ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ಭೇಟಿ ನೀಡಿ ಲಕ್ಕುಂಡಿ ಪ್ರದೇಶಕ್ಕೆ ಸೇರಿದ ಅಪರೂಪದ ಪುರಾತನ ವಸ್ತುಗಳ ಸಂಗ್ರಹವನ್ನು ಖುದ್ದಾಗಿ ಪರಿಶೀಲಿಸಿದರು.  
ರಾಜ್ಯ

ಲಕ್ಕುಂಡಿಯ ಅಮೂಲ್ಯ ಪಾರಂಪರಿಕ ವಸ್ತುಗಳನ್ನು ಮರಳಿ ತರಲು ರಾಜ್ಯ ಸರ್ಕಾರ ಪ್ರಯತ್ನ: ಸಚಿವ ಹೆಚ್ ಕೆ ಪಾಟೀಲ್

ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಅವರು ಭೇಟಿ ನೀಡಿ, ನಮ್ಮ ನಾಡಿನ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಪ್ರದೇಶಕ್ಕೆ ಸೇರಿದ ಅಪರೂಪದ ಪುರಾತನ ವಸ್ತುಗಳ ಸಂಗ್ರಹವನ್ನು ಖುದ್ದಾಗಿ ಪರಿಶೀಲಿಸಿದರು.

ಕರ್ನಾಟಕದ ಸಮೃದ್ಧ ನಾಗರಿಕತೆಯ ಪರಂಪರೆಯನ್ನು ಮರುಸ್ಥಾಪಿಸಿ ಸಂರಕ್ಷಿಸುವ ಉದ್ದೇಶದಿಂದ, ಐತಿಹಾಸಿಕ ಮಹತ್ವವುಳ್ಳ ಪಾರಂಪರಿಕ ವಸ್ತುಗಳನ್ನು ದೆಹಲಿಯ ರಾಷ್ಟ್ರೀಯ ಸಂಗ್ರಹಾಲಯದಿಂದ ಪ್ರಾಚೀನ ಐತಿಹಾಸಿಕ ಪಟ್ಟಣವಾದ ಲಕ್ಕುಂಡಿಗೆ ಮರಳಿ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ.

ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಅವರು ಭೇಟಿ ನೀಡಿ, ನಮ್ಮ ನಾಡಿನ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಪ್ರದೇಶಕ್ಕೆ ಸೇರಿದ ಅಪರೂಪದ ಪುರಾತನ ವಸ್ತುಗಳ ಸಂಗ್ರಹವನ್ನು ಖುದ್ದಾಗಿ ಪರಿಶೀಲಿಸಿದರು.

1976 ರ ಅಕ್ಟೋಬರ್ 16 ರಂದು ಡಿ.ಕೆ. ಹೆಬ್ಬೂರ್ ಮತ್ತು ಟಿ.ಕೆ. ನಾಯಕ್ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಹಸ್ತಾಂತರಿಸಿದ್ದ 150ಕ್ಕೂ ಹೆಚ್ಚು ಅಮೂಲ್ಯ ಕಲಾಕೃತಿಗಳು ಇಲ್ಲಿದ್ದು, ಪ್ರಾಚೀನ ಶಸ್ತ್ರಾಸ್ತ್ರಗಳು, ಅಪರೂಪದ ಚಿನ್ನ-ಬೆಳ್ಳಿ ನಾಣ್ಯಗಳು, ಸೂಕ್ಷ್ಮ ಕೆತ್ತನೆಯ ಆಭರಣಗಳು ಮತ್ತು ಐತಿಹಾಸಿಕ ಹಸ್ತಪ್ರತಿಗಳು ನಮ್ಮ ನಾಡಿನ ಭವ್ಯ ಇತಿಹಾಸವನ್ನು ಸಾರುವಂತಿವೆ.

ಲಾಕರ್‌ನಲ್ಲಿ ಸುರಕ್ಷಿತವಾಗಿರುವ ಈ 150ಕ್ಕೂ ಹೆಚ್ಚು ಅಪರೂಪದ ವಸ್ತುಗಳನ್ನು ಸಾರ್ವಜನಿಕರ ವೀಕ್ಷಣೆಗಾಗಿ ದೆಹಲಿಯಲ್ಲೇ ಪ್ರತ್ಯೇಕ ಗ್ಯಾಲರಿಯಲ್ಲಿ ಪ್ರದರ್ಶಿಸಲು ರಾಷ್ಟ್ರೀಯ ವಸ್ತುಸಂಗ್ರಹಾಲಯದೊಂದಿಗೆ ಅಗತ್ಯ ಸಮನ್ವಯ ಸಾಧಿಸುವುದು ಹಾಗೂ ಈ ಅಮೂಲ್ಯ ಕಲಾಕೃತಿಗಳನ್ನು ಶಾಶ್ವತವಾಗಿ ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ಲಕ್ಕುಂಡಿಗೆ ಮರಳಿ ತರಲು ಕೇಂದ್ರ ಸರ್ಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯೊಂದಿಗೆ ಅಧಿಕೃತ ಮಾತುಕತೆ ಹಾಗೂ ಕಾನೂನಾತ್ಮಕ ಪ್ರಕ್ರಿಯೆಗಳನ್ನು ತಕ್ಷಣವೇ ಪ್ರಾರಂಭಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸನ್ಮಾನ್ಯ ಸಚಿವರು ಹೇಳಿದರು.

ರಾಜ್ಯದ ಹೊರಗೆ ಸಂರಕ್ಷಿಸಲ್ಪಟ್ಟಿರುವ ಪ್ರಾದೇಶಿಕ ಮಹತ್ವದ ಪಾರಂಪರಿಕ ವಸ್ತುಗಳನ್ನು ಪುನಃ ಪಡೆಯಲು ಕರ್ನಾಟಕ ಸರ್ಕಾರ ಕೈಗೊಂಡಿರುವ ಸತತ ಪ್ರಯತ್ನಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ. ಲಕ್ಕುಂಡಿಗೆ ಸಂಬಂಧಿಸಿದ ಅಪರೂಪದ 150ಕ್ಕೂ ಹೆಚ್ಚು ವಸ್ತುಗಳ ಸಂಗ್ರಹವನ್ನು ಪರಿಶೀಲಿಸಿದ ಸಚಿವರು ಅವುಗಳ ಸಂರಕ್ಷಣೆ, ದಾಖಲೆ ನಿರ್ವಹಣೆ ಹಾಗೂ ಸಾರ್ವಜನಿಕ ಪ್ರದರ್ಶನದ ಸಾಧ್ಯತೆಗಳ ಬಗ್ಗೆ ಸಂಗ್ರಹಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಕರ್ನಾಟಕದ ದೃಷ್ಟಿಯಲ್ಲಿ, ಇದು ಕೇವಲ ಸಂಗ್ರಹಾಲಯದ ವಸ್ತುಗಳ ಪ್ರಶ್ನೆಯಲ್ಲ; ಐತಿಹಾಸಿಕ ಪಟ್ಟಣವೊಂದನ್ನು ಅದರದೇ ಭೂತಕಾಲದ ಭವ್ಯ ಅವಶೇಷಗಳೊಂದಿಗೆ ಮತ್ತೆ ಸಂಪರ್ಕಿಸುವ ಪ್ರಯತ್ನವಾಗಿದೆ. ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿ, ದಕ್ಷಿಣ ಭಾರತದ ಅತ್ಯುತ್ತಮ ಕಲ್ಯಾಣ ಚಾಲುಕ್ಯ ವಾಸ್ತುಶಿಲ್ಪ ಮತ್ತು ಮಧ್ಯಯುಗೀನ ದೇವಾಲಯ ಶಿಲ್ಪಕಲೆಯ ಪ್ರಮುಖ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಇತಿಹಾಸಕಾರರು ಇದನ್ನು “ತೆರೆದ ಆಕಾಶದಡಿ ಇರುವ ಸಂಗ್ರಹಾಲಯ” ಎಂದು ವರ್ಣಿಸುತ್ತಾರೆ. ಇಲ್ಲಿ 10ನೇ ಶತಮಾನದಿಂದ 12ನೇ ಶತಮಾನದ ಅವಧಿಗೆ ಸೇರಿದ 50ಕ್ಕೂ ಹೆಚ್ಚು ದೇವಾಲಯಗಳು, ಪುಷ್ಕರಣಿಗಳು ಹಾಗೂ ಶಾಸನಗಳಿವೆ.

ಈ ಪ್ರದೇಶವು ಪಶ್ಚಿಮ ಚಾಲುಕ್ಯರು ಹಾಗೂ ನಂತರದ ವಂಶಗಳ ಆಡಳಿತದಲ್ಲಿ ಅಭಿವೃದ್ಧಿ ಹೊಂದಿ, ಕಲೆ, ವಿದ್ಯಾಭ್ಯಾಸ ಮತ್ತು ವ್ಯಾಪಾರದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿತು. ಲಕ್ಕುಂಡಿಯ ದೇವಾಲಯಗಳು ಸೂಕ್ಷ್ಮವಾದ ಮೃದುಕಲ್ಲಿನ ಕೆತ್ತನೆಗಳು, ವಿಶಿಷ್ಟ ಮೂರ್ತಿಶಿಲ್ಪ ಹಾಗೂ ನಂತರ ಹೊಯ್ಸಳ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಿದ ಆರಂಭಿಕ ವಾಸ್ತುಶೈಲಿಗಳ ಪ್ರಯೋಗಗಳಿಗಾಗಿ ಪ್ರಸಿದ್ಧವಾಗಿವೆ.

ಅದರ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಕಾಶಿ ವಿಶ್ವೇಶ್ವರ ದೇವಸ್ಥಾನ ಪ್ರಮುಖವಾಗಿದ್ದು, ಇದು ಚಾಲುಕ್ಯ ವಾಸ್ತುಶಿಲ್ಪದ ಅದ್ಭುತ ಕಲಾಕೃತಿಯೆಂದು ಪರಿಗಣಿಸಲಾಗಿದೆ. ಜೊತೆಗೆ, ಸುಧಾರಿತ ಮಧ್ಯಯುಗದ ಜಲ ನಿರ್ವಹಣಾ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಪ್ರಸಿದ್ಧ ಪುಷ್ಕರಣಿಗಳೂ ಲಕ್ಕುಂಡಿಯ ವೈಶಿಷ್ಟ್ಯವನ್ನು ಹೆಚ್ಚಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ ರೂ.3 ಏರಿಕೆ, 4 ವರ್ಷಗಳ ಬಳಿಕ ಇಂಧನ ದರ ಪರಿಷ್ಕರಣೆ..!

ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್: ಪೆಟ್ರೋಲ್-ಡೀಸೆಲ್ ಬಳಿಕ CNG ದರವೂ ಹೆಚ್ಚಳ..!

US-Iran war: ಒಪ್ಪಂದಕ್ಕೆ ಬಾರದಿದ್ದರೆ ಒಂದೇ ದಿನದಲ್ಲಿ ಅಂತ್ಯ ಖಚಿತ; ಇರಾನ್'ಗೆ ಅಮೆರಿಕಾ ಕಠಿಣ ಎಚ್ಚರಿಕೆ

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಬೀರ್, ವಿಸ್ಕಿ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ

ಹಿಜಾಬ್ ನಿಷೇಧ ಹಿಂಪಡೆದ ಸರ್ಕಾರ: ನ್ಯಾಯಾಂಗಕ್ಕೆ ಮಾಡಿದ ಅವಮಾನ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

SCROLL FOR NEXT