ನೇತಾಜಿ ಸುಭಾಷ್‍ಚಂದ್ರ ಬೋಸ್ 
ದೇಶ

ನೇತಾಜಿ ಸಾವು ತನಿಖೆ ಹಳಿ ತಪ್ಪಿಸಿದ ಚರಣ್, ಮೊರಾರ್ಜಿ

ನೇತಾಜಿ ಸುಭಾಷ್‍ಚಂದ್ರ ಬೋಸ್ ನಿಗೂಢ ಸಾವಿನ ಪ್ರಕರಣವನ್ನು ಮೊರಾರ್ಜಿ ದೇಸಾಯಿ ಮತ್ತು ಚರಣ್‍ಸಿಂಗ್ ಇಬ್ಬರೂ ಸೇರಿ ಹಳಿತಪ್ಪಿಸಿದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ...

ನವದೆಹಲಿ: ನೇತಾಜಿ ಸುಭಾಷ್‍ಚಂದ್ರ ಬೋಸ್ ನಿಗೂಢ ಸಾವಿನ ಪ್ರಕರಣವನ್ನು ಮೊರಾರ್ಜಿ ದೇಸಾಯಿ ಮತ್ತು ಚರಣ್‍ಸಿಂಗ್ ಇಬ್ಬರೂ ಸೇರಿ ಹಳಿತಪ್ಪಿಸಿದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಅಂದಿನ ಪ್ರಧಾನಿ ಇಂದಿರಾಗಾಂಧಿ ಮತ್ತು ಮೊರಾರ್ಜಿ ದೇಸಾಯಿ ನಡುವೆ ಯಾವ ವಿಷಯದಲ್ಲೂ ಸಹಮತ ಇರದಿದ್ದರೂ, ನೇತಾಜಿ ಸಾವಿನ ಪ್ರಕರಣದಲ್ಲಿ ಮಾತ್ರ ಇಬ್ಬರೂ ಒಂದೇ ನಿರ್ಧಾರವನ್ನು ಒಪ್ಪಿಕೊಂಡಿದ್ದರು. ಅಂದಿನ ಪ್ರಧಾನಿ ಮೊರಾರ್ಜಿ ಹಾಗೂ ಗೃಹ ಸಚಿವ ಚೌಧರಿ ಚರಣ್‍ಸಿಂಗ್ ನೇತಾಜಿ ಸಾವಿನ ಬಗ್ಗೆ ಮಹತ್ವದ ಸಾಕ್ಷ್ಯಗಳು ಸಿಕ್ಕಾಗಲೂ, ಇಡೀ ದೇಶ ತನಿಖೆಗೆ ಒತ್ತಾಯಿಸಿದರೂ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಪ್ರಕರಣಕ್ಕೆ ಎಳ್ಳುನೀರು ಬಿಟ್ಟರು ಎನ್ನಲಾಗಿದೆ.

ಇಂದಿರಾ ನೇಮಿಸಿದ್ದ ಖೋಸ್ಲಾ ಆಯೋಗದ ವರದಿ ಇದೊಂದು ವಿಮಾನ ಅಪಘಾತದಲ್ಲಾದ ಸಾವು ಎಂದು ಹೇಳಿ ಮುಗಿಸಿಬಿಟ್ಟಿತ್ತು. ಚರಣ್ ಹಾಗೂ ದೇಸಾಯಿ ಸರ್ಕಾರವು ಇಂದಿರಾ ಸರ್ಕಾರಾವಧಿಯ ವರದಿಯನ್ನು ಒಪ್ಪಿಕೊಂಡಿಲ್ಲ ಎಂದೇ ಜನ 38 ವರ್ಷಗಳಿಂದ ನಂಬಿಕೊಂಡು ಬಂದಿದ್ದರು. ಆದರೆ, ಸತ್ಯ ಏನೆಂದರೆ ಜನತಾ ಸರ್ಕಾರವು ಬೋಸ್ ಸಾವಿನ ತನಿಖೆ ಸಮಯದ ವ್ಯಯ ಹಾಗೂ ಸಂಪನ್ಮೂಲಗಳ ಸುಖಾಸುಮ್ಮನೆ ವೆಚ್ಚ ಎಂದೇ ಭಾವಿಸಿತ್ತು. ಇತ್ತೀಚೆಗೆ ಸಾರ್ವಜನಿಕಗೊಂಡ ಬೋಸ್‍ಗೆ ಸೇರಿದ ಫೈಲ್‍ವೊಂದು ಚರಣ್ ಸಿಂಗ್ ಸರ್ಕಾರದ ಕಳ್ಳಾಟವನ್ನು ಬಹಿರಂಗಪಡಿಸಿದೆ.

ಬೋಸ್ ನಾಪತ್ತೆ ಪ್ರಕರಣವನ್ನು ಹೊಸದಾಗಿ ತನಿಖೆ ಮಾಡಲು ಎಲ್ಲ ಸಂಸದರ ಬೆಂಬಲ ಇದ್ದರೂ ಜನತಾ ಸರ್ಕಾರ ಅದಕ್ಕೆ ಅಡ್ಡಿಮಾಡಿತ್ತು.ಸ್ವತಃ ದೇಸಾಯಿ ಅವರೇ ಹೊಸದಾಗಿ ತನಿಖೆ ನಡೆಸಲು ಆಸಕ್ತಿ ಹೊಂದಿರಲಿಲ್ಲ ಎನ್ನುವುದು ಆಗಿನ ಆಂತರಿಕ ಭದ್ರತೆ ವಿಭಾಗದ ಉಪ ನಿರ್ದೇಶಕ ಎನ್.ಕೆ. ಸಿನ್ಹಾ ಮತ್ತು ಜಂಟಿ ಕಾರ್ಯದರ್ಶಿ ಆರ್. ಎಲ್. ಮಿಶ್ರಾ ನಡುವಿನ ಟಿಪ್ಪಣಿಯೇ ಸಾಕ್ಷಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT