ಜಾನಕಿರಾಮ್ ಅಂತ್ಯಕ್ರಿಯೆಗೂ ಮೊದಲು ನಡೆದ ಅಂತಿಮಯಾತ್ರೆ (ಸಂಗ್ರಹ ಚಿತ್ರ) 
ದೇಶ

ನಂದಮೂರಿ ಜಾನಕಿರಾಮ್ ಅಂತ್ಯಕ್ರಿಯೆ ಪೂರ್ಣ

ಶನಿವಾರ ರಸ್ತೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಎನ್‌ಟಿಆರ್ ಮೊಮ್ಮಗ ಜಾನಕಿ ರಾಮ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಹೈದರಾಬಾದ್: ಶನಿವಾರ ರಸ್ತೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಎನ್‌ಟಿಆರ್ ಮೊಮ್ಮಗ ಜಾನಕಿ ರಾಮ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಹೈದರಾಬಾದ್‌ನ ಹೊರವಲಯದಲ್ಲಿರುವ ಮೊಯಿನಾಬಾದ್‌ನಲ್ಲಿರುವ ಎನ್‌ಟಿಆರ್ ಕುಟುಂಬದ ಒಡೆತನದ ಫಾರಂಹೌಸ್‌ನಲ್ಲಿ ಜಾನಕಿ ರಾಮ್ ಅವರ ಮೃತದೇಹದ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಯಿತು. ಅಂತ್ಯಕ್ರಿಯೆ ವೇಳೆ ಆಂಧ್ರಪ್ರದೇಶದ ಪ್ರಮುಖ ರಾಜಕಾರಣಿಗಳು, ಚಿತ್ರತಾರೆಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಎನ್‌ಟಿಆರ್ ಅವರ ಮಗ ಹರಿಕೃಷ್ಣ ಅವರ ಪುತ್ರ ಮತ್ತು ಜೂ.ಎನ್‌ಟಿಆರ್ ಅವರ ಸಹೋದರರಾಗಿರುವ ಜಾನಕಿರಾಮ್ ಅವರು ನಿನ್ನೆ ಆಂಧ್ರಪ್ರದೇಶದ ನಲ್ಗೊಂಡ ಬಳಿ ರಸ್ತೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಸ್ಕಾರ್ಪಿಯೋ ವಾಹನದಲ್ಲಿ ಚಲಿಸುತ್ತಿದ್ದ ಜಾನಕಿರಾಮ್ ಅವರು ಟ್ರಾಕ್ಟರ್‌ಗೆ ಗುದ್ದಿದ್ದರು. ಈ ವೇಳೆ ಅವರ ಹೃದಯ ಮತ್ತು ತಲೆಗೆ ಬಲವಾದ ಪೆಟ್ಟುಬಿದ್ದಿತ್ತು.

ಕೂಡಲೇ ಅವರನ್ನು ಕೋದಾಡ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿತಾದರೂ, ಹೃದಯಕ್ಕೆ ಬಿದ್ದಿದ್ದ ಬಲವಾದ ಪೆಟ್ಟಿನಿಂದಾಗಿ ರಕ್ತ ಪರಿಚಲನೆಯಾಗದೇ ಅವರು ನಿಧನರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT