ಖುಷಿ

ಸ್ನೇಹದ ಒಡಲು

ಈ ವಿಶ್ವವು ಅಣುಗಳೇ ಕಟ್ಟಿದ ಅರಮನೆ. ಯಾವತ್ತೂ ಆ ಅಣುಗಳು ಪರಸ್ಪರ ಬಿಟ್ಟಿರುವ ಬಗ್ಗೆ ಯೋಚಿಸುವುದಿಲ್ಲ. ದೂರ ಸರಿಯುವ ಮಾತಾಡುವುದಿಲ್ಲ. ಮುನಿಸಿಕೊಂಡಂತೆ ವರ್ತಿಸುವುದಿಲ್ಲ. ಇದೇ ಒಗ್ಗಟ್ಟಿನಲ್ಲೇ ಬದುಕಿ ಅಂತ ಭಗವಂತ ವಿಶ್ವದ ಈ ಮೂಲದಲ್ಲೇ ಹೇಳಿದ್ದಾನೆ. ಈ ಪ್ರಕ್ರಿಯೆಗೆ 'ಸ್ನೇಹ' ಅಂತಲೂ ಹೆಸರಿಟ್ಟಿದ್ದಾನೆ. ಆದರೆ, ನಾವೀ ಗುಣವನ್ನು ಎಲ್ಲಿ ಕೈಚೆಲ್ಲಿದೆವು? 'ವಿಶ್ವ ಸ್ನೇಹತ್ವದ ದಿನ'ವಾಗಿರುವ ಇಂದು ನಮ್ಮೊಳಗೊಂದು ಪುಟ್ಟ ಆತ್ಮವಿಮರ್ಶೆಯ ಪ್ರಶ್ನೆ. ಕಡೇಪಕ್ಷ ಈ ಪ್ರಕೃತಿಯನ್ನು ಕಂಡಾದರೂ ಆ ಸ್ನೇಹವನ್ನು ನಮ್ಮೊಳಗೆ ಹಸಿರಾಗಿಸಿಕೊಳ್ಳೋಣ. ನಾವು ಆ ಆನೆಯಷ್ಟು ದೊಡ್ಡವರೋ, ಆ ಹಕ್ಕಿಯಷ್ಟು ಚಿಕ್ಕವರೋ ಗೊತ್ತಿಲ್ಲ. ಆದರೆ ನಮ್ಮ ಪಯಣದಲ್ಲಿ ಒಟ್ಟಿಗೆ ಹೆಜ್ಜೆ ಮೂಡಿದರೆ ಹೇಗೆ? ಇದು ಈ ದಿನದ ಸಂಕಲ್ಪ. ಇಡೀ ವರುಷದ ಸಲ್ಲಾಪ.
ಅಂದಹಾಗೆ, ಈ ರೇಖಾಮುದ್ರೆಯನ್ನು ಬಿಡಿಸಿದವನು ಅಮೆರಿಕದ ಹೆಸರಾಂತ ಕಲಾವಿದ ಎರಿಕ್ ಫ್ಯಾನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT