ನಿಶಾ-ಸಿಪಿ ಯೋಗೇಶ್ವರ್ 
ರಾಜ್ಯ

ನಿಶಾಳ ತಾಯಿಗೆ ಡಿವೋರ್ಸ್‌ ಕೊಟ್ಟು 25 ವರ್ಷವಾಯ್ತು, ಆಕೆಗೂ ನನಗೂ ಯಾವುದೇ ಸಂಬಂಧವಿಲ್ಲ: ಶಾಸಕ ಯೋಗೇಶ್ವರ್

ವೈಯಕ್ತಿಕ ಕಾರಣದಿಂದ ಈ ಬಾರಿ ಹಬ್ಬ ಮಾಡಿರ್ಲಿಲ್ಲ‌. ಈ ವಿಚಾರ ನಿಶಾಳಿಗೆ ಗೊತ್ತಿದ್ದೂ ಈ ರೀತಿ ಮಾಡಿದಳೋ ಅಥವಾ ಗೊತ್ತಿಲ್ಲದೆ ಮಾಡಿದ್ಲೋ ಗೊತ್ತಿಲ್ಲ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ನಾನು ಮಕ್ಕಳನ್ನ ನೋಡಿಯೇ ಕೊಂಡಿಲ್ಲ ಎನ್ನುವಂತೆ ಬಿಂಬಿತವಾಗಿದೆ.

ಬೆಂಗಳೂರು: ನಿಶಾಳ ತಾಯಿ ನನ್ನಿಂದ ಕಾನೂನು ಬದ್ದವಾಗಿ ವಿಚ್ಚೇದನ ಪಡೆದು 25 ವರ್ಷಗಳಾಗಿವೆ. ಆಕೆಗೂ ನನಗೂ ನನ್ನ ಕುಟುಂಬಕ್ಕೂ ಯಾವೂದೇ ಸಂಬಂಧವಿಲ್ಲ ಎಂದು ಶಾಸಕ ಯೋಗೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಕಳೆದ ವಾರ ಸಿ.ಪಿ.ಯೋಗೇಶ್ವರ್ ಹುಟ್ಟೂರು ಚಕ್ಕೆರೆ ಗ್ರಾಮದಲ್ಲಿ ಹಬ್ಬದ ಸಮಯದಲ್ಲಿ ನಡೆದ ಜಗಳ ಎಲ್ಲೆಡೆ ಚರ್ಚೆಗೆ ಕಾರಣವಾಗಿದ್ದು, ಇದೀಗ ಮಗಳ ಆರೋಪಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ಯೋಗೇಶ್ವರ್ ಅವರು, ಇತ್ತಿಚೀನ ದಿನಗಳಲ್ಲಿ ನನ್ನ ಮಗಳು ನಿಶಾ ಮತ್ತು ಆಕೆಯ ತಾಯಿ ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಕೆಲ ಹೇಳಿಕೆಗಳನ್ನ ನೀಡಿದ್ದಾರೆ. ನನ್ನ ಹೂಟ್ಟೂರು ಚಕ್ಕರೆಯಲ್ಲಿ ಊರ ಹಬ್ಬದ ದಿನ ನಮ್ಮ ಮನೆಯಲ್ಲಿ ಯಾರೂ ಇಲ್ಲದಾಗ ಮನೆ ಬಳಿ ಬಂದು ಮನೆಯೊಳಗೆ ನಮ್ಮನ್ನ ಬಿಡ್ತಿಲ್ಲ ಅಂತ ವಿಡಿಯೋ ಮಾಡಿದ್ದಾರೆ.

ವೈಯಕ್ತಿಕ ಕಾರಣದಿಂದ ಈ ಬಾರಿ ಹಬ್ಬ ಮಾಡಿರ್ಲಿಲ್ಲ‌. ಈ ವಿಚಾರ ನಿಶಾಳಿಗೆ ಗೊತ್ತಿದ್ದೂ ಈ ರೀತಿ ಮಾಡಿದಳೋ ಅಥವಾ ಗೊತ್ತಿಲ್ಲದೆ ಮಾಡಿದ್ಲೋ ಗೊತ್ತಿಲ್ಲ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ನಾನು ಮಕ್ಕಳನ್ನ ನೋಡಿಯೇ ಕೊಂಡಿಲ್ಲ ಎನ್ನುವಂತೆ ಬಿಂಬಿತವಾಗಿದೆ. ಈ ಮೂಲಕ ಸಾರ್ವಜನಿರಲ್ಲಿ ತಿಳಿಯ ಪಡಿಸುವುದೆನೆಂದರೆ ನಿಶಾಳ ತಾಯಿ ನನ್ನಿಂದ ಕಾನೂನು ಬದ್ದವಾಗಿ ವಿಚ್ಚೇದನ ಪಡೆದು 25 ವರ್ಷಗಳಾಗಿವೆ. ಆಕೆಗೂ ನನಗೂ ನನ್ನ ಕುಟುಂಬಕ್ಕೂ ಯಾವೂದೇ ಸಂಬಂಧವಿಲ್ಲ. ಇನ್ನೂ ನನ್ನ ಮಗಳಿಗೆ ನಾನಿನ್ನು ತಂದೆಯಾಗಿದ್ದೇನೆ. ಆದರೆ ನನ್ನ ಮಗಳು ನನ್ನ ವಿರುದ್ಧವೇ ಇಲ್ಲ ಸಲ್ಲದ ಆರೋಪಗಳನ್ನ ಮಾಡಿರೋದು ನನ್ನ ಮನಸ್ಸಿದೆ ಘಾಸಿಯುಂಟುಮಾಡಿದೆ.

ನನ್ನ ಮಗಳು ವಿರೋಧಿಗಳ ಜೊತೆ ಸೇರಿ ನನ್ನನ್ನು ಕಳಂಕಿತಗೊಳಿಸಲು ಯತ್ನಿಸುತ್ತಿದ್ದಾರೆ. ಸಾರ್ವಜನಿಕರು ಇಂತಹ ಸುಳ್ಳು ಆರೋಪಗಳನ್ನು ನಂಬಬಾರದು’ ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್