ದೇಶ

ನೈಟಿ ಧರಿಸುವ ಮಹಿಳೆಗೆ 500 ರೂ.ದಂಡ!

ಈ ಗ್ರಾಮದ ಮಹಿಳೆಯರು ನೈಟಿ ಧರಿಸಿ ಮನೆಯಿಂದ ಹೊರ ಬರಬಾರದು...

ಮುಂಬೈ: ನೈಟಿ ಧರಿಸಿ ಮನೆಯಿಂದ ಹೊರ ಬಂದರೆ, 500 ರೂಪಾಯಿ ದಂಡ ಕಟ್ಟಬೇಕು ಎಂದು ಮಹರಾಷ್ಟ್ರ ಗ್ರಾಮವೊಂದರಲ್ಲಿ ಆದೇಶ ಹೊರಡಿಸಿರುವುದು ಬಾರಿ ಚರ್ಚೆಗೆ ಕಾರಣವಾಗಿದೆ.

ಮಹಾರಾಷ್ಟ್ರದ ನವಿ ಮುಂಬೈ ಪ್ರದೇಶದ ಸಮೀಪವಿರುವ ಗೋಟಿವಲಿ ಎಂಬ ಗ್ರಾಮದಲ್ಲಿ 'ಇಂದ್ರಯಾಣಿ ಮಹಿಳಾ ಮಂಡಲ್‌' ಎಂಬ ಮಹಿಳಾ ಸಂಘಟನೆ, ತನ್ನ ಕಚೇರಿಯ ಹೊರ ಭಾಗದಲ್ಲಿ ನಾಮಫಲಕವನ್ನು ಹಾಕುವ ಮೂಲಕ ತಲ್ಲಣ ಮೂಡಿಸಿದೆ.

ಈ ಗ್ರಾಮದ ಮಹಿಳೆಯರು ನೈಟಿ ಧರಿಸಿ ಮನೆಯಿಂದ ಹೊರ ಬರಬಾರದು. ಮನೆಯ ಹೊರಗಡೆ ಅಥವಾ ರಸ್ತೆಗಳಲ್ಲಿ ಇಲ್ಲವೇ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ನೈಟಿ ಧರಿಸಿ ಓಡಾಡುವುದು ಕಂಡುಬಂದರೆ, ಆ ಮಹಿಳೆಯರು ರೂ.500 ದಂಡ ತೆರಬೇಕು ಎಂದು ಆ ನಾಮಫಲಕದಲ್ಲಿ ಸೂಚಿಸಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಯಾಣಿ ಮಹಿಳಾ ಮಂಡಲ್‌ದ ಸದಸ್ಯೆ ಲಕ್ಷ್ಮೀ ಪಾಟೀಲ್, ಮಹಿಳೆಯರ ವಿರುದ್ಧ ಪುರುಷರಲ್ಲಿ ಲೈಂಗಿಕ ಭಾವನೆಗಳನ್ನು ಕೆರಳಿಸುವಲ್ಲಿ ಮಹಿಳೆಯರು ಧರಿಸುವ ಉಡುಪುಗಳು ಪ್ರಮುಖ ಪಾತ್ರವಹಿಸುತ್ತವೆ.

ನಮ್ಮ ಗ್ರಾಮದಲ್ಲಿ ಈ ಹಿಂದೆ ದೇಹವನ್ನು ಮರೆಮಾಚುವ ಸೀರೆಗಳನ್ನು ಮಹಿಳೆಯರು ಧರಿಸುತ್ತಿದ್ದರು. ಆದರೆ ಇತ್ತೀಚೆಗೆ ನೈಟಿಯಂಥಹ ಉಡುಪುಗಳು ನಮ್ಮ ಭಾರತೀಯ ಸಂಸ್ಕೃತಿಗೆ ಮಾರಕವಾಗಿ ಪರಿಣಮಿಸಿದೆ.

ಮನೆಯೊಳಗೆ ಮಾತ್ರ ಧರಿಸಬೇಕಾಗಿರುವ ನೈಟಿ, ಇತ್ತೀಚೆಗೆ ಮಹಿಳೆಯರು ಅಂಗಡಿ ಹೋದರೂ, ರಸ್ತೆಗೆ ಹೋದರೂ, ಕೆಲವೊಮ್ಮೆ ದ್ವಿಚಕ್ರ ವಾಹನಗಳಲ್ಲಿ ತೆರಳುವಾಗಲೂ ನೈಟಿ ಧರಿಸಿ ಹೋಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದ್ದರಿಂದ ಮಹಿಳೆಯರ ಮಾನ ಹಾಗೂ ಗೌರವ ರಕ್ಷಣೆಯ ಸಲುವಾಗಿ ನಮ್ಮ ಗ್ರಾಮದಲ್ಲಿ ನೈಟಿ ಉಡುಪಿಗೆ ನಿಷೇಧ ಹೇರಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು.

ಈ ಮಹಿಳಾ ಸಂಘಟನೆಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮದ ಕೆಲ ಮಹಿಳೆಯರು, ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಮಹಿಳಾ ಸಂಘಟನೆಯ ಮನಒಲಿಕೆ ಮೂಲಕ ನಾಮಫಲಕವನ್ನು ತೆರವುಗೊಳಿಸಿದರು.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ, ಎಸ್.ಗೋಜ್ರೆ, ಮಹಿಳೆಯರು ಉಡುಪು ಧರಿಸುವ ವಿಚಾರದಲ್ಲಿ ಯಾವುದೇ ಸಂಘ ಸಂಸ್ಥೆಗಳಿಗೆ ಅಧಿಕಾರ ಇಲ್ಲ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT