ನವದೆಹಲಿ: ಧಾರ್ಮಿಕ ಕಾರಣಗಳಿಗಾಗಿ ಆನೆಗಳನ್ನು ಉಡುಗೊರೆ ನೀಡುವುದು, ಮಾರಾಟ ಮಾಡುವುದಕ್ಕೆ ನಿಷೇಧ ಹೇರಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಇದರ ಜತೆಗೆ ಬಂಧನದಲ್ಲಿರುವ ಆನೆಗಳ ಗಣತಿ ಮಾಡಬೇಕು ಎಂದು ಅದು ಸಲಹೆ ಮಾಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸೇರಿ 9 ರಾಜ್ಯಗಳು, ಭಾರತೀಯ ವನ್ಯಜೀವಿ ಸಂರಕ್ಷಣಾ ಮಂಡಳಿ, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಆರು ಸಂಘಟನೆಗಳ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಈ ಆದೇಶ ನೀಡಿದೆ. ದೇಶದ ಧಾರ್ಮಿಕ ಸಂಸ್ಥೆಗಳಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಆನೆಗಳನ್ನು ಬಂಧಿಸಿ ಇಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.