ಕೇರಳ ಮೂಲದ ಇಬ್ಬರಿಗೆ ಸಂತ ಪ್ರದವಿ ಪ್ರಧಾನ ಮಾಡಿದ ಹಿನ್ನಲೆಯಲ್ಲಿ ಕೇರಳದಲ್ಲಿ ನಡೆದ ಸಂಭ್ರಮಾಚರಣೆ 
ದೇಶ

ಕೇರಳದ ಇಬ್ಬರಿಗೆ ಮರಣೋತ್ತರ ಸಂತ ಪದವಿ

ದಿ.ಫಾದರ್ ಕುರಿಯಕೊಸ್ ಇಲಿಯಾಸ್ ಚಾವರ ಮತ್ತು ದಿ.ಸಿಸ್ಟರ್ ಯುಫ್ರೇಸಿಯಾ ಅವರಿಗೆ ಮರಣೋತ್ತರ ಸಂತ ಪದವಿ ಪ್ರಧಾನ ಮಾಡಲಾಗಿದೆ.

ವ್ಯಾಟಿಕನ್ ಸಿಟಿ: ಕೇರಳ ಮೂಲದ ಇಬ್ಬರಿಗೆ ಸಂತ ಪದವಿ ಪ್ರಧಾನ ಮಾಡಲಾಗಿದ್ದು, ದಿ.ಫಾದರ್ ಕುರಿಯಕೊಸ್ ಇಲಿಯಾಸ್ ಚಾವರ ಮತ್ತು ದಿ.ಸಿಸ್ಟರ್ ಯುಫ್ರೇಸಿಯಾ ಅವರಿಗೆ ಮರಣೋತ್ತರ ಸಂತ ಪದವಿ ಪ್ರಧಾನ ಮಾಡಲಾಗಿದೆ.

ದೇವರನಾಡು ಎಂದೇ ಖ್ಯಾತಿಗಳಿಸಿರುವ ಕೇರಳಕ್ಕೆ ಮತ್ತೊಂದು ಗರಿ ಮೂಡಿದ್ದು, ಧಾರ್ಮಿಕವಾಗಿ ಮತ್ತೆ ವಿಶ್ವ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದೆ. ದಿ.ಫಾದರ್ ಕುರಿಯಕೊಸ್ ಇಲಿಯಾಸ್ ಚಾವರ ಮತ್ತು ದಿ.ಸಿಸ್ಟರ್ ಯುಫ್ರೇಸಿಯಾ ಅವರಿಗೆ ಮರಣೋತ್ತರ ಸಂತ ಪದವಿ ಪ್ರಧಾನ ವಿಚಾರ ಕೇರಳದ ಕ್ರೈಸ್ತ ಧರ್ಮೀಯರಲ್ಲಿ ಹರ್ಷವನ್ನುಂಟು ಮಾಡಿದೆ. ವ್ಯಾಟಿಕನ್ ಸಿಟಿಯಲ್ಲಿ ಇಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪೋಪ್ ಫ್ರಾನ್ಸಿಸ್ ಅವರು ದಿ.ಫಾದರ್ ಚಾವರ ಮತ್ತು ದಿ.ಸಿಸ್ಟರ್ ಯುಫ್ರೇಸಿಯಾ ಅವರಿಗೆ ಮರಣೋತ್ತರ ಸಂತ ಪದವಿ ಪ್ರಧಾನ ಮಾಡಿದರು.

ಈ ವಿಶೇಷ ಕಾರ್ಯಕ್ರಮಕ್ಕೆ ರಾಜ್ಯಸಭೆಯ ಉಪಸಭಾಪತಿ ಪಿಜೆ ಕುರಿಯನ್ ಅವರು ಸೇರಿದಂತೆ ಕೇರಳದಿಂದ ಆಗಮಿಸಿದ್ದ ಸುಮಾರು 5 ಸಾವಿರ ಕ್ರಿಶ್ಚಿಯನ್ ಧರ್ಮೀಯರು ಕೂಡ ಸಾಕ್ಷಿಯಾಗಿದ್ದರು.

ಸಂತ ಪದವಿ ಎಂದರೇನು?
ಹಿಂದೂ ಧರ್ಮದಲ್ಲಿ ಮಹರ್ಷಿಗಳಿಗೆ ಮತ್ತು ಮುಸ್ಲಿಂ ಧರ್ಮದಲ್ಲಿ ಪ್ರವಾದಿಗಳಿಗೆ ನೀಡಲಾಗುವಷ್ಟೇ ಮಹತ್ವವನ್ನು ಕ್ರಿಶ್ಚಿಯನ್ ಧರ್ಮದಲ್ಲಿ ಸಂತರಿಗೆ ನೀಡಲಾಗುತ್ತದೆ. ಸಿಖ್ ಧರ್ಮದಲ್ಲಿ ಗುರು ಸ್ಥಾನದಂತೆ ಸಂತ ಸ್ಥಾನ ಅತ್ಯಂತ ಪವಿತ್ರವಾದ ಸ್ಥಾನವಾಗಿದೆ. ಕ್ರಿಶ್ಚಿಯನ್ ಧರ್ಮೀಯರ ಪವಿತ್ರ ಕ್ಷೇತ್ರ ರೋಮ್‌ನ ವ್ಯಾಟಿಕನ್ ಸಿಟಿಯಲ್ಲಿ ಈ ಪದವಿಯನ್ನು ಪೋಪ್ ಅವರು ಪ್ರಧಾನ ಮಾಡುತ್ತಾರೆ. ಅದರಂತೆ ಈ ಬಾರಿ ಕೇರಳ ಮೂಲದ ಇಬ್ಬರಿಗೆ ಸಂತ ಪದವಿಯನ್ನು ಪ್ರಧಾನ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT