ದೇಶ

ಗುಂಡಿಗೆ ಬಿದ್ದ ಆನೆ ಮರಿ ಪಾರು

Lakshmi R

ಊಟಿ: ದಾರಿತಪ್ಪಿ ಗುಂಡಿಯೊಂದಕ್ಕೆ ಬಿದ್ದ ಮರಿ ಆನೆಯೊಂದನ್ನು ಸ್ಥಳೀಯರ ಸಹಾಯದೊಂದಿಗೆ ಅರಣ್ಯ ಇಲಾಖಾ ಸಿಬ್ಬಂದಿ ಸುರಕ್ಷಿತವಾಗಿ ಪಾರು ಮಾಡಿದ ಘಟನೆ ಊಟಿಯಲ್ಲಿ ನಡೆದಿದೆ.

ನೀಲಗಿರಿ ತಾಲೂಕಿನ ಕೂಡಲೂರು ಅರಣ್ಯಪ್ರದೇಶದಲ್ಲಿ ಕಳೆದ ರಾತ್ರಿ ಗುಂಪಿನಿಂದ ಪ್ರತ್ಯೇಕವಾದ ಮರಿಯಾನೆ ಆಹಾರವನ್ನರಸಿ ಕಡಲೂರಿನ ಅರಣ್ಯ ಪ್ರದೇಶದತ್ತ ಧಾವಿಸಿತು. ದಾರಿತಪ್ಪಿ ಬಂದ ಆನೆಮರಿ, ದಾರಿತಪ್ಪಿದ ಈ ಮರಿಯಾನೆ ದಾರಿಯಲ್ಲಿದ್ದ ಗುಂಡಿಯೊಳಕ್ಕೆ ಬಿದ್ದು ಸಿಲುಕಿಕೊಂಡಿತು.

ಆನೆಯ ಕಿರುಚಾಟ ಕೇಳಿದ ಸ್ಥಳೀಯ ಗ್ರಾಮಸ್ಥರು ಆನೆ ಮರಿಯನ್ನು ಹೊರತೆಗೆಯಲು ಮುಂದಾದರೂ, ಅದು ಸಾಧ್ಯವಾಗಲಿಲ್ಲ. ಕೂಡಲೇ ಈ ಕುರಿತು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖಾ ಸಿಬ್ಬಂದಿ, ಜೆಸಿಬಿ ಯಂತ್ರದ ಮೂಲಕ ಆನೆ ಮರಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಅಲ್ಲದೆ ಆನೆಮರಿಯನ್ನು ಅದರ ತಾಯಿ ಆನೆಯೊಂದಿಗೆ ತಲುಪಿಸಿದರು.

SCROLL FOR NEXT