ಯಜಿದಿ ಯುವತಿ 
ದೇಶ

ಲಾಟರಿ ಹಾಕಿ ಅತ್ಯಾಚಾರ ಮಾಡಿದ ಇಸಿಸ್ ಉಗ್ರರು

ಇರಾಕ್ ಮತ್ತು ಸಿರಿಯಾದಲ್ಲಿ ತಮ್ಮ ಕರಾಳ ಹಸ್ತ ಚಾಚಿರುವ ಇಸಿಸ್ ಉಗ್ರರ ಕ್ರೌರ್ಯ ಎಲ್ಲೆ ಮೀರಿದ್ದು, ಲಾಟರಿ ಹಾಕುವ ಮೂಲಕ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆ.

ಮದ್ಯಪ್ರಾಚ್ಯ: ಇರಾಕ್ ಮತ್ತು ಸಿರಿಯಾದಲ್ಲಿ ತಮ್ಮ ಕರಾಳ ಹಸ್ತ ಚಾಚಿರುವ ಇಸಿಸ್ ಉಗ್ರರ ಕ್ರೌರ್ಯ ಎಲ್ಲೆ ಮೀರಿದ್ದು, ಲಾಟರಿ ಹಾಕುವ ಮೂಲಕ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆ.

ಇತ್ತೀಚೆಗಷ್ಟೇ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಪಾರಾಗಿ ಬಂದಿದ್ದ ಇಬ್ಬರು ಯುವತಿಯರನ್ನು ಉಗ್ರರು ಲಾಟರಿ ಹಾಕುವ ಮೂಲಕ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಿರಿಯಾದಲ್ಲಿನ ಆಂತರಿಕ ಕಲಹ ಸಂಬಂಧ ಮಾನವಹಕ್ಕು ವೀಕ್ಷಣಾ ಸಮಿತಿ (humna rights watch) ಸದಸ್ಯರು ನಡೆಸಿರುವ ಸಂದರ್ಶನದಲ್ಲಿ ಇಸಿಸ್ ಉಗ್ರರಿಂದ ಅತ್ಯಾಚಾರಕ್ಕೊಳಗಾದ ಯುವತಿ ತನಗಾದ ಹಿಂಸೆಯನ್ನು ತೋಡಿಕೊಂಡಿದ್ದಾಳೆ.

ಸಿರಿಯಾದ ಸಿಜಾರ್ ಗ್ರಾಮದ ಯಜಿದಿ ಕುಟುಂಬಕ್ಕೆ ಸೇರಿದ ಯುವತಿಯನ್ನು ಮತ್ತು 12 ವರ್ಷದ ಓರ್ವ ಬಾಲಕಿಯನ್ನು ಉಗ್ರರು ಅಪಹರಿಸಿ ಧಾರುಣವಾಗಿ ಅತ್ಯಾಚಾರ ಮಾಡಿದ್ದಾರೆ. ಅಪಹರಣದ ನಂತರ ಎಲ್ಲ ಹೆಣ್ಣುಮಕ್ಕಳನ್ನು ಒಂದು ಕತ್ತಲು ಕೋಣೆಯಲ್ಲಿ ಬಂಧಿಸಿಟ್ಟಿದ್ದ ಉಗ್ರರು ತಾವು ಹೇಳಿದಂತೆ ಕೇಳಬೇಕು ಎಂದು ಆದೇಶಿಸಿದ್ದಾರೆ. ಆದರೆ ಇದಕ್ಕೆ ಯುವತಿ ನಿರಾಕರಿಸಿದಾಗ ಇಬ್ಬರನ್ನು ಮರಕ್ಕೆ ಕಟ್ಟಿಹಾಕಿ ಮನಸೋ ಇಚ್ಛೆ ಹೊಡೆದಿದ್ದಾರೆ.

ಗಾಯದ ನೋವಿನಿಂದ ಬಳಲುತ್ತಿದ್ದ ಯುವತಿ ಮತ್ತು ಬಾಲಕಿ ಅಂತಿಮವಾಗಿ ಉಗ್ರರ ಮಾತನ್ನು ಕೇಳುವುದಾಗಿ ಹೇಳಿದ್ದಾರೆ. ಸ್ನಾನ ಮಾಡುವ ನೆಪವೊಡ್ಡಿ ಸ್ನಾನಗೃಹಕ್ಕೆ ತೆರಳಿದ ಈ ಇಬ್ಬರು ಅಲ್ಲಿದ್ದ ಟಾಕ್ಸಿಕ್ ಆ್ಯಸಿಡ್ ಅನ್ನು ನೋಡಿ ಉಗ್ರರ ಮಾತನ್ನು ಕೇಳುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿ ಎಂದು ಭಾವಿಸಿ ಆ ಟಾಕ್ಸಿಕ್ ಆಸಿಡ್ ಅನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದುರಾದೃಷ್ಟವಶಾತ್ ಆ ಯುವತಿ ಹಾಗೂ ಬಾಲಕಿ ಆಸಿಡ್ ನಿಂದ ಸಾಯದೇ ಕೇವಲ ಅಸ್ವಸ್ಥಗೊಂಡರು. ಈ ವಿಚಾರ ತಿಳಿದ ಉಗ್ರರು ಆ ಯುವತಿಯರನ್ನು ಆಸ್ಪತ್ರೆಗೆ ದಾಖಲು ಮಾಡುವ ಬದಲು ಅತ್ಯಾಚಾರ ಮಾಡಿದ್ದಾರೆ. 7 ಮಂದಿಯ ಉಗ್ರರ ತಂಡ ಲಾಟರಿ ಹಾಕುವ ಮೂಲಕ ಒಬ್ಬರ ನಂತರ ಒಬ್ಬರು ಅತ್ಯಾಚಾರ ಮಾಡಿದರು ಎಂದು ಯುವತಿ ಹೇಳಿಕೊಂಡಿದ್ದಾಳೆ.

ಇದಿಷ್ಟೇ ಅಲ್ಲದೆ ಉಗ್ರರಿಗೆ ಸಹಾಯ ಮಾಡಿದ್ದ ಸಮೀಪದ ಗ್ರಾಮದ ಗ್ರಾಮಸ್ಥರನ್ನು ಕರೆಯಿಸಿ ಅವರಿಂದಲೂ ಕೂಡ ಯುವತಿ ಮೇಲೆ ಅತ್ಯಾಚಾರ ಮಾಡಿಸಿದ್ದಾರೆ. ಅಂತಿಮವಾಗಿ ಉಗ್ರರ ಕಣ್ಣುತಪ್ಪಿಸುವಲ್ಲಿ ಯಶಸ್ವಿಯಾದ ಯುವತಿ ಮತ್ತು 12 ವರ್ಷದ ಬಾಲಕಿ ಉಗ್ರರಿಂದ ತಪ್ಪಿಸಿಕೊಂಡು ಪಾರಾಗಿ ಬಂದಿದ್ದಾರೆ. ನಂತರ ಮಾನಹಕ್ಕು ಸಮಿತಿ ಸದಸ್ಯರ ನೆರವಿನಿಂದ ತಮ್ಮ ಗ್ರಾಮಕ್ಕೆ ಮರಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT