ಸಾಂದರ್ಭಿಕ ಚಿತ್ರ 
ಜೀವನಶೈಲಿ

ನಮ್ಮ ಕೆಲಸ-ಕುಟುಂಬ ಜೀವನ ಸಮತೋಲನದ ವೈಖರಿ, ನಮ್ಮ ಪೋಷಕರಿಂದ ಬಂದದ್ದು!

ಬಾಲ್ಯ ಜೀವನದಲ್ಲಿ ಪಡೆದ ಅನುಭವಗಳು ವ್ಯಕ್ತಿಯ ಮುಂದಿನ ಕೆಲಸ, ಜೀವನಶೈಲಿ ಮೇಲೆ ಭಾರೀ ಪ್ರಭಾವ...

ವಾಷಿಂಗ್ಟನ್: ಬಾಲ್ಯ ಜೀವನದಲ್ಲಿ ಪಡೆದ ಅನುಭವಗಳು ವ್ಯಕ್ತಿಯ ಮುಂದಿನ ಕೆಲಸ, ಜೀವನಶೈಲಿ ಮೇಲೆ ಭಾರೀ ಪ್ರಭಾವ ಬೀರುತ್ತದೆ. ವ್ಯಕ್ತಿಯ ಆದ್ಯತೆ, ಅವರು ಮಾಡುವ ಕೆಲಸಗಳು ವ್ಯಕ್ತಿಯ ಬಾಲ್ಯ ಜೀವನದ ಅನುಭವಗಳು, ಮನೆಯಲ್ಲಿ ಹೇಳಿಕೊಟ್ಟ ಪಾಠಗಳನ್ನು ಅವಲಂಬಿಸಿರುತ್ತದೆ. 
ಮನೆಯಲ್ಲಿರುವ ಗೃಹಿಣಿಯರು ತಮ್ಮ ತಂದೆಯ ರೀತಿ ಕೆಲಸ ಮಾಡಲು ಬಯಸುತ್ತಾರೆ ಆದರೆ ತಮ್ಮ ತಾಯಿಯ ರೀತಿ ಮಕ್ಕಳಿಗೆ ಪೋಷಕರಾಗಲು ಬಯಸುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಅಂದರೆ ಈ ಅಧ್ಯಯನದಲ್ಲಿ ತಿಳಿದುಬರುವುದೆಂದರೆ ವ್ಯಕ್ತಿಯ ಪೂರ್ವ ಇತಿಹಾಸ,ಬಾಲ್ಯ ಜೀವನ, ತಂದೆ-ತಾಯಿಯಿಂದ ಕಲಿತ ಪಾಠಗಳು ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ.
ಕೆಲಸಕ್ಕೆ ಸೇರುವಾಗ ನಾವು ಖಾಲಿಯಾಗಿರುವುದಿಲ್ಲ. ಬಾಲ್ಯದಲ್ಲಿ ಗಳಿಸಿದ ಅನುಭವಗಳೇ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಲಂಡನ್ ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಡಾ.ಲೊಯನಾ ಲೂಪು ಹೇಳುತ್ತಾರೆ. ಇವರು ಈ ಅಧ್ಯಯನದ ಸಹ ಲೇಖಕರಾಗಿದ್ದಾರೆ.
ಕೆಲಸ ಮತ್ತು ಕುಟುಂಬದ ನಡುವೆ ನಮ್ಮ ನಂಬಿಕೆಗಳು ಮತ್ತು ನಿರೀಕ್ಷೆಗಳು ಬಹುಮುಖ್ಯವಾಗಿರುತ್ತದೆ. ಇಲ್ಲಿ ನಮ್ಮ ಪೋಷಕರು ಗಾಢ ಪರಿಣಾಮ ಬೀರುತ್ತಾರೆ.
ವಕೀಲ ವೃತ್ತಿ ಮತ್ತು ಅಕೌಂಟೆಂಟ್ ಗಳಾಗಿರುವ 78 ಮಂದಿ ಪುರುಷ ಮತ್ತು ಮಹಿಳಾ ಉದ್ಯೋಗಿಗಳಿಗೆ 148 ಸಂದರ್ಶನಗಳನ್ನು ನಡೆಸಲಾಯಿತು. ಸಾಂಪ್ರದಾಯಿಕ ಕುಟುಂಬಗಳಲ್ಲಿ ತಂದೆ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿಯಾಗಿದ್ದರೆ ಅಂತಹ ವಾತಾವರಣದಲ್ಲಿ ಬೆಳೆದ ಪುರುಷ ಮತ್ತು ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿದ್ದವು.
ಕೆಲಸ ಮತ್ತು ಕುಟುಂಬದ ನಡುವೆ ಹೊಂದಾಣಿಕೆ ಮಾಡಿಕೊಳ್ಳುವ ಮನೆಯ ವಾತಾವರಣದಲ್ಲಿ ಪುರುಷರಿಗೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಆದರೆ ಮಹಿಳೆಯರ ಮೇಲೆ ಇದು ಗಾಢ ಪರಿಣಾಮ ಬೀರುತ್ತದೆ, ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. ಮನೆಯಲ್ಲಿರುವ ಗೃಹಿಣಿಯರು ತಂದೆಯ ರೀತಿ ದುಡಿಯಲು ಮತ್ತು ತಾಯಿಯ ರೀತಿ ಮಕ್ಕಳನ್ನು ನೋಡಿಕೊಳ್ಳಲು ಇಚ್ಛಿಸುತ್ತಾರೆ ಎಂದು ಡಾ.ಲೂಪು ಹೇಳುತ್ತಾರೆ. 
ಈ ಅಧ್ಯಯನ ಹ್ಯೂಮನ್ ರಿಲೇಶನ್ಸ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT