ಹಫೀಜ್ ಸಯೀದ್ 
ದೇಶ

ಪ್ರತೀಕಾರ ತೀರಿಸಿಯೇ ಸಿದ್ಧ

ಜಮ್ಮು ಮತ್ತು ಕಾಶ್ಮೀರದಲ್ಲಿ 11 ಮಂದಿ ಯೋಧರನ್ನು ಕಳೆದುಕೊಂಡು ನೋವನ್ನು ಭಾರತ ಅನುಭವಿಸುತ್ತಿದ್ದರೆ...

ಜಮ್ಮು ಮತ್ತು ಕಾಶ್ಮೀರದಲ್ಲಿ  11 ಮಂದಿ ಯೋಧರನ್ನು ಕಳೆದುಕೊಂಡು ನೋವನ್ನು ಭಾರತ ಅನುಭವಿಸುತ್ತಿದ್ದರೆ, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ಧರ್ಮ ಯುದ್ಧವನ್ನು ಗೆದ್ದೇ ಗೆಲ್ಲುತ್ತೇನೆ ಎನ್ನುವ  ಮೂಲಕ ಭಾರತದ ಗಾಯಯಕ್ಕೆ ಉಪ್ಪು ಸವರಿದ್ದಾನೆ. ಕಣಿವೆ ರಾಜ್ಯದಲ್ಲಿ ಸರಣಿ ಆತ್ಮಾಹುತಿ  ದಾಳಿ ಬಳಿಕ ಟ್ವೀಟ್ ಮಾಡಿರುವ ಪಾತಕಿ ಸಯೀದ್, ಧರ್ಮಯುದ್ಧವನ್ನು ತಡೆಯಲಾಗದು. ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಕ್ಕೇ ಸಿಗುತ್ತದೆ. 1971 ರ ಘಟನೆಗೆ ಪ್ರತೀಕಾರ ತೀರಿಸಿಯೇ ತೀರಿಸುತ್ತೇವೆ.
ಗುಜರಾತ್ ಗಲಭೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುತ್ತೇವೆ. ಇನ್‌ಷಾ ಅಲ್ಲಾಹ್ ಎಂದಿದ್ದಾರೆ. ಈ ಮೂಲಕ ದಾಳಿಯಲ್ಲಿ ಪಾಕ್ ಕೈವಾಡ ಇರುವುದನ್ನು ಈತನೇ ಸ್ಪಷ್ಟಪಡಿಸಿದ್ದಾನೆ.

ಭಾರತದಿಂದ ಮುಕ್ತಿ ಪಡೆಯಲು ಕಾಶ್ಮೀರಿಗಳಿಗೆ ಪಾಕ್ ಸರ್ಕಾರ ನೆರವಾಗಬೇಕು ಎಂದೂ ಹೇಳಿದ್ದಾನೆ ಸಯೀದ್. ಭಾರತವು ಆಫ್ಘನ್‌ಗೆ ಸೇನೆ ಕಳುಹಿಸಬಹುದು ಎಂದರೆ ಮುಜಾಹಿದೀನ್‌ಗಳಿಗೂ ಕಾಶ್ಮೀರಕ್ಕೆ ತೆರಳುವ ಅಧಿಕಾರ ಇದೆ. ಕಾಶ್ಮೀರ ವಿವಾದವನ್ನು ಪರಿಹರಿಸದೇ ಇದ್ದಲ್ಲಿ ಇಂತಹ  ಜಿಹಾದ್ ಮುಂದುವರಿಯಲಿದೆ ಎನ್ನುವ ಮೂಲಕ ಪ್ರಧಾನಿ ಮೋದಿಗೆ ಸಯೀದ್ ನೇರ ಎಚ್ಚರಿಕೆ ನೀಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT