Russia discusses cooperation in pulses trade with India 
ಜೀವನಶೈಲಿ

ಭಾರತದಲ್ಲಿ ಬೇಳೆಕಾಳು, ಸಿರಿಧಾನ್ಯ ಬಳಕೆ ಶೇ.5 ರಷ್ಟು ಇಳಿಕೆ, ಆಹಾರೇತರ ವಸ್ತುಗಳಿಗೆ ಹೆಚ್ಚು ಪ್ರಾಮುಖ್ಯತೆ: ಎಸ್‌ಬಿಐ ವರದಿ

ವರದಿಯು ಹಲವಾರು ಪ್ರಮುಖ ಪ್ರವೃತ್ತಿಗಳನ್ನು ಬಹಿರಂಗಪಡಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಧಾನ್ಯಗಳು ಮತ್ತು ಬೇಳೆಕಾಳುಗಳ ಬಳಕೆ ಗಣನೀಯವಾಗಿ ಕುಸಿದಿದ್ದು, ಶೇಕಡಾ 5ರಷ್ಟು ಕಡಿಮೆಯಾಗಿದೆ.

ನವದೆಹಲಿ: ಭಾರತೀಯ ಕುಟುಂಬಗಳು ಕಳೆದ 12 ವರ್ಷಗಳಲ್ಲಿ ತಮ್ಮ ಖರ್ಚಿನ ಮಾದರಿಯನ್ನು ಗಣನೀಯವಾಗಿ ಬದಲಾಯಿಸಿಕೊಂಡಿದ್ದು, ಆಹಾರದಿಂದ ಆಹಾರೇತರ ವಸ್ತುಗಳತ್ತ ಗಮನ ಹರಿಸುತ್ತಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದ ವಿಶ್ಲೇಷಣಾ ವರದಿ ತಿಳಿಸಿದೆ.

ವರದಿಯು ಹಲವಾರು ಪ್ರಮುಖ ಪ್ರವೃತ್ತಿಗಳನ್ನು ಬಹಿರಂಗಪಡಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಧಾನ್ಯಗಳು ಮತ್ತು ಬೇಳೆಕಾಳುಗಳ ಬಳಕೆ ಗಣನೀಯವಾಗಿ ಕುಸಿದಿದ್ದು, ಶೇಕಡಾ 5ರಷ್ಟು ಕಡಿಮೆಯಾಗಿದೆ.

"ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 'ಧಾನ್ಯ ಮತ್ತು ದ್ವಿದಳ ಧಾನ್ಯಗಳ' ಬಳಕೆಯಲ್ಲಿ ಗಮನಾರ್ಹ ಇಳಿಕೆ(ಶೇ. 5 ಕ್ಕಿಂತ ಹೆಚ್ಚು)ಯಾಗಿದೆ ಎಂದು ವರದಿ ಹೇಳಿದೆ.

ಈ ಬದಲಾವಣೆಯು ಆರ್ಥಿಕ ಬೆಳವಣಿಗೆ, ಸರ್ಕಾರದ ನೀತಿಗಳು ಮತ್ತು ಜೀವನಶೈಲಿಯ ಬದಲಾವಣೆಗಳಿಂದ ಪ್ರೇರಿತವಾಗಿದೆ ಎಂದು ವರದಿ ಗಮನಿಸಿದೆ.

"ಭಾರತೀಯರು ಆಹಾರದಿಂದ ಆಹಾರೇತರ ವಸ್ತುಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಕಳೆದ 12 ವರ್ಷಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗ್ರಾಹಕರ ಆದ್ಯತೆಗಳಲ್ಲಿನ ಬದಲಾವಣೆಯು ಆಸಕ್ತಿದಾಯಕವಾಗಿದೆ. ಇದು ಆಹಾರ ಪದಾರ್ಥಗಳ ಮೇಲಿನ ವೆಚ್ಚದ ಪಾಲು ಗಣನೀಯ ಕುಸಿತವನ್ನು ಎತ್ತಿ ತೋರಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ, ಆಹಾರದ ಮೇಲಿನ ಖರ್ಚು 2011-12 ರಲ್ಲಿ ಶೇಕಡಾ 52.9 ರಿಂದ 2023-24 ರಲ್ಲಿ ಶೇಕಡಾ 47.04 ಕ್ಕೆ ಇಳಿದಿದೆ. ಇದು ಶೇಕಡಾ 5.86 ರಷ್ಟು ಕುಸಿತವನ್ನು ಸೂಚಿಸುತ್ತದೆ.

ಇನ್ನು ನಗರ ಪ್ರದೇಶಗಳು ಗಮನಾರ್ಹವಾದ ಇಳಿಕೆಗೆ ಸಾಕ್ಷಿಯಾಗಿದ್ದು, 2011-12 ರಲ್ಲಿ ಶೇ. 42.62 ರಿಂದ 2023-24 ರಲ್ಲಿ ಶೇ. 39.68 ಕ್ಕೆ ಕುಸಿದಿದೆ. ಇದು ಶೇ. 2.94 ರಷ್ಟು ಕುಸಿತವನ್ನು ಸೂಚಿಸುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ಮನೆಯ ಬಜೆಟ್‌ನಲ್ಲಿ ಆಹಾರೇತರ ವಸ್ತುಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ. ಗ್ರಾಮೀಣ ಪ್ರದೇಶಗಳಲ್ಲಿ ಆಹಾರೇತರ ವೆಚ್ಚದ ಪಾಲು 2011-12 ರಲ್ಲಿ ಶೇಕಡಾ 47.1 ರಿಂದ 2023-24 ರಲ್ಲಿ ಶೇಕಡಾ 52.96ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಶೇಕಡಾ 5.86 ರಷ್ಟು ಏರಿಕೆ ದಾಖಲಿಸಿದೆ.

ನಗರ ಪ್ರದೇಶಗಳು ಸಹ ಆಹಾರೇತರ ವೆಚ್ಚದಲ್ಲಿ ಬೆಳವಣಿಗೆ ಕಂಡಿದ್ದು, ಶೇ. 57.38 ರಿಂದ ಶೇ. 60.32ಕ್ಕೆ ಏರಿಕೆಯಾಗಿದೆ. ಇದು ಶೇ. 2.94 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT