ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್  
ರಾಜ್ಯ

ಹೊಸಪೇಟೆ ತುಂಗಭದ್ರಾ ಜಲಾಶಯಕ್ಕೆ ಡಿಸಿಎಂ ಡಿಕೆಶಿ ಭೇಟಿ: 33 ಹೊಸ ಕ್ರಸ್ಟ್‌ಗೇಟ್‌ ಅಳವಡಿಕೆ ವೀಕ್ಷಣೆ-Video

ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಹೊಸ ಗೇಟ್ ಅಳವಡಿಸಿದ ನಂತರ ಇದೇ ಮೊದಲ ಬಾರಿಗೆ ಅವರು ಡ್ಯಾಂಗೆ ಆಗಮಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಹೊಸ ಗೇಟ್ ಅಳವಡಿಸಿದ ನಂತರ ಇದೇ ಮೊದಲ ಬಾರಿಗೆ ಅವರು ಡ್ಯಾಂಗೆ ಆಗಮಿಸಿದ್ದಾರೆ.

ಪ್ರಾಯೋಗಿಕ ಪರೀಕ್ಷೆ ತೋರಿಸಿದ ಟಿಬಿ ಡ್ಯಾಂ ಅಧಿಕಾರಿಗಳು

ಜಲಾಶಯದ ಹೊಸ ಕ್ರಸ್ಟ್ ಗೇಟ್ ನಿರ್ಮಾಣ ಕಾಮಗಾರಿಯನ್ನು ಕೂಲಂಕಷವಾಗಿ ವೀಕ್ಷಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಟಿಬಿ ಡ್ಯಾಂ ಆಡಳಿತ ಮಂಡಳಿ ಅಧಿಕಾರಿಗಳು ಪ್ರಾಯೋಗಿಕ ಪರೀಕ್ಷೆಯನ್ನು ತೋರಿಸಿದರು.

ಎರಡು ವರ್ಷಗಳ ಹಿಂದೆ ಜಲಾಶಯದ 19ನೇ ನಂಬರಿನ ಕ್ರಸ್ಟ್ ಗೇಟ್ ಮುರಿದಿತ್ತು, ಈ ವೇಳೆ 19ನೇ ಕ್ರಸ್ಟ್ ಗೇಟ್ ನ್ನು ಮೇಲಕ್ಕೆ ಎತ್ತುವ ಮೂಲಕ ಗೇಟ್ ಕಾರ್ಯನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ಯಶಸ್ವಿಯಾಗಿ ಪೂರ್ಣಗೊಂಡ ಟಿಬಿ ಡ್ಯಾಂ ಗೇಟ್ ಅಳವಡಿಕೆ ಕಾರ್ಯ ನಡೆದಿತ್ತು.

ಡಿ.ಕೆ. ಶಿವಕುಮಾರ್ ಅವರು ಯುದ್ಧೋಪಾದಿಯಲ್ಲಿ ಹೊಸ ಗೇಟ್ ಅಳವಡಿಸುವ ಭರವಸೆ ನೀಡಿದ್ದರು. ಎಂಜಿನಿಯರ್‌ಗಳ ನಿರಂತರ ಪರಿಶ್ರಮದಿಂದಾಗಿ ಈ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳ ಜೊತೆ ಸಚಿವರಾದ ಎನ್.ಎಸ್. ಬೋಸರಾಜು ಮತ್ತು ಶಿವರಾಜ್ ತಂಗಡಗಿ ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Monsoon 2026: ಸಿಹಿಸುದ್ದಿ.. ಅವಧಿಗಿಂತ ಮೊದಲೇ ಅಪ್ಪಳಿಸಲಿದೆ ಮುಂಗಾರು ಮಳೆ; ಅಂಡಮಾನ್ ಮತ್ತು ಕೇರಳಕ್ಕೆ ಶೀಘ್ರ ಆಗಮನ: IMD

ಪೂರ್ವ ದೆಹಲಿ: ಅಪಾರ್ಟ್ ಮೆಂಟ್ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಜೀವ ದಹನ -Video

ಜೀವಕ್ಕೆ ಜೀವ ಅಂತ ಪ್ರೀತಿಸಿದ್ದ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಗಂಡ!

Shocking: ಅವಳಿಗೆ ನನ್ ಗಂಡ ಬೇಕು ಅಂದ್ರೆ, ನಂಗೂ ಅವಳ ಗಂಡ ಬೇಕು; ಪತಿಯರ ಬದಲಿಸಲು ಕೇಳಿದ ಅಕ್ಕ-ತಂಗಿ, ಬೇಸ್ತು ಬಿದ್ದ ನ್ಯಾಯಮೂರ್ತಿ! ಆಗಿದ್ದೇನು?

ಶೃಂಗೇರಿಯಲ್ಲಿ ಅಂಚೆ ಮತಗಳ ಮರು ಎಣಿಕೆಯಲ್ಲಿ ಮಹತ್ವದ ತಿರುವು, ಡಿ ಎನ್ ಜೀವರಾಜ್ ಗೆ ಮುನ್ನಡೆ

SCROLL FOR NEXT