ಹೆರ್ವ್ ಫಾಲ್ಸಿಯಾನಿ 
ದೇಶ

ಹೆರ್ವ್ ವಿರುದ್ಧ ಕಳವು ಆರೋಪ

ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ ವಾಪಸ್...

ಜಿನೇವಾ: ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ ವಾಪಸ್ ತರಲು ಹೆಣಗಾಡುತ್ತಿರುವ ಭಾರತ ಸರ್ಕಾರಕ್ಕೆ ನೆರವು ನೀಡುವುದಾಗಿ ಘೋಷಿಸಿದ್ದ ಮಾಹಿತಿದರ  ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಚ್‌ಎಸ್‌ಬಿಸಿ ಬ್ಯಾಂಕಿನಲ್ಲಿ ನೌಕರನಾಗಿದ್ದ ಹೆರ್ವ್ ವಿರುದ್ಧ ಸ್ವಿಜರ್ಲೆಂಡ್ ಅಧಿಕಾರಿಗಳು ದತ್ತಾಂಶ ಕಳವು ಆರೋಪ ಹೊರಿಸಿದ್ದಾರೆ.

ಬ್ಯಾಂಕಿನಲ್ಲಿ ಸಿಸ್ಟಂ ಎಂಜಿನಿಯರ್ ಆಗಿದ್ದ ವೇಳೆ ಬ್ಯಾಂಕಿನ ಗ್ರಾಹರಕರ ಹಲವಾರು ರಹಸ್ಯ ಮಾಹಿತಿಗಳನ್ನು ಹೆರ್ವ್ ಕದ್ದಿದ್ದರು. ಇದನ್ನು ದೇಶದ ಬ್ಯಾಂಕಿಂಗ್ ಕ್ಷೇತ್ರದ ಅತಿದೊಡ್ಡ ಭದ್ರತಾ ಲೋಪ ಎಂದೇ ಪರಿಗಣಿಸಲಾಗಿತ್ತು.

ಎಚ್‌ಎಸ್‌ಬಿಸಿ ಬ್ಯಾಂಕಿನ ಸ್ವಿಸ್ ಶಾಖೆಯಿಂದ 2006ರಿಂದ 2007ರ ಅವಧಿಯಲ್ಲಿ ಹೆರ್ವ್ ಸುಮಾರು 24 ಸಾವಿರ ಗ್ರಾಹಕರ ಮಾಹಿತಿಯನ್ನು ಕಳವು ಮಾಡಿದ್ದರು. ಜತೆಗೆ ಈ ಮಾಹಿತಿಯನ್ನು ಲೆಬನಾನ್ ಬ್ಯಾಂಕಿಗೆ, ಪ್ಯಾರಿಸ್ ಮೂಲಕ ನ್ಯಾಷನಲ್ ಡೈರೆಕ್ಟೂರೇಟ್ ಆಫ್ ಟ್ಯಾಕ್ಸ್ ಇನ್ವೆಸ್ಟಿಗೇಷನ್ಸ್ ಮತ್ತು ಇತರೆ ರಾಷ್ಟ್ರಗಳ ಅಧಿಕಾರಿಗಳಿಗೆ ರವಾನಿಸಲಾಗಿತ್ತು.

ಖಾತೆಗಳ ಮಾರಿತಿಯನ್ನು ಫ್ರಾನ್ಸ್‌ನ ವಿತ್ತ ಸಚಿವ ಕ್ರಿಸ್ಟಿನ್ ಲಗಾರ್ಡೆ ಅವರಿಗೂ ಕಳುಹಿಸಲಾಗಿದ್ದು, ಅವರು ಇದನ್ನು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.

2008ರಲ್ಲಿ ಹೆರ್ವ್ ಅವರು ಸ್ವಿಜರ್ಲೆಂಡ್ ಅನ್ನು ತೊರೆದ ಬಳಿಕ ಅವರು ಭಾರಿ ಸುದ್ದಿಯಾಗಿದ್ದರು. ಕೆಲವರು ಅವರನ್ನು ಹೀರೋ ಎಂದೇ ಪರಿಗಣಿಸಿದ್ದರು. ಈಗ ಹೆರ್ವ್ ವಿರುದ್ದ ಗಂಭೀರ ಆರೋಪ ಹೊರಿಸಲಾಗಿರುವ ಕಾರಣ, ಕಳವಿಗೆ ಸಂಬಂಧಿಸಿ ಅವರು ಸ್ವಿಸ್ ಕೋರ್ಟ್‌ನಲ್ಲಿ ವಿವರಣೆ ನೀಡಲೇಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಪ್ತ ಗುಂಪಿನಿಂದ ಸ್ಪೋಟಕ ಸಂದೇಶ, ಡಾ. ಜಿ. ಪರಮೇಶ್ವರ್ ಹೇಳಿದ್ದೇನು?

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

SCROLL FOR NEXT