ಸಲ್ಮಾನ್ ಖಾನ್ - ಸಂಗ್ರಹ ಚಿತ್ರ 
ದೇಶ

ಹಿಟ್ ಅಂಡ್ ರನ್ ಕೇಸ್: ಸಲ್ಮಾನ್ ಕುಡಿದಿರಲಿಲ್ಲ ಎಂದ ಪ್ರತ್ಯಕ್ಷದರ್ಶಿ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ೨೦೦೨ ಹಿಟ್ ಅಂಡ್ ರನ್ ಕೇಸ ನಲ್ಲಿ, ನಾನು ದುರ್ಘಟನೆ ನಡೆದ ...

ಮುಂಬೈ: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ೨೦೦೨ ಹಿಟ್ ಅಂಡ್ ರನ್ ಕೇಸ್ ನಲ್ಲಿ, ನಾನು ದುರ್ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಅವರನ್ನು ಭೇಟಿ ಮಾಡಿದ್ದೆ, ಆಗ ಸಲ್ಮಾನ್ ಅವರಿಂದ ಮದ್ಯದ ವಾಸನೆ ಬರುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸೆಪ್ಟಂಬರ್ ೨೮ ೨೦೦೨ ರಂದು ಭಾಂದ್ರ ಬಾಗದಲ್ಲಿ ಸಲ್ಮಾನ್ ಖಾನ್ ಬೇಕರಿಯೊಂದಕ್ಕೆ ಕಾರು ನುಗ್ಗಿಸಿದ್ದ ಘಟನೆಯಲ್ಲಿ, ಫುಟ್ ಫಾತಿನ ಮೇಲೆ ಮಲಗಿದ್ದ ಒಬ್ಬನನ್ನು ಬಲಿ ತೆಗೆದುಕೊಂಡಿತ್ತು ಮತ್ತು ಇನ್ನಿತರ ನಾಲ್ಕು ಜನರು ತೀವ್ರವಾಗಿ ಗಾಯಗೊಂಡಿದ್ದರು ಎಂಬುದು ನ್ಯಾಯಾಲಯದಲ್ಲಿ ನಡೆಯುತ್ತಿರುವ ಮೊಕದ್ದಮೆಯ ಆರೋಪದ ಸಾರಾಂಶ.

"ನಾನು ಸಲ್ಮಾನ್ ಅವರನ್ನು ಮುಂದಿನ ದಿನ ಬೆಳಗ್ಗೆ ೯ ಘಂಟೆಗೆ ಭೇಟಿ ಮಾಡಿದೆ. (ಘಟನೆ ನಡೆದಿದ್ದು ರಾತ್ರಿ ಮೂರು ಘಂಟೆಗೆ) ಮತ್ತು ಆಗ ಅವರನ್ನು ತಬ್ಬಿಕೊಂಡೆ, ಅವರಿಂದ ಮದ್ಯದ ವಾಸನೆ ಬರಲಿಲ್ಲ" ಎಂದು ನಟ ಚಂಕಿ ಪಾಂಡೆ ಅವರ ಸಹೋದರ ಚಿಕ್ಕಿ ಪಾಂಡೆ ನ್ಯಾಯಾಧೀಶ ಡಿ ಡಬ್ಲ್ಯೂ ದೇಶಪಾಂಡೆ ಅವರಿಗೆ ತಿಳಿಸಿದ್ದಾರೆ.

ಪ್ರತಿ-ವಿಚಾರಣೆ ವೇಳೆ, ಪಾಂಡೆ ಅವರು ಅಮೇರಿಕನ್ ಎಕ್ಸ್ ಪ್ರೆಸ್ ಬೇಕರಿ (ದುರ್ಘಟನೆ ನಡೆದ ಸ್ಥಳ)ಬಳಿ, ನಿಧಾನಗತಿಯ ವಾಹನ ಚಾಲನೆಯಿರುತ್ತದೆ ಮತ್ತು ಆ ಪ್ರದೇಶ ಯಾವಾಗಲೂ ಬ್ಯುಸಿ ಇರುತ್ತಿತ್ತು ಎಂದು ಸಲ್ಮಾನ್ ಲಾಯರ್ ಶ್ರೀಕಾಂತ್ ಶಿವಾಡೆ ಅವರಿಗೆ ತಿಳಿಸಿದ್ದಾರೆ.

ಸರ್ಕಾರಿ ಅಭಿಯೋಜಕ ಪ್ರದೀಪ್ ಗರತ್ ಮಾಡಿದ ಮರು ವಿಚಾರಣೆಯಲ್ಲಿ, ಅಲ್ಲಿ ೨೪ ಘಂಟೆಗಳೂ ವಾಹನ ದಟ್ಟಣೆ ಇರುತ್ತದೆಯೇ ಎಂಬ ಪ್ರಶ್ನೆಗೆ: "ಯಾವಾಗಲೂ ಇರುವುದಿಲ್ಲ" ಎಂದಿದ್ದಾರೆ.

ಸಾಮಾನ್ಯವಾಗಿ ವಾಹನಗಳ ಚಲನೆ ಇಲ್ಲದಿರುವಾಗ ಈ ಅಪಘಾತ ನಡೆದಿರುವುದು ಗಮನೀಯ.

ತನ್ನ ಸಹೋದರಿ ಅರ್ಪಿತಾ ಅವರ ಮದುವೆ ಸಿದ್ಧತೆಯಲ್ಲಿ ಕಾರ್ಯನಿರತವಾಗಿರುವುದರಿಂದ ಸಲ್ಮಾನ್ ಖಾನ್ ಅವರು ಇಂದು ವಿಚಾರಣೆಗೆ ಹಾಜರಾಗಿರಲಿಲ್ಲ.

ಇತರ ಪ್ರತ್ಯಕ್ಷದರ್ಶಿಗಳ ವಿಚಾರಣೆ ನವೆಂಬರ್ ೨೪ ಮತ್ತು ೨೫ ರಂದು ನಡೆಯಲಿದ್ದು, ಅಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಲ್ಮಾನ್ ಖಾನ್ ಗೆ ಕೋರ್ಟ್ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT