ಗುಂಡಿಗೆ ಬಿದ್ದ ಆನೆ ಮರಿ ಪಾರು 
ದೇಶ

ಗುಂಡಿಗೆ ಬಿದ್ದ ಆನೆ ಮರಿ ಪಾರು

ಜೆಸಿಬಿ ಯಂತ್ರದ ಮೂಲಕ ಆನೆ ಮರಿಯನ್ನು ಹೊರತೆಗೆಯುವಲ್ಲಿ ಯಶಸ್ವಿ

ಊಟಿ: ದಾರಿತಪ್ಪಿ ಗುಂಡಿಯೊಂದಕ್ಕೆ ಬಿದ್ದ ಮರಿ ಆನೆಯೊಂದನ್ನು ಸ್ಥಳೀಯರ ಸಹಾಯದೊಂದಿಗೆ ಅರಣ್ಯ ಇಲಾಖಾ ಸಿಬ್ಬಂದಿ ಸುರಕ್ಷಿತವಾಗಿ ಪಾರು ಮಾಡಿದ ಘಟನೆ ಊಟಿಯಲ್ಲಿ ನಡೆದಿದೆ.

ನೀಲಗಿರಿ ತಾಲೂಕಿನ ಕೂಡಲೂರು ಅರಣ್ಯಪ್ರದೇಶದಲ್ಲಿ ಕಳೆದ ರಾತ್ರಿ ಗುಂಪಿನಿಂದ ಪ್ರತ್ಯೇಕವಾದ ಮರಿಯಾನೆ ಆಹಾರವನ್ನರಸಿ ಕಡಲೂರಿನ ಅರಣ್ಯ ಪ್ರದೇಶದತ್ತ ಧಾವಿಸಿತು. ದಾರಿತಪ್ಪಿ ಬಂದ ಆನೆಮರಿ, ದಾರಿತಪ್ಪಿದ ಈ ಮರಿಯಾನೆ ದಾರಿಯಲ್ಲಿದ್ದ ಗುಂಡಿಯೊಳಕ್ಕೆ ಬಿದ್ದು ಸಿಲುಕಿಕೊಂಡಿತು.

ಆನೆಯ ಕಿರುಚಾಟ ಕೇಳಿದ ಸ್ಥಳೀಯ ಗ್ರಾಮಸ್ಥರು ಆನೆ ಮರಿಯನ್ನು ಹೊರತೆಗೆಯಲು ಮುಂದಾದರೂ, ಅದು ಸಾಧ್ಯವಾಗಲಿಲ್ಲ. ಕೂಡಲೇ ಈ ಕುರಿತು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖಾ ಸಿಬ್ಬಂದಿ, ಜೆಸಿಬಿ ಯಂತ್ರದ ಮೂಲಕ ಆನೆ ಮರಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಅಲ್ಲದೆ ಆನೆಮರಿಯನ್ನು ಅದರ ತಾಯಿ ಆನೆಯೊಂದಿಗೆ ತಲುಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT