ಭೋಪಾಲ್ ಅನಿಲ ದುರಂತ 
ದೇಶ

ಭೋಪಾಲ್ ದುರಂತ: 30 ವರ್ಷ ಕಳೆದರೂ ನಿಲ್ಲದ ದುಷ್ಪರಿಣಾಮ

ಭೋಪಾಲ್ ಅನಿಲ ದುರಂತ ಸಂಭವಿಸಿ...

ಭೋಪಾಲ್: ಭೋಪಾಲ್ ಅನಿಲ ದುರಂತ ಸಂಭವಿಸಿ ಡಿ.2-3 ಕ್ಕೆ ಸರಿಯಾಗಿ 30 ವರ್ಷ ತುಂಬುತ್ತದೆ. ಆದರೆ ಆ ದುರಂತದ ಕರಿನೆರಳು ಮಾತ್ರ ಇಂದಿನ ತಲೆಮಾರನ್ನೂ ಬಿಟ್ಟಿಲ್ಲ. ಈಗ ಹುಟ್ಟುತ್ತಿರುವ ಮಕ್ಕಳೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

1984ರಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯಲ್ಲಿ ಅನಿಲ ಸೋರಿಕೆ ಉಂಟಾದ ಬಳಿಕ ಈವರೆಗೆ ಸುಮಾರು ಒಂದು  ಸಾವಿರ ಮಕ್ಕಳು ನ್ಯೂನತೆಯನ್ನು ಹೊತ್ತುಕೊಂಡೇ ಹುಟ್ಟಿದ್ದಾರೆ. ಈ ಸಂಖ್ಯೆ ಬೆಳೆಯುತ್ತಲೇ ಇದೆ ಎನ್ನುತ್ತಾರೆ ವೈದ್ಯರು ಹಾಗೂ ಹೋರಾಟಗಾರರು.

ಅನಿಲ ಸೋರಿಕೆಯಿಂದ ಹೊರಬಂದ ರಾಸಾಯನಿಕವು ಇಡೀ ಪ್ರದೇಶವನ್ನು ವ್ಯಾಪಿಸಿದ್ದು, ಅಂತರ್ಜಲವನ್ನೂ ವಿಷಯುಕ್ತವನ್ನಾಗಿಸಿದೆ. ಇದನ್ನೇ ಅನೇಕ ಕುಟುಂಬಗಳು ಸೇವಿಸುತ್ತಿವೆ. ಪರಿಣಾಮ ಅಂಥವರಿಗೆ ಹುಟ್ಟಿದ ಮಕ್ಕಳಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುತ್ತಿದೆ ಎನ್ನುವುದು ಹೋರಾಟಗಾರರ ವಾದ. ದುರಂತದ ಬಳಿಕ ಅಲ್ಲಿ ಉಳಿದ ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕು ಎಂಬ ಕನಿಷ್ಠ ಕಾಳಜಿಯನ್ನೂ ಯೂನಿಯನ್ ಕಾರ್ಬೈಡ್ ಆಡಳಿತ ಮಂಡಳಿ ತೋರಿಸಿಲ್ಲ. ಸರ್ಕಾರವೂ ಈ ವಿಚಾರವನ್ನು ನಿರ್ಲಕ್ಷಿಸಿದ್ದು, ಇಂತಹ ಸ್ಥಿತಿಗೆ ಅದೂ ನೇರ ಕಾರಣ ಎನ್ನುತ್ತಾರೆ ಅವರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT