ಸಿಡ್ನಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ಭಾರತೀಯರನ್ನು ಉದ್ದೇಶಿಸಿ ಕ್ರಿಕೆಟಿಗ ಬ್ರೆಟ್ ಲೀ ಮಾತನಾಡಿದರು. 
ದೇಶ

ಸಿಡ್ನಿಯಲ್ಲಿ ಭಾರತೀಯರ ಬಗ್ಗೆ ಬ್ರೆಟ್‌ಲೀ ಹೇಳಿದ್ದೇನು?

ಆಸ್ಟೇಲಿಯಾದ ಕ್ರಿಕೆಟಿಗ ಬ್ರೆಟ್‌ಲೀ ಸಿಡ್ನಿಯಲ್ಲಿ ಭಾರತದ ಬಗೆಗಿನ ತಮ್ಮ ಮನದಾಳದ ಪ್ರೀತಿಯನ್ನು ಹೊರಹಾಕಿದ್ದು, ಭಾರತ ನನ್ನ ನೆಚ್ಚಿನ ದೇಶ ಎಂದು ಹೇಳಿದ್ದಾರೆ.

ಸಿಡ್ನಿ: ಆಸ್ಟೇಲಿಯಾದ ಕ್ರಿಕೆಟಿಗ ಬ್ರೆಟ್‌ಲೀ ಸಿಡ್ನಿಯಲ್ಲಿ ಭಾರತದ ಬಗೆಗಿನ ತಮ್ಮ ಮನದಾಳದ ಪ್ರೀತಿಯನ್ನು ಹೊರಹಾಕಿದ್ದು, ಭಾರತ ನನ್ನ ನೆಚ್ಚಿನ ದೇಶ ಎಂದು ಹೇಳಿದ್ದಾರೆ.

ಸಿಡ್ನಿಯಲ್ಲಿರುವ ಅಲ್ಫೋನ್ಸ್ ಅರೆನಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಬ್ರೆಟ್ ಲೀ, ಭಾರತ ಮತ್ತು ಭಾರತೀಯರೊಂದಿಗೆ ತಮಗಿರುವ ಬಂಧವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ತಮ್ಮ ಪ್ರಭಾವಿ ಬೌಲಿಂಗ್ ಮೂಲಕ ಭಾರತೀಯ ಕ್ರಿಕೆಟಿಗರ ಮೇಲೆ ಎರಗುತ್ತಿದ್ದ ಬ್ರೆಟ್ ಲೀ, ಕಾರ್ಯಕ್ರಮದಲ್ಲಿ ಹೇಳಿದ್ದೇನು..?

'ಮೊದಲಿಗೆ ನನ್ನ ಆಸ್ಟ್ರೇಲಿಯಾಗೆ ಆಗಮಿಸಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯರಿಗೆ ಸ್ವಾಗತ. 1994ರಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಆಡಲು ಭಾರತಕ್ಕೆ ಆಗಮಿಸಿದ್ದೆನು. ಅಂದಿನಿಂದ ಸುಮಾರು 20 ವರ್ಷಗಳ ಅವಧಿಯಲ್ಲಿ ನಾನು 18 ಬಾರಿ ಭಾರತಕ್ಕೆ ಭೇಟಿ ನೀಡಿದ್ದೇನೆ. ನಾನು ಹಲವು ದೇಶಗಳನ್ನು ಸುತ್ತಿ ಕ್ರಿಕೆಟ್ ಆಡಿದ್ದೇನೆ. ಆದರೆ ಭಾರತದಲ್ಲಿ ಸಾಕಷ್ಟು ಸುಂದರ ಅನುಭವವಗಳನ್ನು ಪಡೆದಿದ್ದೇನೆ. ಭಾರತ ಸುಂದರವಾದ ದೇಶವಾಗಿದ್ದು, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ದೇಶವಾಗಿದೆ. ಅಲ್ಲಿ ಜನ ಕೂಡ ತುಂಬಾ ಒಳ್ಳೆಯವರಾಗಿದ್ದು, ಭಾರತೀಯರು ಸ್ನೇಹಜೀವಿಗಳು ಎಂದು ಲೀ ಹೇಳಿದ್ದಾರೆ.

ಸಿನಿಮಾ ಪಯಣದತ್ತ ಲೀ
ಇನ್ನು ಕ್ರಿಕೆಟಿಗ ಬ್ರೆಟ್ ಲೀ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಸಿಡ್ನಿ ಕಾರ್ಯಕ್ರಮದಲ್ಲಿ ತಮ್ಮ ನೂತನ ಚಿತ್ರದ ಕುರಿತು ಮಾತನಾಡಿದ ಅವರು, ಸಿನಿಮಾ ಚಿತ್ರೀಕರಣಕ್ಕೂ ಕ್ರಿಕೆಟ್‌ಗೂ ಅಜಗಜಾಂತರ ವ್ಯತ್ಯಸವಿದೆ ಎಂದು ಹೇಳಿದರು. 'ಚಿತ್ರೀಕರಣದ ಅನುಭವವೇ ಒಂದು ರೀತಿಯಲ್ಲಿ ವಿಶೇಷವಾಗಿದ್ದು, ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವುದಕ್ಕೂ ಚಿತ್ರದಲ್ಲಿ ನಟಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಇನ್ನು ಕೇವಲ 16ರಿಂದ 17 ದಿನಗಳ ಚಿತ್ರೀಕರಣ ಬಾಕಿ ಇದ್ದು, 2015ರ ಮೇ ತಿಂಗಳಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಬ್ರೆಟ್‌ಲೀ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT