ಭೋಪಾಲ್ ಅನಿಲ ದುರಂತ 
ದೇಶ

ಭೋಪಾಲ್ ದುರಂತ: 30 ವರ್ಷ ಕಳೆದರೂ ನಿಲ್ಲದ ದುಷ್ಪರಿಣಾಮ

ಭೋಪಾಲ್ ಅನಿಲ ದುರಂತ ಸಂಭವಿಸಿ...

ಭೋಪಾಲ್: ಭೋಪಾಲ್ ಅನಿಲ ದುರಂತ ಸಂಭವಿಸಿ ಡಿ.2-3 ಕ್ಕೆ ಸರಿಯಾಗಿ 30 ವರ್ಷ ತುಂಬುತ್ತದೆ. ಆದರೆ ಆ ದುರಂತದ ಕರಿನೆರಳು ಮಾತ್ರ ಇಂದಿನ ತಲೆಮಾರನ್ನೂ ಬಿಟ್ಟಿಲ್ಲ. ಈಗ ಹುಟ್ಟುತ್ತಿರುವ ಮಕ್ಕಳೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

1984ರಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯಲ್ಲಿ ಅನಿಲ ಸೋರಿಕೆ ಉಂಟಾದ ಬಳಿಕ ಈವರೆಗೆ ಸುಮಾರು ಒಂದು  ಸಾವಿರ ಮಕ್ಕಳು ನ್ಯೂನತೆಯನ್ನು ಹೊತ್ತುಕೊಂಡೇ ಹುಟ್ಟಿದ್ದಾರೆ. ಈ ಸಂಖ್ಯೆ ಬೆಳೆಯುತ್ತಲೇ ಇದೆ ಎನ್ನುತ್ತಾರೆ ವೈದ್ಯರು ಹಾಗೂ ಹೋರಾಟಗಾರರು.

ಅನಿಲ ಸೋರಿಕೆಯಿಂದ ಹೊರಬಂದ ರಾಸಾಯನಿಕವು ಇಡೀ ಪ್ರದೇಶವನ್ನು ವ್ಯಾಪಿಸಿದ್ದು, ಅಂತರ್ಜಲವನ್ನೂ ವಿಷಯುಕ್ತವನ್ನಾಗಿಸಿದೆ. ಇದನ್ನೇ ಅನೇಕ ಕುಟುಂಬಗಳು ಸೇವಿಸುತ್ತಿವೆ. ಪರಿಣಾಮ ಅಂಥವರಿಗೆ ಹುಟ್ಟಿದ ಮಕ್ಕಳಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುತ್ತಿದೆ ಎನ್ನುವುದು ಹೋರಾಟಗಾರರ ವಾದ. ದುರಂತದ ಬಳಿಕ ಅಲ್ಲಿ ಉಳಿದ ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕು ಎಂಬ ಕನಿಷ್ಠ ಕಾಳಜಿಯನ್ನೂ ಯೂನಿಯನ್ ಕಾರ್ಬೈಡ್ ಆಡಳಿತ ಮಂಡಳಿ ತೋರಿಸಿಲ್ಲ. ಸರ್ಕಾರವೂ ಈ ವಿಚಾರವನ್ನು ನಿರ್ಲಕ್ಷಿಸಿದ್ದು, ಇಂತಹ ಸ್ಥಿತಿಗೆ ಅದೂ ನೇರ ಕಾರಣ ಎನ್ನುತ್ತಾರೆ ಅವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟಿ-20 ವಿಶ್ವಕಪ್: ಭಾರತ ತಂಡ ಪ್ರಕಟ, ಶುಭ್ ಮನ್ ಗಿಲ್ ಗೆ ಕೊಕ್‌, ಇಶಾನ್ ಕಿಶಾನ್ ಗೆ ಸ್ಥಾನ!

ಹಿಂದೂ ಯುವಕನ ಬರ್ಬರ ಹತ್ಯೆ: ವ್ಯಾಪಕ ಆಕ್ರೋಶ ಬೆನ್ನಲ್ಲೆ 7 ಆರೋಪಿಗಳನ್ನು ಬಂಧಿಸಿದ್ದಾಗಿ ಯೂನಸ್ ಘೋಷಣೆ

ಕಲಬುರಗಿ: ಉದ್ಯಮಿ ಮಲ್ಲಿನಾಥ್ ಬಿರಾದಾರ್ ಮನೆ ಬಳಿ ಬೆಂಕಿ ಹಚ್ಚಿಕೊಂಡು BJP ಕಾರ್ಯಕರ್ತೆ ಆತ್ಮಹತ್ಯೆ

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

ಅಸ್ಸಾಂ: ಸೈರಾಂಗ್‌-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ; ಸ್ಥಳದಲ್ಲೇ 7 ಆನೆಗಳ ದಾರುಣ ಸಾವು

SCROLL FOR NEXT