ದಿನನಿತ್ಯ ಸೈಕಲ್ ತುಳಿಯಿರಿ; ಒತ್ತಡ, ಆತಂಕ ಕಡಿಮೆ ಮಾಡಿಕೊಳ್ಳಿ 
ಜೀವನಶೈಲಿ

ದಿನನಿತ್ಯ ಸೈಕಲ್ ತುಳಿಯಿರಿ; ಒತ್ತಡ, ಆತಂಕ ಕಡಿಮೆ ಮಾಡಿಕೊಳ್ಳಿ

ದೇಹ ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸುವವರಿಗೆ ಇರುವ ಸುಲಭ ಮಾರ್ಗಗಳಲ್ಲಿ ಸೈಕ್ಲಿಂಗ್ ಸಹ ಒಂದು.

ನವದೆಹಲಿ: ದೇಹ ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸುವವರಿಗೆ  ಇರುವ ಸುಲಭ ಮಾರ್ಗಗಳಲ್ಲಿ ಸೈಕ್ಲಿಂಗ್ ಸಹ ಒಂದು. ನಿಮ್ಮ ತೂಕವನ್ನು ನಿಯಂತ್ರಿಸುವುದರ ಜೊತೆಗೆ, ಖಿನ್ನತೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿಕೊಳ್ಳಲು ಸೈಕಲ್ ಸವಾರಿ ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆರ್ ಎಂ ಅಂಜನಾ, ಡಾ.ಮೋಹನ್ ಡಯಾಬಿಟೀಸ್ ಸ್ಪೆಷಲಿಸ್ಟ್ ಸೆಂಟರ್ ನವ್ಯವಸ್ಥಾಪಕ ನಿರ್ದೇಶಕಿ ಹಾಗೂ ಆಕ್ಟಿವ್ ಹೆಲ್ತ್ ಕ್ಲಿನಿಕ್ ನ ಫಿಸಿಯೋ ಥೆರಪಿಸ್ಟ್ ಆಗಿರುವ ದೀಪಾಲಿ ಬದೋನಿ ಅವರುಗಳು ಸೈಕಲ್ ಸವಾರಿಯ ಲಾಭಗಳ ಬಗೆಗೆ ಹೇಳುತ್ತಾರೆ.
  • ಸೈಕ್ಲಿಂಗ್ ಎಂಬುದು ಏರೋಬಿಕ್ಸ್ ವ್ಯಾಯಾಮವಾಗಿದ್ದು, ಇದರಿಂದ ಆರೋಗ್ಯಕ್ಕೆ ಉತ್ತಮ ಲಾಭವಾಗುತ್ತದೆ. ಇದು ಹೃದಯ ಸಂಬಂಧಿತ ಖಾಯಿಲೆಗಳನ್ನು ದೂರಾಗಿಸುತ್ತದೆ. ಈ ಸೈಕಲ್ ಸವಾರಿಯಿಂದ ಮೆದುಳಿನಲ್ಲಿ ಸಿರೊಟೋನಿನ್, ಡೋಪಮೈನ್ ಮತ್ತು ಫೀನಲೆಥೈಲಮೈನ್ ನಂತಹ  ರಾಸಾಯನಿಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಅದು ನಿಮ್ಮನ್ನು ಖಿನ್ನತೆಯಿಂದ ದೂರವಾಗಿಸಿ ಸಂತಸದಿಂದಿರಿಸುತ್ತದೆ.
  • ಮೊಣಕಾಲು ಅಥವಾ ಕೀಲು ನೋವಿನಿಂದ ಬಳಲುತ್ತಿರುವ ಮಂದಿ ಸೈಕಲ್ ಸವಾರಿ ಮಾಡುವುದು ಅತ್ಯಂತ ಒಳ್ಳೆಯದು
  • ಮಧುಮೇಹದಿಂದ ಬಳಲುತ್ತಿರುವ ಜನರು ಸೈಕ್ಲಿಂಗ್ ಮಾಡುವಾಗ ಅವರು ತಾವು ದೃಢವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಟೈಪ್ 1 ಡಯಾಬಿಟೀಸ್ ಇರುವವರು ಒಂದು ಗಂಟೆಗೆ ಹೆಚ್ಚು ಕಾಲ ಸೈಕಲ್ ಸವಾರಿ ಮಾಡುವುದಾದರೆ ಹೆಚ್ಚು ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ತೆಗೆದುಕೊಳ್ಳುವುದು ಅಗತ್ಯ. 
  • ಸೈಕ್ಲಿಂಗ್ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರಾಗಿಸುತ್ತದೆ. ಇದು ಹಿಮ್ಮಡಿ ಮತ್ತು ಮೊಣಕಾಲಿನ ಕೀಲುಗಳ ಮೇಲೆ ಒತ್ತಡ ಹಾಕಿ ಕಾಲುಗಳ ಸ್ನಾಯುಗಳ ಆರೋಗ್ಯ ಕಾಪಾಡುವಂತೆ ಮಾಡುತ್ತದೆ. ಓಡುವುದಕ್ಕೆ ಅಥವಾ , ಬೈಕ್ ರೈಡ್ ಗೆ ಹೋಲಿಸಿದಾಗ ಅವುಗಳು ನಮ್ಮ ಕಾಲುಗಳು, ಮೊಣಕಾಲಿನ ಕೀಲುಗಳ ಮೇಲೆ  ತುಂಬಾ ಕಡಿಮೆ ಒತ್ತಡ ಹಾಕುತ್ತದೆ, ಸೈಕ್ಲಿಂಗ್ ಮಾತ್ರ ಕಾಲುಗಳ ಸ್ನಾಯುಗಳನ್ನು ಚುರುಕಾಗಿಡಬಲ್ಲದು.
  • ಸೈಕಲ್ ಸವಾರಿಯು ಹೃದಯ ಮತ್ತು ಶ್ವಾಸಕೋಶವನ್ನು ಆರೋಗ್ಯವಾಗಿಡಬಲ್ಲದು, ರಕ್ತದ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆ ಬರುವ ಸಾದ್ಯತೆ ಕಡಿಮೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT