ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ 
ದೇಶ

ಭಾರತದ ಬುಲ್ಲೆಟ್ ಪ್ರೂಫ್ ಕಾರನ್ನು ನಿರಾಕರಿಸಿದ ಪಾಕಿಸ್ತಾನ

ಅಮೆರಿಕಾ ಅಧ್ಯಕ್ಷರೇ ತಮ್ಮ ಸ್ವಂತ ವಾಹನದಲ್ಲಿ ಪ್ರಯಾಣಿಸುತ್ತಿರುವುದರಿಂದ...

ಕಠ್ಮಾಂಡು: ಮುಂದಿನ ವಾರ ನೇಪಾಳದ ಕಠ್ಮಾಂಡುವಿನಲ್ಲಿ ನಡೆಯುವ ದಕ್ಷಿಣ ಏಷ್ಯಾ ಶೃಂಗಸಭೆಗೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಆಗಮಿಸುತ್ತಿದ್ದು, ಭದ್ರತೆಯ ದೃಷ್ಟಿಯಿಂದ ಭಾರತದ ಪರ ಅವರಿಗೆ ಬುಲ್ಲೆಟ್ ಪ್ರೂಫ್ ಕಾರ್‌ನ್ನು ಒದಗಿಸಲಾಗಿದ್ದು, ಅದನ್ನು ನವಾಜ್ ಷರೀಫ್ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಠ್ಮಾಂಡು ಶೃಂಗ ಸಭೆಗೆ ಭಾರತದ ಮೂಲಕ ತಲುಪಬೇಕಾಗಿದ್ದು, ಯಾವುದೇ ಅವಘಡಗಳು ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ನವಾಜ್ ಷರೀಫ್‌ಗಾಗಿ ವಿಶೇಷ ಸೌಲಭ್ಯಗಳುಳ್ಳ ಬುಲ್ಲೆಟ್ ಪ್ರೂಫ್ ಕಾರನ್ನು ಒದಗಿಸಲು ನಿರ್ಧರಿಸಿತ್ತು. ಆದರೆ ಭಾರತದ ಬುಲ್ಲೆಟ್ ಪ್ರೂಫ್ ಕಾರನ್ನು ನವಾಜ್ ಷರೀಫ್ ತಿರಸ್ಕರಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಖಾಗಾ ನಥ್ ಅಧಿಕರಿ, ದಕ್ಷಿಣ ಏಷ್ಯಾ ಶೃಂಗಸಭೆಗೆ ಭಾಗವಹಿಸುವುದಕ್ಕಾಗಿ, ಪಾಕಿಸ್ತಾನದಿಂದ ತಮ್ಮದೇ ವಿಶೇಷ ಕಾರಿನಲ್ಲಿ ನವಾಜ್ ಷರೀಫ್ ಪ್ರಯಾಣಿಸಲಿದ್ದಾರೆ. ಅಲ್ಲದೆ ಇತರೆ ಅಧಿಕಾರಿಗಳೂ ಸಹಾ ತಮ್ಮ ತಮ್ಮ ವಾಹನಗಳಲ್ಲಿ ತೆರಳಲಿದ್ದಾರೆ ಎಂದು ಸ್ಪಷ್ಪಪಡಿಸಿದ್ದಾರೆ.

ಅಮೆರಿಕಾ ಅಧ್ಯಕ್ಷರೇ ತಮ್ಮ ಸ್ವಂತ ವಾಹನದಲ್ಲಿ ಪ್ರಯಾಣಿಸುತ್ತಿರುವುದರಿಂದ, ಪಾಕಿಸ್ತಾನ ಪ್ರಧಾನಿಯೂ ತಮ್ಮದೇ ಕಾರಿನಲ್ಲಿ ಪ್ರಯಾಣಿಸಲಿದ್ದಾರೆ ಎಂದು ಖಾಗಾ ವಿವರಿಸಿದರು.

ಪಾಕಿಸ್ತಾನ ಮತ್ತು ಭಾರತದ ಗುಂಡಿನ ದಾಳಿ ನಡೆಯುವ ಪ್ರದೇಶವನ್ನು ಹೊರತುಪಡಿಸಿ, ಸುರಕ್ಷಿತ ಮಾರ್ಗದ ಮೂಲಕ ಕಠ್ಮಾಂಡುವಿಗೆ ತಲುಪುವುದಾಗಿ ಅವರು ತಿಳಿಸಿದ್ದಾರೆ.

ನವೆಂಬರ್ 26 ಮತ್ತು 27 ರಂದು ಕಠ್ಮಾಂಡವಿನಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್, ಅಫ್ಘಾನಿಸ್ತಾನ ಹಾಗೂ ಮಾಲ್ಡೀವ್ಸ್ ದೇಶಗಳು ಭಾಗವಹಿಸಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT