ಸಾಂದರ್ಭಿಕ ಚಿತ್ರ 
ಜೀವನಶೈಲಿ

ಹಚ್ಚೆ ಹಾಕಿಸಿಕೊಳ್ಳುವ ಮುನ್ನ ಈ ಅಂಶಗಳನ್ನು ಅನುಸರಿಸಿ

ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುವವಪು, ಕಾಲೇಜಿಗೆ ಹೋಗುವ ಯುವತಿಯರಿಂದ ಹಿಡಿದು ...

ನವದೆಹಲಿ: ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುವವಪು, ಕಾಲೇಜಿಗೆ ಹೋಗುವ ಯುವತಿಯರಿಂದ ಹಿಡಿದು ಗೃಹಿಣಿಯರವರೆಗೆ ಹಚ್ಚೆ(ಟ್ಯಾಟು) ಹಾಕಿಸಿಕೊಳ್ಳುವುದೆಂದರೆ ಫ್ಯಾಶನ್ ವಿಷಯ. ಇಂತಹ ಹಚ್ಚೆ ಬಗ್ಗೆ ಇಲ್ಲಿದೆ ಕೆಲವು ಮಾಹಿತಿಗಳು:

ಟ್ಯಾಟುವನ್ನು ಹೇಗೆ ಯಾವಾಗ ಹಾಕಿಸಿಕೊಳ್ಳಬೇಕು ಎಂದು ಸೆಲೆಬ್ರಿಟಿ ಟ್ಯಾಟೂ ಕಲಾವಿದೆ ಸನ್ನಿ ಭಾನುಶಾಲಿ ಮತ್ತು ಕಾಸ್ಮೆಟಿಕ್ ಸರ್ಜನ್ ಸಮೀರ್ ಕಾರ್ಖನಿಸ್ ಕೆಲವೊಂದು ಟಿಪ್ಸ್ ನೀಡಿದ್ದಾರೆ.

ಟ್ಯಾಟೂ ಎಂದರೆ ಅದು ಒಮ್ಮೆ ಹಾಕಿಸಿದರೆ ಜೀವನಪೂರ್ತಿ ನಮ್ಮ ದೇಹದಲ್ಲಿರುವ ಒಂದು ವಿನ್ಯಾಸ. ಟ್ಯಾಟು ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಅದರ ಬಣ್ಣ, ವಿನ್ಯಾಸವನ್ನು ನೋಡಿಕೊಳ್ಳಬೇಕು. ಯಾಕೆಂದರೆ ಅದು ಬೇಡವೆಂದರೆ ಅದನ್ನು ತೆಗೆಸುವುದು ದುಬಾರಿ ಮತ್ತು ಕಷ್ಟದ ವಿಚಾರ.

ಯುವಕ, ಯುವತಿಯರಾಗಿದ್ದಾಗ ಹಾಕಿಸಿಕೊಳ್ಳುವ ಟ್ಯಾಟು ಇನ್ನು 10,20. 30 ವರ್ಷಗಳ ಕಳೆದ ನಂತರ ಅದೇ ರೀತಿ ನಿಮ್ಮ ದೇಹಕ್ಕೆ ಕಾಣುವುದಿಲ್ಲ. ದೇಹದ ಚರ್ಮ ಸುಕ್ಕುಗಟ್ಟುತ್ತಿದ್ದಂತೆ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ.

ಗೋವಾ ಬೀಚ್ ನಲ್ಲಿ ಟ್ಯೂಟೂ ಹಾಕಿಸಿಕೊಳ್ಳುವುದು ಬೇರೆ ವೃತ್ತಿಪರರ ಬಳಿ ಟ್ಯಾಟೂ ಹಾಕಿಸಿಕೊಳ್ಳುವುದು ಅಗ್ಗವಾಗಬಹುದು. ಆದರೆ ಇದು ಉತ್ತಮವಲ್ಲ. ಗೋವಾ ಬೀಚ್ ನಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಅಷ್ಟು ಸ್ವಚ್ಛವಾಗಿರಲಿಕ್ಕಿಲ್ಲ.

ಟ್ಯಾಟೂಗೆ ಬಳಸುವ ಶಾಯಿ ಸ್ವಚ್ಛವಾಗಿದ್ದು ಶುದ್ಧವಾಗಿರಬೇಕು. ಅದರಲ್ಲಿ ಸೀಸ ಮತ್ತು ನಿಕಿಲ್ ನಂತಹ ರಾಸಾಯನಿಕಗಳು ಸೇರಿರಬಾರದು.

ಟ್ಯಾಟೂ ಹಾಕಿಸಿಕೊಳ್ಳುವುದೆಂದರೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುವುದೆಂದರ್ಥ. ರೋಗ ಬಂದಾಗ ವೈದ್ಯರ ಬಳಿ ಹೋಗಿ ಔಷಧ ತೆಗೆದುಕೊಂಡು ವೈದ್ಯರ ಮಾತನ್ನು ಅನುಸರಿಸುವಂತೆ ಟ್ಯಾಟೂ ಕಲಾವಿದರ ಸಲಹೆ, ಸೂಚನೆಗಳನ್ನು ಕೂಡ ಪಾಲಿಸಬೇಕು. ಅವರ ಸೂಚನೆ, ಸಲಹೆಗಳನ್ನು ಪಾಲಿಸದಿದ್ದರೆ ಅಡ್ಡ ಪರಿಣಾಮ ಬೀರಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ-Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT