ಪೊಲೀಸ್ ಬಂಧನದಲ್ಲಿರುವ ವಿವಾದಿತ ಸ್ವಯಂಘೋಷಿತ ದೇವಮಾನವ ಬಾಬಾ ರಾಂಪಾಲ್ (ಸಂಗ್ರಹ ಚಿತ್ರ) 
ದೇಶ

ರಾಂಪಾಲ್ ಆಶ್ರಮದ ಲಾಕರ್‌ಗಳಲ್ಲಿ ಕಮಾಂಡೋ ಸಮವಸ್ತ್ರ..!

ವಿವಾದಿತ ಸ್ವಯಂ ಘೋಷಿತ ದೇವಮಾನವ ಬಾಬಾ ರಾಂಪಾಲ್‌ನ ಆಶ್ರಮದಲ್ಲಿನ ಲಾಕರ್‌ಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಕಮಾಂಡೋ ಸಮವಸ್ತ್ರಗಳು ದೊರೆತಿವೆ..

ಹಿಸ್ಸಾರ್: ವಿವಾದಿತ ಸ್ವಯಂ ಘೋಷಿತ ದೇವಮಾನವ ಬಾಬಾ ರಾಂಪಾಲ್‌ನ ಆಶ್ರಮದಲ್ಲಿನ ಲಾಕರ್‌ಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಕಮಾಂಡೋ ಸಮವಸ್ತ್ರಗಳು ದೊರೆತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿನ್ನೆಯಷ್ಟೇ ಬಾಬಾ ರಾಂಪಾಲ್ ಸಾತ್‌ಲೋಕ್ ಆಶ್ರಮದಲ್ಲಿನ ವಿಶೇಷ ಕೊಠಡಿಗಳಲ್ಲಿರುವ ಲಾಕರ್‌ಗಳನ್ನು ತೆರೆದಿದ್ದು, ಲಾಕರ್‌ಗಳಲ್ಲಿ ಶಸ್ತ್ರಾಸ್ತ್ರಗಳು, ಕಮಾಂಡೋ ಸಮವಸ್ತ್ರಗಳು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಮಾತನಾಡಿರುವ ಹರ್ಯಾಣ ಪೊಲೀಸ್ ವರಿಷ್ಠಾಧಿಕಾರಿ ಎಕೆ ರಾವ್ ಅವರು, ಲಾಕರ್‌ಗಳಲ್ಲಿ ಪತ್ತೆಯಾದ ಕಮಾಂಡೋ ಸಮವಸ್ತ್ರಗಳು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳ ಬಗ್ಗೆ ರಾಂಪಾಲ್‌ನನ್ನು ವಿಚಾರಿಸಲಾಗಿದೆ ಎಂದು ಹೇಳಿದರು.

ಪೊಲೀಸ್ ಬಂಧನ ವಿಚಾರ ತಿಳಿದ ರಾಂಪಾಲ್ ಬೆಂಬಲಿಗರು ಪೊಲೀಸರ ವಿರುದ್ಧ ದಾಳಿ ನಡೆಸಲು ಈ ಎಲ್ಲ ಪರಿಕರಗಳನ್ನು ಸಂಗ್ರಹಿಸಿದ್ದರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಇದ್ದರೂ ಇರಬಹುದು ಅಥವಾ ರಾಂಪಾಲ್‌ಗಿರುವ ಬಾಹ್ಯ ಬೆದರಿಕೆಯಿಂದಾಗಿ ಆತ ತನ್ನದೇ ಆದ ಕಮಾಂಡೋಗಳನ್ನು ನಿಯೋಜಿಸಿಕೊಂಡಿರಬಹುದು' ಎಂದು ಹೇಳಿದ್ದಾರೆ.

ವಿವಾದಿತ ಸ್ವಯಂಘೋಷಿತ ದೇವಮಾನವ ಬಾಬಾ ರಾಂಪಾಲ್‌ನನ್ನು ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಸತತ ಕಾರ್ಯಾಚರಣೆ ಬಳಿಕ ಬಂಧಿಸಲಾಗಿತ್ತು. ಬಂಧನದ ಬಳಿಕ ಹರ್ಯಾಣ ಹೈಕೋರ್ಟ್ ರಾಂಪಾಲ್‌ನನ್ನು 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸಾತ್‌ಲೋಕ್ ಆಶ್ರಮದಲ್ಲಿ ಅನುಮಾನಾಸ್ಪದ ಲಾಕರ್‌ಗಳು ಕಂಡು ಬಂದ ಹಿನ್ನಲೆಯಲ್ಲಿ ನಿನ್ನೆಯಷ್ಟೇ ವಿಶೇಷ ತನಿಖಾ ದಳದ ಪೊಲೀಸ್ ಅಧಿಕಾರಿಗಳು ರಾಂಪಾಲ್‌ನನ್ನು ಆಶ್ರಮಕ್ಕೆ ಕರೆತಂದು ಲಾಕರ್‌ಗಳನ್ನು ತೆರೆಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT