ಸಾಂದರ್ಭಿಕ ಚಿತ್ರ 
ಜೀವನಶೈಲಿ

ವ್ಯಕ್ತಿಗತ ಅಂತರ ಪಾಲಿಸದ ಕಡೆ 35 ಪಟ್ಟು ಹೆಚ್ಚಿನ ಕೋವಿಡ್-19 ಪ್ರಕರಣಗಳು: ಅಧ್ಯಯನ

ಕೊರೋನಾವೈರಸ್ ಹರಡುವಿಕೆ ತಡೆಗಟ್ಟುವಲ್ಲಿ ಸಾಮಾಜಿಕ ಅಂತರ ನಿಯಮ ಪ್ರಾಮುಖ್ಯತೆ ಕುರಿತ ಹೊಸ ಅಧ್ಯಯನವೊಂದು ಆರೋಗ್ಯಕ್ಕೆ ಸಂಬಂಧಿಸಿದ ಜರ್ನಲ್ ವೊಂದರಲ್ಲಿ ಪ್ರಕಟಗೊಂಡಿದೆ.

ವಾಷಿಂಗ್ಟನ್: ಕೊರೋನಾವೈರಸ್ ಹರಡುವಿಕೆ ತಡೆಗಟ್ಟುವಲ್ಲಿ ಸಾಮಾಜಿಕ ಅಂತರ ನಿಯಮ ಪ್ರಾಮುಖ್ಯತೆ ಕುರಿತ ಹೊಸ ಅಧ್ಯಯನವೊಂದು ಆರೋಗ್ಯಕ್ಕೆ ಸಂಬಂಧಿಸಿದ ಜರ್ನಲ್ ವೊಂದರಲ್ಲಿ ಪ್ರಕಟಗೊಂಡಿದೆ.

ಅಧ್ಯಯನದ ಪ್ರಕಾರ, ಸಾಮಾಜಿಕ ಅಂತರ ನಿಯಮ ಪಾಲಿಸದ ಅಮೆರಿಕಾದ ಪ್ರದೇಶಗಳಲ್ಲಿ  35 ಪಟ್ಟು ಹೆಚ್ಚಿನ ಕೊರೋನಾವೈರಸ್ ಪ್ರಕರಣಗಳು ಕಂಡುಬಂದಿವೆ.

ಕೆಂಟುಕಿ, ಲೂಯಿಸ್ ವಿಲ್ಲೆ ಮತ್ತು ಜಾರ್ಜಿಯಾ ವಿಶ್ವವಿದ್ಯಾಲಯಗಳ ಸಂಶೋಧಕರಿಂದ ಈ ಅಧ್ಯಯನ ನಡೆಸಲಾಗಿದ್ದು, ಮಾರ್ಚ್ 1 ಹಾಗೂ ಏಪ್ರಿಲ್ 27 ರ ನಡುವೆ ಒಟ್ಟು 1 ಮಿಲಿಯನ್ ಕೊರೋನಾವೈರಸ್ ಪ್ರಕರಣಗಳು ಖಚಿತಪಟ್ಟ ನಿದರ್ಶನಗಳು ವರದಿಯಾಗಿವೆ ಎಂದು ವಾಷಿಂಗ್ಟನ್ ಪೋ್ಸ್ಟ್ ವರದಿ ಮಾಡಿದೆ. 

ಸಾಮಾಜಿಕ ಅಂತರ ನಿಯಮ ಪಾಲಿಸಿದ ಪ್ರದೇಶಗಳಲ್ಲಿ ಕೋವಿಡ್- 19 ಬೆಳವಣಿಗೆ ದರ ಕಡಿಮೆಯಾಗಿದೆ. ಅಲ್ಲಿ ಧೀರ್ಘ ಕಾಲದಿಂದ  ಸಾಮಾಜಿಕ ನಿಯಮ ಪಾಲಿಸಲಾಗುತಿತ್ತು ಎಂದು ವರದಿ ತಿಳಿಸಿದೆ. 

ಸಾಮಾಜಿಕ ನಿಯಮ ಪಾಲನೆಗಾಗಿ 16 ದಿನಗಳಿಂದ 20 ದಿನಗಳವರೆಗೂ ನಡೆದ ಅಧ್ಯಯನದಂತೆ, ಸೋಂಕಿನ ದೈನಂದಿನ ದರವು ಶೇ. 9ಕ್ಕಿಂತ ಕಡಿಮೆಯಾಗಿದೆ.ಎಲ್ಲಿಯೂ ಹೊರಗೆ ಹೋಗದೆ ಮನೆಯಲ್ಲಿ ಇರುವುದು, ಶಾಲೆಗಳು ಬಂದ್, ಜಿಮ್, ಬಾರ್ ಮತ್ತು ರೆಸ್ಟೋರೆಂಟ್ ಗಳ ಬಾಗಿಲು ಬಂದ್, ದೊಡ್ಡ ಕಾರ್ಯಕ್ರಮಗಳ ರದ್ದು ಮತ್ತಿತರ ಸಾಮಾಜಿಕ ಅಂತರ ನಿಯಮ ಪಾಲಿಸುವ ಕ್ರಮಗಳನ್ನು ಕೈಗೊಳ್ಳಲಾಗಿತ್ತು. 

ಸ್ವಯಂ ಪ್ರೇರಿತವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡ ಪ್ರದೇಶಗಳಲ್ಲಿ 10 ಪಟ್ಟು ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದರೆ , ಯಾವುದೇ ನಿಯಮ ಪಾಲಿಸದ ಪ್ರದೇಶಗಳಲ್ಲಿ ಇದರ ಸಂಖ್ಯೆ 35 ಪಟ್ಟು ಹೆಚ್ಚಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ. 

ಆದಾಗ್ಯೂ, ನೈಜ ಸಾಮಾಜಿಕ ಅಂತರದ ಬಗ್ಗೆ ಅಧ್ಯಯನ ಗಮನ ಹರಿಸಿಲ್ಲ, ಆದರೆ, ಮಾಹಿತಿ ಮತ್ತು ಶಿಫಾರಸುಗಳನ್ನು ಒದಗಿಸುವುದಕ್ಕೆ  ಹೋಲಿಸಿದರೆ ಸಾಮಾಜಿಕ ದೂರವನ್ನು ಉತ್ತೇಜಿಸುವ ಸರ್ಕಾರದ ನಿರ್ಬಂಧಗಳು ಕಡಿಮೆ ಎನ್ನಿಸುತ್ತಿವೆ ಎಂದು ಸಂಶೋಧಕರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

ನಾವು ಬಿಟ್ಟರು ಧರ್ಮ, ಜಾತಿ ನಮ್ಮನ್ನು ಬಿಡುವುದಿಲ್ಲ: ಒಕ್ಕಲಿಗನಾಗಿ ಹುಟ್ಟಿದ್ದೇನೆ; ಅಶೋಕಣ್ಣನಿಗೆ ಬ್ಯಾಡ್ಜ್ ಕಳಿಸುತ್ತೇನೆ ಹಾಕಿಕೊಳ್ಳಲಿ; DKS

ಅಮೆರಿಕ ಶಕ್ತಿ ಕೇಂದ್ರ ಶ್ವೇತಭವನ ಬಳಿ ಇಬ್ಬರು ಯುಎಸ್ ರಾಷ್ಟ್ರೀಯ ಗಾರ್ಡ್ ಗಳ ಮೇಲೆ ಗುಂಡಿನ ದಾಳಿ: ಶಂಕಿತನ ಗುರುತು ಪತ್ತೆ

SCROLL FOR NEXT