HD ಕುಮಾರಸ್ವಾಮಿ Express photo: Nagaraja Gadekal
ರಾಜ್ಯ

EV ವಾಹನ ಚಾರ್ಜಿಂಗ್‌ಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಕುಮಾರಸ್ವಾಮಿ ಅನುಮೋದನೆ; ರಾಜ್ಯಕ್ಕೆ ಸಿಕ್ಕಿದ್ದೆಷ್ಟು?

ಇಲ್ಲಿಯವರೆಗೆ, ವಿವಿಧ ರಾಜ್ಯಗಳು ಮತ್ತು ಸಿಪಿಎಸ್‌ಯುಗಳಲ್ಲಿ 4,874 ವಿದ್ಯುತ್ ವಾಹನ ಚಾರ್ಜರ್‌ಗಳ ಸ್ಥಾಪನೆಯನ್ನು ಒಳಗೊಂಡಂತೆ ಒಟ್ಟು 50,386 ಕೋಟಿ ರೂ. ವೆಚ್ಚದ ವಿದ್ಯುತ್ ವಾಹನ ಚಾರ್ಜಿಂಗ್ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ ಎಂದರು.

ಬೆಂಗಳೂರು: ಕರ್ನಾಟಕಕ್ಕೆ 1,232.6 ಕೋಟಿ ರೂ. ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಟ್ಟು 50,386 ಕೋಟಿ ರೂ.ಗಳ ವಿದ್ಯುತ್ ವಾಹನ ಚಾರ್ಜಿಂಗ್ ಮೂಲಸೌಕರ್ಯಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ ಅನುಮೋದನೆ ನೀಡಿದ್ದಾರೆ.

ಬೃಹತ್ ಕೈಗಾರಿಕಾ ಸಚಿವಾಲಯವು, ದೇಶದ ವಾಹನ ವಲಯವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ರಾಷ್ಟ್ರವ್ಯಾಪಿ ವಿದ್ಯುತ್ ವಾಹನ ಚಾರ್ಜಿಂಗ್ ಮೂಲಸೌಕರ್ಯ ಕುರಿತು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ, ಕರ್ನಾಟಕಕ್ಕೆ 1,232.6 ಕೋಟಿ ರೂ. ವೆಚ್ಚದಲ್ಲಿ 1,243 ವಿದ್ಯುತ್ ವಾಹನ ಚಾರ್ಜರ್‌ಗಳನ್ನು ಒಳಗೊಂಡ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿರುವುದಾಗಿ ಘೋಷಿಸಲು ನನಗೆ ಸಂತೋಷವಾಗುತ್ತಿದೆ ಎಂದರು.

ಇಲ್ಲಿಯವರೆಗೆ, ವಿವಿಧ ರಾಜ್ಯಗಳು ಮತ್ತು ಸಿಪಿಎಸ್‌ಯುಗಳಲ್ಲಿ 4,874 ವಿದ್ಯುತ್ ವಾಹನ ಚಾರ್ಜರ್‌ಗಳ ಸ್ಥಾಪನೆಯನ್ನು ಒಳಗೊಂಡಂತೆ ಒಟ್ಟು 50,386 ಕೋಟಿ ರೂ. ವೆಚ್ಚದ ವಿದ್ಯುತ್ ವಾಹನ ಚಾರ್ಜಿಂಗ್ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ ಎಂದರು.

ಮೊದಲ ಹಂತದಲ್ಲಿ ಬಿಡುಗಡೆಯಾದ ಮೊತ್ತ 2,000 ಕೋಟಿ ರೂ. ಆಗಿದ್ದು, ಎರಡನೇ ಹಂತದಲ್ಲಿ, ವಿದ್ಯುತ್ ಚಾಲಿತ ವಾಹನಗಳು ಮತ್ತು ಚಾರ್ಜಿಂಗ್ ಕೇಂದ್ರಗಳಿಗೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಿಗೂ ಸಂಪೂರ್ಣವಾಗಿ ಮತ್ತು ವಿಶ್ವಾಸದಿಂದ ಬೆಂಬಲ ನೀಡುತ್ತೇವೆ ಎಂದು ನನ್ನ ಇಲಾಖೆಯಿಂದ ನಾನು ಭರವಸೆ ನೀಡುತ್ತೇನೆ" ಎಂದು ಕೇಂದ್ರ ಸಚಿವರು ಹೇಳಿದರು.

ಭಾರತದ ಆಟೋಮೋಟಿವ್ ವಲಯವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಭಾರೀ ಕೈಗಾರಿಕಾ ಸಚಿವಾಲಯವು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಕೊನೆಗೂ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ; ಜುಲೈ 1 ರಿಂದ ಜಾರಿ

NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ವ್ಯಕ್ತಿಯೊಬ್ಬನ ಬಂಧನ; FIR ದಾಖಲಿಸಿದ CBI!

'ನಿಜ ಏನು ಅಂದ್ರೆ..': ಮೋದಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಕುರಿತು ನಟಿ Ramya ವ್ಯಂಗ್ಯ; ಹೇಳಿದ್ದೇನು?

ಕದನ ವಿರಾಮ ಉಲ್ಲಂಘಿಸಿ ಲೆಬನಾನ್ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ; 380 ಜನ ಸಾವು

'ಸನಾತನ ಧರ್ಮ ನಾಶ ಮಾಡಬೇಕು'- ಉದಯನಿಧಿ ಸ್ಟಾಲಿನ್; ಇತ್ತ ಕೊಲ್ಲೂರು ದೇಗುಲಕ್ಕೆ ತಾಯಿ ದುರ್ಗಾ ಸ್ಟಾಲಿನ್ ಭೇಟಿ! ಅಸಲೀಯತ್ತೇನು?

SCROLL FOR NEXT