ವೃತ್ತಿ ಜೀವನದ ಗುರಿ- ಸಂತಾನೋತ್ಪತ್ತಿ ಸಾಮರ್ಥ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಿರುವ ಅಂಶಗಳು 
ಜೀವನಶೈಲಿ

ವೃತ್ತಿ ಜೀವನವು ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದೇ?

ವೃತ್ತಿ ಜೀವನದ ಗುರಿ, ಆಯ್ಕೆಗಳು ಮಹಿಳೆ ಹಾಗೂ ಪುರುಷರಲ್ಲಿನ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಗಣನೀಯ ಪರಿಣಾಮ ಬೀರಲಿದೆ.

ವಾಷಿಂಗ್ ಟನ್: ವೃತ್ತಿ ಜೀವನದ ಗುರಿ, ಆಯ್ಕೆಗಳು ಮಹಿಳೆ ಹಾಗೂ ಪುರುಷರಲ್ಲಿನ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಗಣನೀಯ ಪರಿಣಾಮ ಬೀರಲಿದೆ. 
ಟೇಲರ್ & ಫ್ರಾನ್ಸಿಸ್ ನಲ್ಲಿ ನಡೆದ ಸಂಶೋಧನೆಯಲ್ಲಿ ವಿದ್ಯಾರ್ಥಿಗಳನ್ನು ಸಂದರ್ಶಿಸಲಾಗಿದ್ದು, ವೃತ್ತಿ ಜೀವನದ ಗುರಿಗಳನ್ನು ತಲುಪಿಯೂ ಬಂಜೆತನ ಕಾಡುವುದಕ್ಕೆ ಮೊದಲೇ ಮಕ್ಕಳನ್ನು ಪಡೆಯುವುದು ಮಹಿಳೆ ಹಾಗೂ ಪುರುಷರು ಇಬ್ಬರಿಗೂ ಮುಖ್ಯವಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 
ಮಕ್ಕಳನ್ನು ಪಡೆಯುವುದಕ್ಕೂ ಮುನ್ನವೇ ತಮ್ಮ ವೃತ್ತಿ ಜೀವನದಲ್ಲಿ ಸಾಧನೆ ಮಾಡಿರಬೇಕೆಂಬುದು ಬಹುತೇಕ ಭಾವಿ ಪೋಷಕರ ಅಭಿಪ್ರಾಯವಾಗಿದೆ. ಬಹುತೇಕ ವಿದ್ಯಾರ್ಥಿಗಳು  ವಯಸ್ಸಿಗೆ ಅನುಗುಣವಾಗಿ ಪುರುಷ-ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಅಂದಾಜಿಸಲು ಈ ಸಮೀಕ್ಷೆಯಲ್ಲಿ ಯತ್ನಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಹಿಳೆಯರ ವಯಸ್ಸು-ಸಂತಾನೋತ್ಪತ್ತಿ ಸಾಮರ್ಥ್ಯವನ್ನು ನಿಖರವಾಗಿ ಗುರುತಿಸಿದ್ದರೆ, ಕೆಲವರು ಪುರುಷರ ವಯಸಿಗೆ ಅನುಗುಣವಾಗಿ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಗುರುತಿಸಿದ್ದಾರೆ. 
ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯ 35-39 ವಯಸ್ಸಿನ ನಡುವೆ ಕುಗ್ಗುತ್ತದೆ ಎಂಬುದನ್ನು ಶೇ. 38 ರಷ್ಟು ಪುರುಷರು ಹಾಗೂ ಶೇ.45 ರಷ್ಟು ಮಹಿಳೆಯರು ಸರಿಯಾಗಿ ಗುರುತಿಸಿದ್ದು, 45-49 ವಯಸ್ಸಿನ ನಡುವೆ ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ಕ್ಷೀಣಿಸಲು ಪ್ರಾರಂಭವಾಗುತ್ತದೆ ಎಂಬುದನ್ನು ಶೇ.18.3 ರಷ್ಟು ಪುರುಷರು ಹಾಗೂ 16.9 ಮಹಿಳೆಯರು ನಿಖರವಾಗಿ ಹೇಳಿದ್ದಾರೆ. 
ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ ಶೇ.10 ರಷ್ಟು ವಿದ್ಯಾರ್ಥಿಗಳು ಮಕ್ಕಳನ್ನು ಪಡೆಯದೇ ಇರಲು ನಿರ್ಧರಿಸಿದ್ದು, ಶೇ.75 ರಷ್ಟು ಒಂದು ಅಥವಾ ಎರಡು ಮಕ್ಕಳನ್ನು ಪಡೆಯಲು ಬಯಸಿದ್ದಾರೆ.  ಸ್ಥಿರ ಸಂಬಂಧ ಹಾಗೂ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಸಂಗಾತಿಯ ಆಯ್ಕೆಯನ್ನು ಬಹುತೇಕ ವಿದ್ಯಾರ್ಥಿಗಳು  ಮಕ್ಕಳನ್ನು ಪಡೆಯುವುದಕ್ಕೂ ಮುನ್ನ ನೀಡಬೇಕಾದ ಪ್ರಾಮುಖ್ಯತೆಗಳೆಂದು ಹೇಳಿದ್ದಾರೆ. 
ವೃತ್ತಿ ಜೀವನದ ಗುರಿ- ಸಂತಾನೋತ್ಪತ್ತಿ ಸಾಮರ್ಥ್ಯದ ಮಿತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು  ಸಂಶೋಧಕರಾದ ಡಾ.ಯುಜೆನಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT