ಸಂಗ್ರಹ ಚಿತ್ರ 
ಜೀವನಶೈಲಿ

ಭಾರತದಲ್ಲಿ ಮೂರನೇ ಒಂದರಷ್ಟು ವಿವಾಹಿತ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ: ವರದಿ

ಭಾರತದಲ್ಲಿ ವಾಸಿಸಿಉರ್ವ ವಿವಾಹಿತ ಮಹಿಳೆಯರ ಪೈಕೆ ಸುಮಾರು ಮೂರನೇ ಒಂದರಷ್ಟು ಭಾಗದ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿ ಹಿಂಸೆ ಅನುಭವಿಸಿದ್ದಾರೆ. ಲಿಂಗಾಧಾರಿತ

ನವದೆಹಲಿ: ಭಾರತದಲ್ಲಿ ವಾಸಿಸಿಉರ್ವ ವಿವಾಹಿತ ಮಹಿಳೆಯರ ಪೈಕೆ ಸುಮಾರು ಮೂರನೇ ಒಂದರಷ್ಟು ಭಾಗದ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿ ಹಿಂಸೆ ಅನುಭವಿಸಿದ್ದಾರೆ. ಲಿಂಗಾಧಾರಿತ  ದೌರ್ಜನ್ಯ, ಹಿಂಸೆ ಬಹಳ ವ್ಯಾಪಕ ಸಮಸ್ಯೆಯಾಗಿದೆ ಎಂದು ಅದ್ಯಯನ ವರದಿಯೊಂದು ಸಾಬೀತುಪಡಿಸಿದೆ.
ಗುಜರಾತ್ ವಡೋದರಾ ಮೂಲದ ಎನ್ಜಿಓ "ಸಹಜ್" ಮತ್ತು ಯುಕೆ ಮೂಲದ  "ಈಕ್ವಲ್ ಮೆಸರ್ಸ್ 2030" ಎಂಬನಾಗರಿಕ ಸಮಾಜ ಹಾಗೂ ಖಾಸಗಿ ಕ್ಷೇತ್ರದ ಸಂಘಟನೆಗಳ ಸಮೂಹ  ಸೇರಿ ಈ ಅದ್ಯಯನ ನಡೆಸಿದೆ.
ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ (ಎನ್ಎಚ್ಎಫ್ಎಸ್) 4 ರಿಂದ ಅಂಕಿ ಅಂಶಗಳನ್ನು ಉಲ್ಲೇಖಿಸಿ ನೀಡಲಾದ ವರದಿಯಂತೆ 15 ರಿಂದ 49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಶೇ .27 ರಷ್ಟು ಮಂದಿ 15 ವರ್ಷದಿಂದಲೂ ದೈಹಿಕ ಹಿಂಸೆ ಅನುಭವಿಸಿದ್ದಾರೆ 
"ಒಂದು ಕಡೆ, ಭಾರತವು ಪ್ರಬಲ ಆರ್ಥಿಕ ಬೆಳವಣಿಗೆಯನ್ನು ಹೊಂದುತ್ತಿರುವ ರಾಷ್ಟ್ರವಾಗಿ ಕಂಡರೆ ಇನ್ನೊಂದೆಡೆ ಜಾತಿ, ವರ್ಗ ಅಥವಾ ಲಿಂಗಗಳ ಆಧಾರದ ಮೇಲೆ ತಾರತಮ್ಯವನ್ನು ಬಹುವಾಗಿ ಅನುಭವಿಸುವವವ್ರು ಇಲ್ಲಿದ್ದಾರೆ."ಲಿಂಗ ಸಮಾನತೆ ಆರೋಗ್ಯ, ಪೋಷಣೆ ಹಾಗೂ  ಮಹಿಳೆಯರ ಕಲ್ಯಾಣ ಕ್ಷೇತ್ರಗಳಲ್ಲಿ ದೇಶ ಬಹಳ ಹಿಂದೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ಭಾರತದಲ್ಲಿ ವಿವಾಹಿತ ಮಹಿಳೆಯರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಕೌಟುಂಬಿಕ ಹಿಂಸೆಗೆ ಈಡಾಗಿದ್ದಾರೆ.ಪತಿಯು ಪತ್ನಿಗೆ ಹಿಂಸೆ ನೀಡುವರೆಂದು ಅನೇಕರು ಒಪ್ಪಿಕೊಂಡಿದ್ದಾರೆ.ಭಾರತದಲ್ಲಿ ಇಂದಿಗೂ ಪುರುಷ ಪ್ರಧಾನ ಕೌಟುಂಬಿಕ ವ್ಯ್ವಸ್ಥೆಯ ಬೇರುಗಳು ಆಳಆಗಿದ್ದು ಇದರಿಂದ ಹೆಣ್ಣು ಹಾಗೂ ಹೆಣ್ಣುಮಕ್ಕಳ ಬಗ್ಗೆ ತಾತ್ಸಾರ, ತಾರತಮ್ಯ ಧೋರಣೆಗೆ ಕಾರಣವಾಗಿದೆ.
ಭಾರತೀಯ ಬಾಲಕಿಯರು ಪುರುಷರಿಗೆ ಹೋಲಿಸಿದರೆ ಕಡಿಮೆ ಶಿಕ್ಷಣ ಪಡೆದಿರುತ್ತಾರೆ.ಅಲ್ಲದೆ ಅವರಿಗೆ ಗಂಡು ಮಕ್ಕಳಿಗಿಂತ ಕಡಿಮೆ ಪೌಷ್ಟಿಕಾಂಶದ ಆಹಾರ ನೀಡಲಾಗುತ್ತದೆ. ಅವರು ಆರೋಗ್ಯದ ಕಡೆಗೆ ಸಹ ಪುರುಷರಷ್ಟು ಗಮನ ನೀಡುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಳಾಗಿದೆ. ಸಾಮಾಜಿಕ ರೂಢಿಗಳ ಪರಿಣಾಮದಿಂದ ದೇಶದ ನಾನಾ ಕಡೆಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಸಿಗುತ್ತಿಲ್ಲ.
ಸರ್ಕಾರದ ಮಹತ್ವಾಕಾಂಕ್ಷೆಯ "ಬೇಟಿ ಬಚಾವೋ ಬೇಟಿ ಪಡಾವೋ" ಆಂದೋಲನದ ಹೊರತಾಗಿಯೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಸಾಮಾಜಿಕ ಸ್ಥಾನಮಾನ ದುರ್ಬಲಗೊಳ್ಳುತ್ತಿದೆ.ಬಾಲಕಿಯರ ಕಳಪೆ ಆರೋಗ್ಯ ಮತ್ತು ಮರಣದ ವಿಚಾರವಾಗಲಿ, ಹೆಣ್ಣು ಮಕ್ಕಳ ಜನನದ ಸಂಖ್ಯಾನುಪಾತವಾಗಲಿ ಆತಂಕಕಾರಿಯಾಗಿದೆ.
ಅಂತೆಯೇ, ರಾಜಕೀಯ ನಾಯಕತ್ವ ಮತ್ತು ಆರ್ಥಿಕ ಪಾಲ್ಗೊಳ್ಳುವಿಕೆಯಂತಹ ಸಮಯದಲ್ಲಿ ಸಹ ಮಹಿಳೆಯು ನಿರ್ಲಕ್ಷಕ್ಕೆ ಒಳಗಾಗಿದ್ದಾರೆ ಎಂದು ವರದಿ ಹೇಳಿದೆ..

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT