ರಜನಿಕಾಂತ್ 
ದೇಶ

ರಜನಿಯ ಲಿಂಗಾ ಚಿತ್ರ ನೋಡಿ ಸತ್ತ ಅಭಿಮಾನಿ

ಸೂಪರ್ ಸ್ಟಾರ್ ರಜನಿಕಾಂತ್ ಅವರ ಲಿಂಗಾ ಚಿತ್ರ ವೀಕ್ಷಣೆ ಸಂದರ್ಭದಲ್ಲೇ...

ಕೊಯಿಮತ್ತೂರು: ಸೂಪರ್ ಸ್ಟಾರ್ ರಜನಿಕಾಂತ್ ಅವರ ಲಿಂಗಾ ಚಿತ್ರ ವೀಕ್ಷಣೆ ಸಂದರ್ಭದಲ್ಲೇ ಕ್ಯಾನ್ಸರ್ ಪೀಡಿತ ರಜನಿಕಾಂತ್ ಅಭಿಮಾನಿಯೊಬ್ಬ ಮೃತಪಟ್ಟಿರುವ ಘಟನೆ ಚೆಟ್ಟಿಪಾಳ್ಯಂನ ಪೆರೂರಿನಲ್ಲಿ ನಡೆದಿದೆ.

ಸಿ.ರಾಜೇಂದ್ರನ್ (58) ಅವರಿಗೆ ಮೂರು ತಿಂಗಳ ಹಿಂದಷ್ಟೇ ಕಿಡ್ನಿಯಲ್ಲಿ ಕ್ಯಾನ್ಸರ್ ಇರುವುದಾಗಿ ವೈದ್ಯರು ಖಚಿತ ಪಡಿಸಿದ್ದರು. ಅಲ್ಲದೆ, ರೋಗವು ಕೊನೆಯ ಹಂತದಲ್ಲಿದ್ದು ಎಲ್ಲಿಯೂ ಹೋಗದೆ ಮನೆಯಲ್ಲೇ ಇರುವಂತೆ ಸಲಹೆ ನೀಡಿದ್ದರು. ಆದರೆ ರಜನಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿರುವ ರಾಜೇಂದ್ರನ್ ಲಿಂಗಾ ಚಿತ್ರವನ್ನು ನೋಡಲೇಬೇಕು ಎಂದು ಮನೆಯಲ್ಲಿ ಬೇಡಿಕೆ ಇಟ್ಟಿದ್ದರು. ಆದರೆ ರಾಜೇಂದ್ರನ್ ಅವರ ಆರೋಗ್ಯದ ದೃಷ್ಟಿಯಿಂದ ಮನೆಯವರು ಈ ಬೇಡಿಕೆಯನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದರು.

ಮನೆಯವರ ತಿರಸ್ಕಾರದ ನಡುವೆಯೂ ಗುರುವಾರ ರಾತ್ರಿ ಮನೆಯವರಿಗೆ ಕಾಣದಂತೆ ಹೊರಬಂದ ರಾಜೇಂದ್ರನ್ ಕೊಯಿಮತ್ತೂರಿನ ಶಾಂತಿ ಚಿತ್ರಮಂದಿರಕ್ಕೆ ಹೋಗಿದ್ದಾರೆ. ರಾತ್ರಿ 9.45ಕ್ಕೆ ಲಿಂಗಾ ಚಿತ್ರದ ಶೋ ಇದ್ದುದರಿಂದ ಟಿಕೆಟ್ ತೆಗೆದುಕೊಂಡು ಚಿತ್ರ ನೋಡಲು ಕುಳಿತಿದ್ದಾರೆ. ರಾತ್ರಿ 12.55 ಚಿತ್ರ ಮುಗಿದಿದೆ. ಬೆಳಿಗ್ಗೆ 1.25 ಸುಮಾರಿಗೆ ಚಿತ್ರಮಂದಿರ ಸ್ವಚ್ಛಗೊಳಿಸಲೆಂದು ಬಂದವರು ಕುರ್ಚಿಯಲ್ಲಿ ಕುಳಿತಿದ್ದ ರಾಜೇಂದ್ರನ್ ಅವರನ್ನು ನೋಡಿ ನಿದ್ರೆ ಹೋಗುತ್ತಿರಬಹುದು ಎಂದು ತಿಳಿದು ಎದ್ದೇಳಿಸಲು ಪ್ರಯತ್ನಿಸಿದ್ದಾರೆ. ಎಷ್ಟು ಹೇಳಿದರೂ ರಾಜೇಂದ್ರನ್ ಏಳಲೇ ಇಲ್ಲ. ನಂತರ ಚಿತ್ರಮಂದಿರದ ನಿರ್ವಾಹಕರನ್ನು ಕರೆತಂದಿದ್ದಾರೆ.

ರಾಜೇಂದ್ರನ್ ಅವರನ್ನು ಕಂಡ ಚಿತ್ರಮಂದಿರದ ನಿರ್ವಾಹಕ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರಾಜೇಂದ್ರನ್ ಅವರನ್ನು ಪರೀಕ್ಷಿಸಿದ ನಂತರ ಅವರ ಮೃತ ದೇಹವನ್ನು ಶವ ಪರೀಕ್ಷೆಗೆಂದು ಕೊಯಿಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ವೇಳೆ ರಾಜೇಂದ್ರನ್ ಅವರ ಜೇಬಲ್ಲಿದ್ದ ಫೋಟೋ ಹಾಗೂ ಮಗನ ಮೊಬೈಲ್ ನಂಬರ್ ನೋಡಿದ ಪೊಲೀಸರು ರಾಜೇಂದ್ರನ್ ಅವರ ಮನೆಗೆ ಕರೆ ಮಾಡಿ ಸುದ್ದಿ ತಿಳಿಸಿದ್ದಾರೆ.

ರಾಜೇಂದ್ರನ್ ಅವರು ರಜನಿ ಅವರ ಹುಟ್ಟು ಅಭಿಮಾನಿಯಾಗಿದ್ದು, ಈವರೆಗೂ ರಜನಿಕಾಂತ್ ಅವರು ತಮ್ಮ ಜೀವಮಾನದಲ್ಲಿ ಅಭಿನಯಿಸಿರುವ ಎಲ್ಲಾ ಚಿತ್ರವನ್ನು ಬಿಡದೇ ನೋಡಿದ್ದು, ಈಗ ಲಿಂಗಾ ಚಿತ್ರವನ್ನು ನೋಡಲು ಹೋಗಿ ಈ ಅನಾಹುತ ಸಂಭವಿಸಿದೆ ಎಂದು ರಾಜೇಂದ್ರನ್ ಅವರ ಕುಟುಂಬಸ್ಥರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT