ಭಾರಿ ಭದ್ರತಾ ವ್ಯವಸ್ಥೆ ಹೊಂದಿರುವ ದೆಹಲಿಯಲ್ಲಿರುವ ತಿಹಾರ್ ಜೈಲು (ಸಂಗ್ರಹ ಚಿತ್ರ) 
ದೇಶ

ಜೈಲಲ್ಲೂ ಜನಧನ ಜಾದೂ

ತಿಹಾರ್ ಜೈಲಿನ ಖೈದಿಗಳಿಗೆ ವಿಮೆ, ಇಂಜಿಯನ್ ಬ್ಯಾಂಕ್ ಸಹಯೋಗ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಧನ ಯೋಜನೆ ಈಗ ತಿಹಾರ್ ಜೈಲಿನ ಬಾಗಿಲನ್ನೂ ತಟ್ಟಿದೆ. ಖೈದಿಗಳಿಗೆ ಇದು ಹೊಸ ವರ್ಷದ ಉಡುಗೊರೆ.

ಅಚ್ಚರಿ ಪಡಬೇಡಿ. ದೆಹಲಿಯ ಅತಿ ಭದ್ರತೆಯ ತಿಹಾರ್ ಜೈನಿಲನಲ್ಲಿರುವ ಖೈದಿಗಳಿಗೆ ಜನಧನ ಯೋಜನೆಯನ್ವಯ ಜೀವವಿಮೆ ಮತ್ತು ಅಪಘಾತ ವಿಮೆ ಒದಗಿಸಲು ಸರ್ಕಾರ ಮುಂದಾಗಿದೆ. ಅದರಂತೆ, ಖೈದಿಗಳು ಶಿಕ್ಷೆ ಅನುಭವಿಸುತ್ತಿರುವಾಗಲೇ 1 ಲಕ್ಷ ರು. ಮೊತ್ತದ ಅಪಘಾತ ವಿಮೆ ಮತ್ತು 30 ಸಾವಿರ ಮೊತ್ತದ ಜೀವ ವಿಮೆ ಸೌಲಭ್ಯ ಪಡೆಯಲಿದ್ದಾರೆ.

4, 500 ಖೈದಿಗಳಿಗೆ ಅನುಕೂಲ
ದೇಶದ ಎಲ್ಲ ನಾಗರೀಕರಿಗೂ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ನಿಟ್ಟನಲ್ಲಿ ಪ್ರಧಾನಿ ಮೋದಿ ಅವರು ಆಗಸ್ಟ್ 28ರಂದು ಜನಧನ ಯೋಜನೆಗೆ ಚಾಲನೆ ನೀಡಿದ್ದರು. ಈಗ ಈ ಯೋಜನೆಯ ಲಾಭವನ್ನು ಖೈದಿಗಳಿಗೂ ವಿಸ್ತರಿಸಲಾಗಿದೆ. ದೋಷಿ ಎಂದು ಸಾಬೀತಾಗಿರುವ  ಸುಮಾರು 4, 500ರಷ್ಟು ಮಂದಿ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುತ್ತಿರುವ ಇಂಡಿಯನ್ ಬ್ಯಾಂಕ್ ಸಹಯೋಗದಲ್ಲಿ ಈ ಯೋಜನೆ ಜಾರಿ ಮಾಡಲಾಗುತ್ತದೆ.

ಇಂದಿನಿಂದಲೇ ಪ್ರಕ್ರಿಯೆ ಆರಂಭ
ಸೋಮವಾರ ಬ್ಯಾಂಕಿನ ಸಿಬ್ಬಂದಿ ತಿಹಾರ್ ಜೈಲಿಗೆ ತೆರಳಿ, ಯೋಜನೆ ಬಗ್ಗೆ ಖೈದಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜೈಲಿನ ಆವರಣದಲ್ಲೇ ದಾಖಲೆಗಳ ಸಂಗ್ರಹ ಹಾಗೂ ಅರ್ಜಿ ತುಂಬಿಸುವ ಕಾರ್ಯ ನಡೆಯಲಿದೆ. ಒಂದು ತಿಂಗಳೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಜೈಲಿನಲ್ಲಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಏನಾದರೂ ಸಂಭವಿಸಿದಲ್ಲಿ ಖೈದಿಗಳಿಗೆ ಈ ವಿಮೆ ನೆರವಿಗೆ ಬರಲಿದೆ ಎಂದು ಡಿಐಜಿ ಮುಕೇಶ್ ಪ್ರಸಾದ್ ಹೇಳಿದ್ದಾರೆ. ವಿಶೇಷವೆಂದರೆ, ಜೈಲಿನಲ್ಲಿ ಖೈದಿಗಳು ದುಡಿದು ಸಂಪಾದಿಸುವ ಹಣವನ್ನು ಆ ಖಾತೆಯಲ್ಲಿಡಬಹುದು. ಅಗತ್ಯ ಬಿದ್ದಲ್ಲಿ ಅವರ ಕುಟುಂಬ ಸದಸ್ಯರಿಗೆ ಈ ಖಾತೆಯ ಮೂಲಕ ಹಣವನ್ನು ಒದಗಿಸಬಹುದು ಎಂದೂ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಆಧಾರ್ ಕಾರ್ಡ್ ಹೊಂದಿದವಿರಗೆ ಖಾತೆ ತೆರೆಯುವುದು ಸುಲಭ. ಹಾಗಾಗಿ ಮೊದಲಿಗೆ ಅವರನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ನಂತರ ಗುರುತಿನ ದಾಖಲೆ ಹೊಂದಿರುವ ಇತರರಿಗೆ ಖಾತೆ ಮಾಡಿಕೊಡಲಾಗುವುದು.
-ಟಿ.ಎಂ. ಭಾಸಿನ್
ಇಂಡಿಯನ್ ಬ್ಯಾಂಕ್ ಅಧ್ಯಕ್ಷ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

Techie Kidnap case: Lakshmi Menonಗೆ ಬಿಗ್ ರಿಲೀಫ್, ನಿರೀಕ್ಷಣಾ ಜಾಮೀನು ಮಂಜೂರು, ಏನಿದು ಪ್ರಕರಣ? ನಟಿ ಹೇಳಿದ್ದೇನು?

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

SCROLL FOR NEXT