ಆಶುತೋಶ್ ಮಹಾರಾಜ್ ಆಶ್ರಮ 
ಹಿನ್ನೋಟ 2014

ಪಂಜಾಬ್ ಸರ್ಕಾರಕ್ಕೆ ತಲೆನೋವಾದ ಆಶುತೋಶ್ ಮಹಾರಾಜ್ ಪ್ರಕರಣ

ದೇಶದಲ್ಲಿನ ಮೌಢ್ಯತೆಯ ಪರಮಾವಧಿಗೆ ಹಿಡಿದ ಕೈಗನ್ನಡಿ ಎಂದರೆ ಪಂಜಾಬ್‌ನ ಬಾಬಾ ಆಶುತೋಷ್ ಮಹಾರಾಜ್ ಪ್ರಕರಣ. ಜೀವಂತ ಸಮಾಧಿಗೆ ತೆರಳಿ 11 ತಿಂಗಳ ಹಿಂದೆಯೇ ನಿಧನರಾಗಿರುವ ಬಾಬಾ ಆಶುತೋಷ್ ಮಹಾರಾಜ್ ಅವರು ಬದುಕಿದ್ದಾರೆ. ಸಮಾಧಿ ಸ್ಥಿತಿಯಿಂದ ಎದ್ದು ಬರುತ್ತಾರೆ ಎಂದು ನಂಬಿರುವ ಸಾವಿರಾರು ಭಕ್ತರು ಅವರ ಸಮಾಧಿಯನ್ನು ಸೈನಿಕರಂತೆ ಕಾಯುತ್ತಿದ್ದಾರೆ. ಇತ್ತ ಮೃತರಾಗಿರುವ ತಮ್ಮ ತಂದೆಯ ಶವವನ್ನು ಅಂತಿಮ ಸಂಸ್ಕಾರ ಮಾಡಲು ಅನುವು ಮಾಡಿಕೊಡಿ ಎಂದು ಅವರ ಮಗ ದಿಲೀಪ್ ಕುಮಾರ್ ಝಾ ಪಂಜಾಬ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ 15 ದಿನದಲ್ಲಿ ಬಾಬಾ ಆಶುತೋಷ್ ಮಹಾರಾಜ್ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕೆ ಒಳಪಡಿಸಬೇಕು ಎಂದು ಹೇಳಿತ್ತು. ಈ ವಿಚಾರದಲ್ಲಿ ನಿಜವಾಗಿ ಬಲಿಪಶುಗಾಳಿಗಿದ್ದು ಮಾತ್ರ ಪಂಜಾಬ್ ಪೊಲೀಸರು. ಏಕೆಂದರೆ ಅತ್ತ ಹೈಕೋರ್ಟ್ 15 ದಿನದಲ್ಲಿ ಶವ ಸಂಸ್ಕಾರ ಮಾಡಿ ಎಂದು ಆದೇಶಿಸಿದೆ. ಇತ್ತ ಜಲಂಧರ್‌ನಲ್ಲಿರುವ ಬಾಬಾ ಆಶ್ರಮದಲ್ಲಿ ಸಾವಿರಾರು ಭಕ್ತರು ಶಸ್ತ್ರ ಸಜ್ಜಿತರಾಗಿ ಯಾವುದೇ ಕಾರಣಕ್ಕೂ ಬಾಬಾ ಅವರ ದೇಹವನ್ನು ಮುಟ್ಟಲು ಬಿಡುವುದಿಲ್ಲ ಎಂದು ಕಾವಲು ಕಾಯುತ್ತಿದ್ದಾರೆ.

ಹೀಗಾಗಿ ಪಂಜಾಬ್ ಪೊಲೀಸರು ಯಾವುದೇ ಕ್ರಮ ಕೈಗೊಂಡರೂ ಅವರಿಗೇ ತಿರುಗುಬಾಣವಾಗುವ ಸಾಧ್ಯತೆ ಇದೆ. ಬಾಬಾ ರಾಂಪಾಲ್ ಪ್ರಕರಣವನ್ನು ಮರೆಯದ ಪಂಜಾಬ್ ಪೊಲೀಸರು ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದ್ದು, ನಿಧಾನವಾಗಿ ಭಕ್ತರನ್ನು ಓಲೈಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಒಟ್ಟಾರೆ ಬಾಬಾ ಆಶುತೋಶ್ ಅಂತಿಮ ಸಂಸ್ಕಾರ ಪ್ರಕರಣ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT