ಸಾಂದರ್ಭಿಕ ಚಿತ್ರ 
ಜೀವನಶೈಲಿ

ನಮ್ಮ ಕೆಲಸ-ಕುಟುಂಬ ಜೀವನ ಸಮತೋಲನದ ವೈಖರಿ, ನಮ್ಮ ಪೋಷಕರಿಂದ ಬಂದದ್ದು!

ಬಾಲ್ಯ ಜೀವನದಲ್ಲಿ ಪಡೆದ ಅನುಭವಗಳು ವ್ಯಕ್ತಿಯ ಮುಂದಿನ ಕೆಲಸ, ಜೀವನಶೈಲಿ ಮೇಲೆ ಭಾರೀ ಪ್ರಭಾವ...

ವಾಷಿಂಗ್ಟನ್: ಬಾಲ್ಯ ಜೀವನದಲ್ಲಿ ಪಡೆದ ಅನುಭವಗಳು ವ್ಯಕ್ತಿಯ ಮುಂದಿನ ಕೆಲಸ, ಜೀವನಶೈಲಿ ಮೇಲೆ ಭಾರೀ ಪ್ರಭಾವ ಬೀರುತ್ತದೆ. ವ್ಯಕ್ತಿಯ ಆದ್ಯತೆ, ಅವರು ಮಾಡುವ ಕೆಲಸಗಳು ವ್ಯಕ್ತಿಯ ಬಾಲ್ಯ ಜೀವನದ ಅನುಭವಗಳು, ಮನೆಯಲ್ಲಿ ಹೇಳಿಕೊಟ್ಟ ಪಾಠಗಳನ್ನು ಅವಲಂಬಿಸಿರುತ್ತದೆ. 
ಮನೆಯಲ್ಲಿರುವ ಗೃಹಿಣಿಯರು ತಮ್ಮ ತಂದೆಯ ರೀತಿ ಕೆಲಸ ಮಾಡಲು ಬಯಸುತ್ತಾರೆ ಆದರೆ ತಮ್ಮ ತಾಯಿಯ ರೀತಿ ಮಕ್ಕಳಿಗೆ ಪೋಷಕರಾಗಲು ಬಯಸುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಅಂದರೆ ಈ ಅಧ್ಯಯನದಲ್ಲಿ ತಿಳಿದುಬರುವುದೆಂದರೆ ವ್ಯಕ್ತಿಯ ಪೂರ್ವ ಇತಿಹಾಸ,ಬಾಲ್ಯ ಜೀವನ, ತಂದೆ-ತಾಯಿಯಿಂದ ಕಲಿತ ಪಾಠಗಳು ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ.
ಕೆಲಸಕ್ಕೆ ಸೇರುವಾಗ ನಾವು ಖಾಲಿಯಾಗಿರುವುದಿಲ್ಲ. ಬಾಲ್ಯದಲ್ಲಿ ಗಳಿಸಿದ ಅನುಭವಗಳೇ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಲಂಡನ್ ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಡಾ.ಲೊಯನಾ ಲೂಪು ಹೇಳುತ್ತಾರೆ. ಇವರು ಈ ಅಧ್ಯಯನದ ಸಹ ಲೇಖಕರಾಗಿದ್ದಾರೆ.
ಕೆಲಸ ಮತ್ತು ಕುಟುಂಬದ ನಡುವೆ ನಮ್ಮ ನಂಬಿಕೆಗಳು ಮತ್ತು ನಿರೀಕ್ಷೆಗಳು ಬಹುಮುಖ್ಯವಾಗಿರುತ್ತದೆ. ಇಲ್ಲಿ ನಮ್ಮ ಪೋಷಕರು ಗಾಢ ಪರಿಣಾಮ ಬೀರುತ್ತಾರೆ.
ವಕೀಲ ವೃತ್ತಿ ಮತ್ತು ಅಕೌಂಟೆಂಟ್ ಗಳಾಗಿರುವ 78 ಮಂದಿ ಪುರುಷ ಮತ್ತು ಮಹಿಳಾ ಉದ್ಯೋಗಿಗಳಿಗೆ 148 ಸಂದರ್ಶನಗಳನ್ನು ನಡೆಸಲಾಯಿತು. ಸಾಂಪ್ರದಾಯಿಕ ಕುಟುಂಬಗಳಲ್ಲಿ ತಂದೆ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿಯಾಗಿದ್ದರೆ ಅಂತಹ ವಾತಾವರಣದಲ್ಲಿ ಬೆಳೆದ ಪುರುಷ ಮತ್ತು ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿದ್ದವು.
ಕೆಲಸ ಮತ್ತು ಕುಟುಂಬದ ನಡುವೆ ಹೊಂದಾಣಿಕೆ ಮಾಡಿಕೊಳ್ಳುವ ಮನೆಯ ವಾತಾವರಣದಲ್ಲಿ ಪುರುಷರಿಗೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಆದರೆ ಮಹಿಳೆಯರ ಮೇಲೆ ಇದು ಗಾಢ ಪರಿಣಾಮ ಬೀರುತ್ತದೆ, ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. ಮನೆಯಲ್ಲಿರುವ ಗೃಹಿಣಿಯರು ತಂದೆಯ ರೀತಿ ದುಡಿಯಲು ಮತ್ತು ತಾಯಿಯ ರೀತಿ ಮಕ್ಕಳನ್ನು ನೋಡಿಕೊಳ್ಳಲು ಇಚ್ಛಿಸುತ್ತಾರೆ ಎಂದು ಡಾ.ಲೂಪು ಹೇಳುತ್ತಾರೆ. 
ಈ ಅಧ್ಯಯನ ಹ್ಯೂಮನ್ ರಿಲೇಶನ್ಸ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT