ಸಾಂದರ್ಭಿಕ ಚಿತ್ರ- ಏರ್ ಇಂಡಿಯಾ 
ದೇಶ

ಖಾಸಗೀಕರಣಕ್ಕೆ ಚುರುಕು, ಸದ್ಯಕ್ಕೆ ಏರ್ ಇಂಡಿಯಾ ಖಾಸಗೀಕರಣ ಇಲ್ಲ

ನವದೆಹಲಿ: ವಿತ್ತೀಯ ಕೊರತೆ ನೀಗಿಸಲು ಹರಸಾಹಸ ಪಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಜೆಟ್ ಘೋಷಣೆಯಂತೆ ಖಾಸಗೀಕರಣ ಪ್ರಕ್ರಿಯೆಗೆ ಚುರುಕು ನೀಡಲು ಮುಂದಾಗಿದೆ.

ಸದ್ಯಕ್ಕೆ ಏರ್ ಇಂಡಿಯಾದ ಖಾಸಗೀಕರಣ ಇಲ್ಲ ಎಂದು ಹೇಳುತ್ತಲೇ ಭವಿಷ್ಯದಲ್ಲಿ ಇಂಥ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿದೆ. ಈ ಮೂಲಕ ಏರ್‌ಇಂಡಿಯಾದಲ್ಲಿ ಸರ್ಕಾರ ಹೊಂದಿರುವ ಪಾಲು ಮಾರಾಟ ಭವಿಷ್ಯದಲ್ಲಿ ನಡೆಯುವುದಂತು ಖಚಿತ ಎಂಬ ಸೂಚನೆ ನೀಡಿದೆ.

ನಷ್ಟದಲ್ಲಿರುವ ಏರ್ ಇಂಡಿಯಾದ ಷೇರುಗಳನ್ನು ಮಾರಾಟ ಮಾಡಬೇಕು ಎನ್ನುವ ಕುರಿತ ಬೇಡಿಕೆ ಹಿಂದಿ ನಿಂದಲೂ ಇದೆ. ಸದ್ಯ ಏರ್‌ಇಂಡಿಯಾ ಭವಿಷ್ಯದ ಹಾದಿ ಹೇಗಿರಬೇಕು ಎನ್ನುವುದಕ್ಕೆ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು. ದೇಶದ ರಾಷ್ಟ್ರೀಯ ವಿಮಾನ ಸಂಸ್ಥೆ ಲಾಭದ ಹಾದಿಯಲ್ಲಿ ಸಾಗುವಂತೆ ನೋಡಿಕೊಳ್ಳುವ ತುರ್ತು ಅಗತ್ಯವಿದೆ. ವೆಚ್ಚ ಮತ್ತು ದಕ್ಷತೆಯಲ್ಲಿ ಸ್ಪರ್ಧಾತ್ಮಕತೆ ತರುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಾಪತಿ ರಾಜು ಹೇಳಿದ್ದಾರೆ.

ಇದೇ ವೇಳೆ, ಅವರು ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಕಾಪ್ಟರ್ ಸೇವೆ ಒದಗಿಸುವ ಪವನ್ ಹಂಸ ಕಂಪನಿಯನ್ನು ಷೇರುಪೇಟೆಗೆ ಎಳೆತರುವ ನಿರ್ಧಾರ ಘೋಷಿಸಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಕಾಯ್ದುಕೊಳ್ಳಲು ಈ ರೀತಿಯ ಕ್ರಮ ಅನಿವಾರ್ಯ. ಈ ಸಂಬಂಧ ನಾಗರಿಕ ವಿಮಾನಯಾನ ನೀತಿಯಲ್ಲೂ ಅಗತ್ ಬದಲಾವಣೆ ತರಲಾಗಿದೆ ಎಂದು ರಾಜು ತಿಳಿಸಿದ್ದಾರೆ. ಈ ಎರಡೂ ಕಂಪನಿಗಳು ಮುಂದಿನ ಆರು ತಿಂಗಳೊಳಗೆ ಷೇರುಮಾರುಕಟ್ಟೆಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲಿವೆ.

ವಿಮಾನ ನಿಲ್ದಾಣ ಪ್ರಾಧಿಕಾರ ಮಿನಿರತ್ನ ಕಂಪನಿಯಾಗಿದ್ದು, ದೇಶದಲ್ಲಿ 11 ಅಂತಾರಾಷ್ಟ್ರೀಯ ಸೇರಿ 125 ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡುತ್ತಿದೆ. ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರು, ನಾಗ್ಪುರದಲ್ಲಿ ನಿಲ್ದಾಣಗಳ ಮೇಲ್ದರ್ಜೆಗೆ ಖಾಸಗಿ ಕಂಪನಿಗಳೊಂದಿಗೆ ಕೈಜೋಡಿಸಿದೆ. ಇನ್ನು ಪವನ್ ಹಂಸ ಏಷ್ಯಾದ ಅತಿ ದೊಡ್ಡ ಕಾಪ್ಟರ್ ಕಂಪನಿಯಾಗಿದೆ. ಇದು ಒಟ್ಟು 47 ಹೆಲಿಕಾಪ್ಟರ್‌ಗಳನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT