ಗುಂಡಿಗೆ ಬಿದ್ದ ಆನೆ ಮರಿ ಪಾರು 
ದೇಶ

ಗುಂಡಿಗೆ ಬಿದ್ದ ಆನೆ ಮರಿ ಪಾರು

ಜೆಸಿಬಿ ಯಂತ್ರದ ಮೂಲಕ ಆನೆ ಮರಿಯನ್ನು ಹೊರತೆಗೆಯುವಲ್ಲಿ ಯಶಸ್ವಿ

ಊಟಿ: ದಾರಿತಪ್ಪಿ ಗುಂಡಿಯೊಂದಕ್ಕೆ ಬಿದ್ದ ಮರಿ ಆನೆಯೊಂದನ್ನು ಸ್ಥಳೀಯರ ಸಹಾಯದೊಂದಿಗೆ ಅರಣ್ಯ ಇಲಾಖಾ ಸಿಬ್ಬಂದಿ ಸುರಕ್ಷಿತವಾಗಿ ಪಾರು ಮಾಡಿದ ಘಟನೆ ಊಟಿಯಲ್ಲಿ ನಡೆದಿದೆ.

ನೀಲಗಿರಿ ತಾಲೂಕಿನ ಕೂಡಲೂರು ಅರಣ್ಯಪ್ರದೇಶದಲ್ಲಿ ಕಳೆದ ರಾತ್ರಿ ಗುಂಪಿನಿಂದ ಪ್ರತ್ಯೇಕವಾದ ಮರಿಯಾನೆ ಆಹಾರವನ್ನರಸಿ ಕಡಲೂರಿನ ಅರಣ್ಯ ಪ್ರದೇಶದತ್ತ ಧಾವಿಸಿತು. ದಾರಿತಪ್ಪಿ ಬಂದ ಆನೆಮರಿ, ದಾರಿತಪ್ಪಿದ ಈ ಮರಿಯಾನೆ ದಾರಿಯಲ್ಲಿದ್ದ ಗುಂಡಿಯೊಳಕ್ಕೆ ಬಿದ್ದು ಸಿಲುಕಿಕೊಂಡಿತು.

ಆನೆಯ ಕಿರುಚಾಟ ಕೇಳಿದ ಸ್ಥಳೀಯ ಗ್ರಾಮಸ್ಥರು ಆನೆ ಮರಿಯನ್ನು ಹೊರತೆಗೆಯಲು ಮುಂದಾದರೂ, ಅದು ಸಾಧ್ಯವಾಗಲಿಲ್ಲ. ಕೂಡಲೇ ಈ ಕುರಿತು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖಾ ಸಿಬ್ಬಂದಿ, ಜೆಸಿಬಿ ಯಂತ್ರದ ಮೂಲಕ ಆನೆ ಮರಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಅಲ್ಲದೆ ಆನೆಮರಿಯನ್ನು ಅದರ ತಾಯಿ ಆನೆಯೊಂದಿಗೆ ತಲುಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮದು 4ನೇ ಅತಿದೊಡ್ಡ ಆರ್ಥಿಕತೆ ಎಂದು ಭಾರತ ಹೇಳಿಕೊಳ್ಳುತ್ತಿದೆ; ಆದರೆ ತಲಾವಾರು ಜಿಡಿಪಿ 12 ಪಟ್ಟು ಕಡಿಮೆ!

BJPಗೆ ಒಂದು ಅವಕಾಶ ಕೊಡಿ, ಬಂಗಾಳದಲ್ಲಿ ಭ್ರಷ್ಟಾಚಾರ, ಒಳನುಸುಳುವಿಕೆ ಕೊನೆಗೊಳಿಸುತ್ತೇವೆ: ಅಮಿತ್ ಶಾ ಮನವಿ

ಬೆಂಗಳೂರು: ಐದನೇ ಮಹಡಿಯಿಂದ ಜಿಗಿದು ಬಯೋಕಾನ್ ಉದ್ಯೋಗಿ ಆತ್ಮಹತ್ಯೆ!

ಪೀರಿಯಡ್ಸ್ ಸಮಯದಲ್ಲೂ ಸೆ* ಗೆ ಒತ್ತಾಯ, ಅಶ್ಲೀಲ ವಿಡಿಯೋ ನೋಡಿ ಲೈಂಗಿಕ ಕಿರುಕುಳ.. ಸೈಕೋ ಪತಿ ವಿರುದ್ಧ ಪತ್ನಿ ದೂರು!

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

SCROLL FOR NEXT