ಸಂತಾನಹರಣ ಶಸ್ತ್ರಕ್ರಿಯಾ ಶಿಬಿರ 
ದೇಶ

ಛತ್ತೀಸ್‌ಗಡ ಶಸ್ತ್ರಚಿಕಿತ್ಸೆ ಅವಘಡ: ತುಕ್ಕು ಹಿಡಿದ ಉಪಕರಣ ಬಳಸಿದ ವೈದ್ಯರು

ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಶಸ್ತ್ರಕ್ರಿಯೆ ಮಾಡಿದ್ದ...

ಛತ್ತೀಸ್‌ಗಡ: ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಶಸ್ತ್ರಕ್ರಿಯೆ ಮಾಡಿದ್ದ ಅಲ್ಲಿನ ವೈದ್ಯರು ತುಕ್ಕು ಹಿಡಿದ ಉಪಕರಣಗಳನ್ನು ಬಳಸಿದ್ದರು ಎಂಬ ವಿಷಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಮಹಿಳೆಯರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ, ಆದರೆ ಪ್ರಕರಣಕ್ಕೆ ವೈದ್ಯರು ಬಳಸಿರುವ ಔಷಧಿ ಹಾಗೂ ತುಕ್ಕು ಹಿಡಿದ ಉಪಕರಣಗಳೇ ಕಾರಣವಾಗಿರಬಹುದು ಎಂದು ಹಿರಿಯ ಅಧಿಕಾರಿ ಸಿದ್ಧಾರ್ಥ್ ಕೋಮಲ್ ಸಿಂಗ್ ಹೇಳಿದ್ದಾರೆ.

ಜನಸಂಖ್ಯಾ ಸ್ಫೋಟ ನಿಯಂತ್ರಿಸುವ ಸಲುವಾಗಿ ಬಿಲಾಸ್ ಪುರದಲ್ಲಿ ಛತ್ತೀಸ್‌ಘಡದ ಸರ್ಕಾರ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಿತ್ತು. ಶಿಬಿರದಲ್ಲಿ ಡಾ.ಆರ್.ಕೆ. ಗುಪ್ತಾ ಸೇರಿದಂತೆ ಅವರ ಇಬ್ಬರು ಸಹಾಯಕ ಸಿಬ್ಬಂದಿಗಳು ಸೇರಿ ಕೇವಲ ಕೆಲವು ಘಂಟೆಗಳಲ್ಲಿ ಸುಮಾರು 80 ಮಹಿಳೆಯರಿಗೆ ಸಂತಾನಹರಣ ಶಸ್ತ್ರಕ್ರಿಯೆ ನಡೆಸಿದ್ದರು. ಶಸ್ತ್ರಚಿಕಿತ್ಸೆ ನಂತರ 11 ಮಂದಿ ಮಹಿಳೆಯರು ಸಾವನ್ನಪ್ಪಿದ್ದರಲ್ಲದೇ 49 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ 20 ಮಹಿಳೆಯರ ಸ್ಥಿತಿ ಇಂದಿಗೂ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮರು ವ್ಯಾಖ್ಯಾನ ವಿವಾದದ ನಡುವೆ ಅರಾವಳಿಯಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆ 'ಸಂಪೂರ್ಣ ನಿಷೇಧಿಸಿದ' ಕೇಂದ್ರ

ಅತ್ಯಾಚಾರ ಸಂತ್ರಸ್ತೆ ಮೇಲೆ ಪೊಲೀಸರಿಂದ ದೌರ್ಜನ್ಯ: ‘ಸತ್ತ ಆರ್ಥಿಕತೆ ಮಾತ್ರವಲ್ಲ, ಸತ್ತ ಸಮಾಜದತ್ತ ಸಾಗುತ್ತಿದ್ದೇವೆ’

Vijay Hazare Trophy: 169 ಎಸೆತಗಳಲ್ಲಿ 212 ರನ್ ಚಚ್ಚಿದ Swastik Samal ಐತಿಹಾಸಿಕ ದಾಖಲೆ, ಸಂಜು ಸ್ಯಾಮ್ಸನ್ ರೆಕಾರ್ಡ್ ಸಮಬಲ

ರೈಲ್ವೆ ಕ್ರಾಸಿಂಗ್ ನಲ್ಲಿ ಬೈಕಿಗೆ ರೈಲು ಡಿಕ್ಕಿ; ದಂಪತಿ, ಇಬ್ಬರು ಮಕ್ಕಳು ಸೇರಿ ಐವರು ಸಾವು!

ಸಂಸತ್ತಿನಲ್ಲಿ ಸ್ಮಾರ್ಟ್ ಕನ್ನಡಕ, ಪೆನ್ ಕ್ಯಾಮೆರಾ ಬಳಸಬೇಡಿ: ಸಂಸದರಿಗೆ ಸೂಚನೆ

SCROLL FOR NEXT