ದೇವಯಾನಿ ಖೋಬ್ರಾಗಡೆ 
ಹಿನ್ನೋಟ 2014

ದೇವಾಯಾನಿ ಖೋಬ್ರಾಗಡೆ ಪ್ರಕರಣ

ಈ ಪ್ರಕರಣ 2013ರ ಅಂತ್ಯದಲ್ಲೇ ಬೆಳಕಿಗೆ ಬಂದಿತ್ತಾದರೂ ದೇಶಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದ್ದು ಮಾತ್ರ 2014ರ ಆರಂಭದಲ್ಲಿ. ಅಮೆರಿಕದಲ್ಲಿರುವ ಭಾರತೀಯ ರಾಜತಂತ್ರಜ್ಞೆ ದೇವಯಾನಿ ಖೋಬ್ರಾಗಡೆ ಅವರು ಮನೆಕೆಲಸದಾಕೆ ಮೇಲೆ ದೈಹಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಅವರನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದರು.

ಆದರೆ ಬಂಧನಕ್ಕೂ ಮುನ್ನ ರಾಜತಂತ್ರ ನೀತಿಗಳನ್ನು ಪಾಲಿಸದ ಅಮೆರಿಕ ಅಧಿಕಾರಿಗಳು ಈ ಬಗ್ಗೆ ಭಾರತಕ್ಕೆ ಯಾವುದೇ ರೀತಿಯ ಮಾಹಿತಿ ನೀಡಿದೇ ಏಕಾಏಕಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ದೇವಯಾನಿ ಅವರನ್ನು ತನಿಖಾಧಿಕಾರಿಗಳು ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದರು ಎಂಬ ವಿಚಾರ ಭಾರತದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಮೆರಿಕದಲ್ಲಿ ಭಾರತೀಯ ರಾಯಭಾರಿಯಾಗಿದ್ದ ದೇವಯಾನಿ ಕೋಬ್ರಾಗಡೆ ಅವರ ಮನೆಕೆಲಸದಾಕೆ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಭಾರತೀಯ ಮೂಲದವರೇ ಆದ ಮನೆಕೆಲಸದಾಕೆ ದೂರು ಸಲ್ಲಿಕೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ತನಿಖಾಧಿಕಾರಿಗಳು ದೇವಯಾನಿ ಕೋಬ್ರಾಗಡೆ ಅವರನ್ನು ಬಂಧಿಸಿ ಅವರ ವಿರುದ್ಧ ದೈಹಿಕ ಹಲ್ಲೆ ಪ್ರಕರಣ ದಾಖಸಿದ್ದರು. ಇದಷ್ಟೇ ಅಲ್ಲದೇ ದೇವಯಾನಿ ಅವರ ವಿರುದ್ಧ ವೀಸಾ ವಂಚನೆ ಪ್ರಕರಣದಂತಹ ಗಂಭೀರ ಆರೋಪವನ್ನು ಮಾಡಿ ಅವರ ವಿರುದ್ಧ ತನಿಖೆಗೆ ಮುಂದಾಗಿದ್ದರು.

ಈ ಪ್ರಕರಣ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯಕ್ಕೆ ಹಿನ್ನಡೆಯಾಗಿದ್ದಲ್ಲದೇ, ಪರಸ್ಪರ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಒಂದು ಹಂತದಲ್ಲಿಯಂತೂ ಭಾರತ, ರಾಜಧಾನಿ ನವದೆಹಲಿಯಲ್ಲಿದ್ದ ಅಮೆರಿಕ ರಾಯಭಾರ ಕಚೇರಿಗೆ ನೀಡಿದ್ದ ವಿವಿಧ ಬಗೆಯ ಸವಲತ್ತುಗಳನ್ನು ಏಕಾಏಕಿ ನಿಲ್ಲಿಸಿತ್ತು. ಅಲ್ಲದೆ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳಿಗೂ ಕೂಡ ನೋಟಿಸ್ ನೀಡುವ ಮೂಲಕ ಅಮೆರಿಕಕ್ಕೆ ದಿಟ್ಟ ಉತ್ತರ ನೀಡಿತ್ತು. ಈ ಘಟನೆಯ ಬಳಿಕ ಕೊಂಚ ಮೆತ್ತಗಾಗಿದ್ದ ಅಮೆರಿಕ ಬಳಿಕ ತಾನು ಯಾವುದೇ ಕಾರಣಕ್ಕೂ ದೇವಯಾನಿ ವಿರುದ್ಧ ಪ್ರಕರಣದ ವಿಚಾರಣೆಯನ್ನು ಕೈ ಬಿಡುವುದಿಲ್ಲ ಎಂದು ತನ್ನ ವಾದವನ್ನು ಮುಂದಿಟ್ಟಿತು.

ಇನ್ನು ಪ್ರಕರಣದಲ್ಲಿ ಅಮೆರಿಕ ಅಧಿಕಾರಿಗಳು ಕೊಂಚ ಹೆಚ್ಚೇ ಎನ್ನುವಂತೆ ತಾವು ಮಾಡಿದ್ದೇ ಸರಿ ಎನ್ನುವಂತಹ ಮೊಂಡುವಾದ ಮುಂದಿಟ್ಟಿದ್ದರು. ಹೀಗಾಗಿ ಅಮೆರಿಕಕ್ಕೆ ದಿಟ್ಟ ಉತ್ತರ ನೀಡಿದ್ದ ಭಾರತ ದೇವಯಾನಿ ಖೋಬ್ರಾಗಡೆ ಅವರಿಗೆ ಭಡ್ತಿ ನೀಡಿದ್ದಲ್ಲದೇ ವಿಶ್ವಸಂಸ್ಥೆ ಕಚೇರಿಗೆ ಅವರನ್ನು ರವಾನೆ ಮಾಡಿತು. ಭಾರತದ ಈ ದಿಟ್ಟ ನಡೆಯಿಂದ ಕೊಂಚ ಮುಜುಗರಕ್ಕೊಳಗಾದ ಅಮೆರಿಕ ತದ ನಂತರ ಮೆತ್ತಗಾಯಿತು. ಈ ವಿಚಾರ ಸಂಸತ್ ಉಭಯ ಸದನಗಳಲ್ಲಿ ಕೋಲಾಹಲವನ್ನೇ ಎಬ್ಬಿಸಿತ್ತಲ್ಲದೇ, ದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT