ಭೂಕಂಪನ 
ದೇಶ

ಭೂಕಂಪನದ ಬಗ್ಗೆ ಎಚ್ಚರಿಸಿದ್ದ ಬೆಂಗಳೂರು ವಿಜ್ಞಾನಿಗಳು

ಇಂತಹುದೊಂದು ದೊಡ್ಡ `ಅಪಾಯ ಕಾದಿದೆ' ಎಂಬ ವಿಚಾರ ಮೊದಲೇ ಗೊತ್ತಿತ್ತೇ?...

ಬೆಂಗಳೂರು: ಇಂತಹುದೊಂದು ದೊಡ್ಡ `ಅಪಾಯ ಕಾದಿದೆ' ಎಂಬ ವಿಚಾರ ಮೊದಲೇ ಗೊತ್ತಿತ್ತೇ?

ಹೌದು. ಮಧ್ಯ ಹಿಮಾಲಯದ ಸುತ್ತಲಿನ ಭೂಪ್ರದೇಶದಲ್ಲಿ ಮಹಾ ಭೂಕಂಪವೊಂದು ಸಂಭವಿಸಲಿದೆ ಎಂದು 2 ತಿಂಗಳ ಹಿಂದೆಯೇ ಬೆಂಗಳೂರಿನ ವಿಜ್ಞಾನಿಗಳ ತಂಡವೊಂದು ಎಚ್ಚರಿಸಿತ್ತು.

ಕಳೆದ 700 ವರ್ಷಗಳಲ್ಲಿ ಮಧ್ಯಹಿಮಾಲಯದ ಭೂ ಒತ್ತಡವು ಸಕ್ರಿಯವಾಗಿಲ್ಲ. ದೀರ್ಘಾವಧಿ ಕಾಲ ಭೂಕಂಪನವು ಜಡವಾಗಿದ್ದರೆ, ಅಂತಹ ಪ್ರದೇಶದಲ್ಲಿ ಮಹಾನ್ ಕಂಪನ ಸಂಭವಿಸುತ್ತದೆ ಎಂದು ಮೂವರು ವಿಜ್ಞಾನಿಗಳು ತಿಳಿಸಿದ್ದರು.

ಜಿಯೋ ಫಿಸಿಕಲ್ ರಿಸರ್ಚ್- ಸಾಲಿಡ್ ಅರ್ಥ್ ಎಂಬ ಪತ್ರಿಕೆಯಲ್ಲಿ ಈ ಬಗೆಗಿನ ಲೇಖನ ಪ್ರಕಟವಾಗಿತ್ತು. ಬೆಂಗಳೂರಿನ ಜವಾಹರ್ ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ವಿಜ್ಞಾನಿ  ಸಿ.ಪಿ. ರಾಜೇಂದ್ರನ್, ಕೋಲಾರ ಚಿನ್ನದ ಗಣಿಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ರಾಕ್ ಮೆ ಕ್ಯಾನಿಕ್ಸ್ ನ ಬಿಜು ಜಾನ್ ಮತ್ತು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ನ  ವಿಜ್ಞಾನಿ ಕುಸಲ ರಾಜೇಂದ್ರನ್ ಅವರು ಜಂಟಿಯಾಗಿ ಈ ಲೇಖನವನ್ನು ಬರೆದಿದ್ದರು. ಜತೆಗೆ, ತಮ್ಮ ವಾದವನ್ನು ಪುಷ್ಟೀಕರಿಸಲು ಐತಿಹಾಸಿಕ ಪುರಾವೆಗಳನ್ನೂ ಅವರು ಒದಗಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT