಯಾಗಿದೆ. ಮುಂಗಾರಿನವರೆಗೆ ಉತ್ತಮ ವ್ಯಾಪಾರಕ್ಕಾಗಿ ಕಾಯುತ್ತೇವೆ.ಮುಂಗಾರು ವಿಫಲವಾದರೆ ನಮ್ಮ ವ್ಯಾಪಾರ ನನೆಗುದಿಗೆ ಬೀಳುತ್ತದೆ. ಇಲ್ಲಿ 53 ಕುಟುಂಬಗಳು ಜೀವನ ನಡೆಸುತ್ತಿವೆ ಎಂದು ತಿಳಿಸಿದರು.

ಆಧುನಿಕ ಲಾಂಡ್ರಿಗಳಿಗೆ ಲಾಭ: ಟಿಎನ್‌ಐಇ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಜಿ.ಡಿ.ಗೋಪಾಲ್, ನಮ್ಮ ಸಮುದಾಯ ಎದುರಿಸುತ್ತಿರುವ ಕಷ್ಟ ನಮಗೆ ಅರ್ಥವಾಗಿದೆ. ಅದಕ್ಕಾಗಿಯೇ ಆ ಸಮುದಾಯಕ್ಕೆ ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಕೋರಿದ್ದೆವು. ಅದರಂತೆ ಮಡಿವಾಳ ಸಮುದಾಯದವರಿಗೆ ಬೆಂಗಳೂರು ಹಾಗೂ ಮೈಸೂರಿನ ಧೋಬಿ ಘಾಟ್‌ಗಳಲ್ಲಿ ಆಧುನಿಕ ಲಾಂಡ್ರಿಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಯಂತ್ರಗಳ ಜೊತೆಗೆ, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಆಧುನಿಕ ಲಾಂಡ್ರಿಗಳನ್ನು ಸ್ಥಾಪಿಸಲು ಶೇ.5ರ ಬಡ್ಡಿದರದಲ್ಲಿ 5 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿರುವುದಾಗಿ ತಿಳಿಸಿದರು.

ಬೆಂಗಳೂರಿನ ಧೋಬಿ ಘಾಟ್ ಗಳು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ಸೀತಾಪುರದಲ್ಲಿ ವಿಚಿತ್ರ ಪ್ರಕರಣ: ಹಗಲು ಪ್ರೇಮಿ, ರಾತ್ರಿ ಗಂಡ ಬೇಕಂತೆ! ಇಬ್ಬರ ಜತೆ ಸಂಸಾರ ನಡೆಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ! Video

‘ಏನೇನ್ ಮಾಡ್ತಾರೋ ಗೊತ್ತಿಲ್ಲ’: Donald Trump ‘ಅನಿರೀಕ್ಷಿತ ವರ್ತನೆ’ ಬಗ್ಗೆ ಎಚ್ಚರಿಕೆ: ಮೋದಿ ಭೇಟಿ ಬಳಿಕ ಜಂಟಿ ಸುದ್ದಿಗೋಷ್ಠಿಗೆ ಭಾರತ ಹಿಂದೇಟು!

ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆ ಯಾವುದೇ ಚರ್ಚೆಯಿಲ್ಲದೇ ವಿಧಾನ ಪರಿಷತ್ತಿನಲ್ಲಿ ಎರಡು ವಿಧೇಯಕಗಳು ಪಾಸ್

Biggboss Kannada ಅಗ್ನಿಪರೀಕ್ಷೆ: ಗೆಟ್ ಔಟ್, ಇದೆಲ್ಲಾ ಬೇಡ ಬ್ರೋ; ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು, Video ವೈರಲ್!