ನ್ಯಾ.ಎಂ.ಬಿ. ಶಾ ಮತ್ತು ನ್ಯಾ ಅರಿಜಿತ್ ಪಸಾಯತ್ 
ದೇಶ

'ತೆರಿಗೆ ತಪ್ಪಿಸುವುದನ್ನು ಕ್ರಿಮಿನಲ್ ಅಪರಾಧವನ್ನಾಗಿ ಪರಿಗಣಿಸಬೇಕು'

ತೆರಿಗೆ ತಪ್ಪಿಸುವುದು ಸಿವಿಲ್ ಅಪರಾಧವಾದರೆ ವಿದೇಶಿ ರಾಷ್ಟ್ರಗಳು ನಮ್ಮ ತನಿಖೆಗೆ ಸಹಕಾರ ನೀಡುವುದಿಲ್ಲ

ನವದೆಹಲಿ: ರೂ.50 ಲಕ್ಷಕ್ಕಿಂತ ಹೆಚ್ಚಿನ ತೆರಿಗೆ ತಪ್ಪಿಸುವುದನ್ನು ದೃಢೀಕೃತ ಅಪರಾಧ ಎಂದು ಪರಿಗಣಿಸಬೇಕು ಎನ್ನುವ ಸಲಹೆಯನ್ನು ಎಸ್ಐಟಿ ಸರ್ಕಾರಕ್ಕೆ ನೀಡಿದೆ.

ತೆರಿಗೆಗಳ್ಳತನಕ್ಕೆ ಸಂಬಂಧಿಸಿ ರಚಿಸಲಾಗಿದ್ದ ಉನ್ನತ ಸಮಿತಿಯೇ ಈ ಶಿಫಾರಸು ಮಾಡಿತ್ತು ಎಂದು ಕಪ್ಪುಹಣ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಉಪಾಧ್ಯಕ್ಷ ನ್ಯಾ ಅರಿಜಿತ್ ಪಸಾಯತ್ ಹೇಳಿದ್ದಾರೆ.

ದೊಡ್ಡಮೊತ್ತದ ಹಣದ ವರ್ಗಾವಣೆ ಮತ್ತು ಹಣವನ್ನು ಇಟ್ಟುಕೊಳ್ಳುವ ಕುರಿತೂ ನಿಯಂತ್ರಣ ಹೇರಬೇಕಿದೆ. ಈ ರೀತಿಯ ಕ್ರಮಗಳಿಂದ ಕಪ್ಪುಹಣಕ್ಕೆ ಕಡಿವಾಣ ಬೀಳಲಿದೆ. ಶಾಪಿಂಗ್ ಮಾಲ್ಗಳಲ್ಲೂ ರೂ.1 ರಿಂದ 2 ಲಕ್ಷ ವರೆಗಿನ ಹಣದ ವ್ಯವಹಾರ ನಡೆಯುತ್ತದೆ. ಇದರ ಮೇಲೂ ನಿಗಾ ಇಡುವಂತಾಗಬೇಕು ಎಂದಿದ್ದಾರೆ ನ್ಯಾ. ಪಸಾಯತ್ ಹೇಳಿದ್ದಾರೆ.

ಕನೂನು ತಿದ್ದುಪಡಿಯಾಗಲಿ: ಭಾರತೀಯರ ಕಪ್ಪುಹಣದ ಮಾಹಿತಿಯನ್ನು ಹೊರದೇಶಗಳು ಬಹಿರಂಗಪಡಿಸಲು ತೆರಿಗೆ ಕಾನೂನು ತಿದ್ದುಪಡಿ ಅಗತ್ಯವಿದೆ. ಹೀಗಾಗಿ ತೆರಿಗೆಗಳ್ಳತವನ್ನು ಗಂಭೀರ ಕ್ರಿಮಿನಲ್ ಅಪರಾಧವನ್ನಾಗಿ ಪರಿಗಣಿಸಬೇಕು ಎಂದು ತಂಡದ ಮುಖ್ಯಸ್ಥ ನ್ಯಾ.ಎಂ.ಬಿ. ಶಾ ಸರ್ಕಾರಕ್ಕೆ ನೀಡಿದ ಸಲಹೆ.

ಈ ರೀತಿಯ ಕಾನೂನು ತಿದ್ದುಪಡಿ ವಿದೇಶದಲ್ಲಿ ಇಟ್ಟಿರುವ ಭಾರತೀಯರ ಕಪ್ಪುಹಣ ವಾಪಸ್ ತರಲು ನೆರವು ನೀಡುವುದಷ್ಟೇ ಅಲ್ಲ. ದೇಶದಲ್ಲೂ ತೆರಿಗೆಗಳ್ಳತನ ಮಾಡಿ ಕೂಡಿಟ್ಟ ಹಣಕ್ಕೂ ಕಡಿವಾಣ ಹಾಕಲಿದೆ ಎಂದಿದ್ದಾರೆ.

ಸದ್ಯ ತೆರಿಗೆ ತಪ್ಪಿಸುವುದು ಸಿವಿಲ್ ಅಪರಾಧ. ಹಾಗಾಗಿ ಅದನ್ನು ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ತನಿಖೆ ನಡೆಸಲಾಗುತ್ತದೆ. ವಿದೇಶಿ ಕರೆನ್ಸಿ ಉಲ್ಲಂಘನೆಯನ್ನು ಫೆಮಾ ಅಡಿ ವಿಚಾರಣೆ ನಡೆಸಲಾಗುತ್ತದೆ. ತೆರಿಗೆ ತಪ್ಪಿಸುವುದು ಸಿವಿಲ್ ಅಪರಾಧವಾದರೆ ವಿದೇಶಿ ರಾಷ್ಟ್ರಗಳು ನಮ್ಮ ತನಿಖೆಗೆ ಸಹಕಾರ ನೀಡುವುದಿಲ್ಲ ಎಂದರು.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT