ಭಾರತೀಯರ ರಕ್ಷಣೆ 
ದೇಶ

ಯುದ್ಧ ಸ್ಥಿತಿಯಲ್ಲೂ ಭಾರತೀಯರ ರಕ್ಷಣೆ

ಯೆಮೆನ್‍ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ `ಆಪರೇಷನ್ ರಾಹತ್' ಯುದ್ಧದೋಪಾದಿಯಲ್ಲಿ ನಡೆಯುತ್ತಿದೆ.

ನವದೆಹಲಿ: ಯೆಮೆನ್‍ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ `ಆಪರೇಷನ್ ರಾಹತ್' ಯುದ್ಧದೋಪಾದಿಯಲ್ಲಿ ನಡೆಯುತ್ತಿದೆ. ಆದರೆ ಆ್ಯಡೆನ್ ಬಂದರು ಸಮೀಪ ಭೀಕರ ಕಾಳಗ ನಡೆಯುತ್ತಿದೆ. ಹೀಗಿದ್ದರೂ ಅಲ್ಲಿಂದ ಭಾರತೀಯರನ್ನು ಸಾಹಸದಿಂದ ರಕ್ಷಿಸಲಾಗಿದೆ.

ರಕ್ಷಣಾ ಕಾರ್ಯಕ್ಕಾಗಿ ಕಳುಹಿಸಲಾಗಿರುವ ಯುದ್ಧ ನೌಕೆ ಐಎನ್‍ಎಸ್ ಮುಂಬೈಗೆ ಆ್ಯಡೆನ್ ಬಂದರು ಪ್ರವೇಶಕ್ಕೆ ಬಂಡುಕೋರರ ಶೆಲ್ ದಾಳಿ ಅಡ್ಡಿಯಾಗಿದೆ. ಈ ನೌಕೆಯಲ್ಲಿ ಹೆಚ್ಚುವರಿಯಾಗಿ 12 ಸಣ್ಣ ಪ್ರಮಾಣದ ದೋಣಿಗಳನ್ನು ಜೋಡಿಸಲಾಗಿದೆ.

ಈ ಮೂಲಕ ತಂತ್ರಬದ್ಧವಾಗಿ ಭಾರತೀಯರನ್ನು ಪಾರು ಮಾಡುವ ಯೋಜನೆ ರೂಪಿಸಿದೆ ನೌಕಾಪಡೆ. ಈವರೆಗೆ 1,350 ಮಂದಿಯನ್ನು ಸ್ವದೇಶಕ್ಕೆ ಕರೆತರಲಾಗಿದೆ. ಇದೇ ವೇಳೆ ಯೆಮೆನ್ ಕಾಳಗದಲ್ಲಿ ಖೈದಾ ಹಿಡಿತ ಬಲ ಗೊಳ್ಳುತ್ತಿರುವುದರಿಂದ ಪರಿಸ್ಥಿತಿ ಭೀಕರವಾಗಿದೆ ಎಂದು ನೌಕಾಪಡೆ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.




Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT