ಸಾಂದರ್ಭಿಕ ಚಿತ್ರ  
ಜೀವನಶೈಲಿ

ಭಾರತೀಯರಲ್ಲಿ ಶೇ.50ರಷ್ಟು ರೋಗಗಳಿಗೆ ಅನಾರೋಗ್ಯಕರ ಆಹಾರ ಸೇವನೆಯೇ ಕಾರಣ!

ಕಡಿಮೆ ದೈಹಿಕ ಚಟುವಟಿಕೆ ಮತ್ತು ವೈವಿಧ್ಯಮಯ ಆಹಾರಗಳನ್ನು ಸೇವಿಸದಿರುವುದು, ಸೂಕ್ಷ್ಮ ಪೋಷಕಾಂಶಗಳ ಕೊರತೆಗಳು ಭಾರತೀಯರಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯತೆಯ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ.

ನವದೆಹಲಿ: ಭಾರತೀಯರಲ್ಲಿ ಕಂಡುಬರುತ್ತಿರುವ ರೋಗಗಳಲ್ಲಿ ಶೇಕಡಾ 50ಕ್ಕೂ ಹೆಚ್ಚು ರೋಗಗಳು ಅನಾರೋಗ್ಯಕರ ಆಹಾರಕ್ರಮದಿಂದಾಗಿ ಬರುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ICMR-NIN) ಹೇಳಿದೆ. ಪೌಷ್ಟಿಕಾಂಶದ ಕೊರತೆಯನ್ನು ತಡೆಗಟ್ಟಲು ಅದು 17 ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಿಂದ (NCD) ಹೆಚ್ಚುತ್ತಿರುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ.

ಆರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆಯು ಪರಿಧಮನಿಯ ಹೃದಯ ಕಾಯಿಲೆ (CHD) ಮತ್ತು ಅಧಿಕ ರಕ್ತದೊತ್ತಡವನ್ನು (HTN) ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಮತ್ತು ಟೈಪ್ 2 ಮಧುಮೇಹವನ್ನು ಶೇಕಡಾ 80ರವರೆಗೆ ತಡೆಯುತ್ತದೆ ಎಂದು ಹೈದರಾಬಾದ್ ಮೂಲದ ಸಂಸ್ಥೆಯು ಹೇಳಿದೆ, “ಅಕಾಲಿಕ ಮರಣಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದ್ದು, ಆರೋಗ್ಯಕರ ಜೀವನಶೈಲಿ ಪಾಲಿಸಬೇಕು ಎಂದು ಹೇಳಿದೆ.

ಭಾರತೀಯರಿಗೆ ಆಹಾರದ ಮಾರ್ಗಸೂಚಿಗಳು ಪೌಷ್ಟಿಕಾಂಶದ ಕೊರತೆಯ ಎಲ್ಲಾ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟಲು ಮತ್ತು ಅತ್ಯುತ್ತಮ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಖಾತ್ರಿಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ. ಸಕ್ಕರೆಗಳು ಮತ್ತು ಕೊಬ್ಬಿನಿಂದ ತುಂಬಿದ ಹೆಚ್ಚು ಸಂಸ್ಕರಿಸಿದ ಆಹಾರಗಳ ಸೇವನೆ ಇತ್ತೀಚೆಗೆ ಜನರಲ್ಲಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಕಡಿಮೆ ದೈಹಿಕ ಚಟುವಟಿಕೆ ಮತ್ತು ವೈವಿಧ್ಯಮಯ ಆಹಾರಗಳನ್ನು ಸೇವಿಸದಿರುವುದು, ಸೂಕ್ಷ್ಮ ಪೋಷಕಾಂಶಗಳ ಕೊರತೆಗಳು ಭಾರತೀಯರಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯತೆಯ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ.

ಮಾರ್ಗದರ್ಶಿ ಸೂತ್ರಗಳು ಸಮತೋಲಿತ ಆಹಾರವನ್ನು ಸೇವಿಸುವುದರ ಮೇಲೆ ಕೇಂದ್ರೀಕರಿಸುತ್ತವೆ; ತರಕಾರಿಗಳು ಮತ್ತು ದ್ವಿದಳ ಧಾನ್ಯಗಳು; ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಪೋಷಣೆ; ಶಿಶುಗಳು, ಮಕ್ಕಳು ಮತ್ತು ಹದಿಹರೆಯದವರಿಗೆ ಆಹಾರ; ವಯಸ್ಸಾದವರಿಗೆ ಪೌಷ್ಟಿಕಾಂಶ-ಭರಿತ ಆಹಾರಗಳು ಸೇರಿದಂತೆ; ಸುರಕ್ಷಿತ, ಶುದ್ಧ ಆಹಾರ ಸೇವನೆ; ಸಾಕಷ್ಟು ಪ್ರಮಾಣದ ನೀರು ಕುಡಿಯುವುದು, ತರಕಾರಿಗಳು, ಹಣ್ಣುಗಳು, ಹಸಿರು ಎಲೆಗಳ ತರಕಾರಿಗಳು, ಬೇರುಗಳು ಮತ್ತು ಗಡ್ಡೆಗಳು ಸೇವಿಸಬೇಕೆಂದು ಹೇಳಿದೆ.

ನಾವು ಆಹಾರ ತಿನ್ನುವ ತಟ್ಟೆಯಲ್ಲಿ ಯಾವುದಿರಬೇಕು ಮತ್ತು ಯಾವುದಿರಬಾರದು ಎಂದು ಪಟ್ಟಿ ಮಾಡಿರುವ ಸಂಸ್ಥೆ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳು ಮತ್ತು ಮೈಕ್ರೋನ್ಯೂಟ್ರಿಯಂಟ್‌ಗಳನ್ನು ಸೋರ್ಸಿಂಗ್ ಮಾಡಲು ಮಾರ್ಗಸೂಚಿಗಳು ಶಿಫಾರಸು ಮಾಡಿದೆ. ಇತರ ಪ್ರಮುಖ ಭಾಗವನ್ನು ಧಾನ್ಯಗಳು ಮತ್ತು ರಾಗಿಗಳು ಆಕ್ರಮಿಸಿಕೊಂಡಿವೆ, ನಂತರ ಬೇಳೆಕಾಳುಗಳು, ಮಾಂಸದ ಆಹಾರಗಳು, ಮೊಟ್ಟೆಗಳು, ಬೀಜಗಳು, ಎಣ್ಣೆ ಬೀಜಗಳು ಮತ್ತು ಹಾಲು, ಮೊಸರು ಸೇರಿಕೊಂಡಿವೆ.

ಸಿರಿಧಾನ್ಯಗಳು ದಿನಕ್ಕೆ ಒಟ್ಟು ಶಕ್ತಿಯ ಶೇಕಡಾ 50 ರಿಂದ ಶೇಕಡಾ 70ರಷ್ಟು ಕೊಡುಗೆ ನೀಡುತ್ತವೆ ಎಂದು ಅದು ಉಲ್ಲೇಖಿಸಿದೆ. ಬೇಳೆಕಾಳುಗಳು, ಮಾಂಸ, ಕೋಳಿ ಮತ್ತು ಮೀನುಗಳು ದಿನಕ್ಕೆ ಒಟ್ಟು ಶಕ್ತಿಯ ಸೇವನೆಯ ಶೇಕಡಾ 6 ರಿಂದ 9 ರಷ್ಟು ಕೊಡುಗೆ ನೀಡುತ್ತವೆ, ಈ ಆಹಾರಗಳಿಂದ ಶಿಫಾರಸು ಮಾಡಲಾದ ಒಟ್ಟು ಶಕ್ತಿಯ ಶೇಕಡಾ 14ರಷ್ಟು ಪ್ರಮಾಣದಲ್ಲಿ ಸಿಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT