ಭೂಕಂಪನ 
ದೇಶ

ಭೂಕಂಪನದ ಬಗ್ಗೆ ಎಚ್ಚರಿಸಿದ್ದ ಬೆಂಗಳೂರು ವಿಜ್ಞಾನಿಗಳು

ಇಂತಹುದೊಂದು ದೊಡ್ಡ `ಅಪಾಯ ಕಾದಿದೆ' ಎಂಬ ವಿಚಾರ ಮೊದಲೇ ಗೊತ್ತಿತ್ತೇ?...

ಬೆಂಗಳೂರು: ಇಂತಹುದೊಂದು ದೊಡ್ಡ `ಅಪಾಯ ಕಾದಿದೆ' ಎಂಬ ವಿಚಾರ ಮೊದಲೇ ಗೊತ್ತಿತ್ತೇ?

ಹೌದು. ಮಧ್ಯ ಹಿಮಾಲಯದ ಸುತ್ತಲಿನ ಭೂಪ್ರದೇಶದಲ್ಲಿ ಮಹಾ ಭೂಕಂಪವೊಂದು ಸಂಭವಿಸಲಿದೆ ಎಂದು 2 ತಿಂಗಳ ಹಿಂದೆಯೇ ಬೆಂಗಳೂರಿನ ವಿಜ್ಞಾನಿಗಳ ತಂಡವೊಂದು ಎಚ್ಚರಿಸಿತ್ತು.

ಕಳೆದ 700 ವರ್ಷಗಳಲ್ಲಿ ಮಧ್ಯಹಿಮಾಲಯದ ಭೂ ಒತ್ತಡವು ಸಕ್ರಿಯವಾಗಿಲ್ಲ. ದೀರ್ಘಾವಧಿ ಕಾಲ ಭೂಕಂಪನವು ಜಡವಾಗಿದ್ದರೆ, ಅಂತಹ ಪ್ರದೇಶದಲ್ಲಿ ಮಹಾನ್ ಕಂಪನ ಸಂಭವಿಸುತ್ತದೆ ಎಂದು ಮೂವರು ವಿಜ್ಞಾನಿಗಳು ತಿಳಿಸಿದ್ದರು.

ಜಿಯೋ ಫಿಸಿಕಲ್ ರಿಸರ್ಚ್- ಸಾಲಿಡ್ ಅರ್ಥ್ ಎಂಬ ಪತ್ರಿಕೆಯಲ್ಲಿ ಈ ಬಗೆಗಿನ ಲೇಖನ ಪ್ರಕಟವಾಗಿತ್ತು. ಬೆಂಗಳೂರಿನ ಜವಾಹರ್ ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ವಿಜ್ಞಾನಿ  ಸಿ.ಪಿ. ರಾಜೇಂದ್ರನ್, ಕೋಲಾರ ಚಿನ್ನದ ಗಣಿಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ರಾಕ್ ಮೆ ಕ್ಯಾನಿಕ್ಸ್ ನ ಬಿಜು ಜಾನ್ ಮತ್ತು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ನ  ವಿಜ್ಞಾನಿ ಕುಸಲ ರಾಜೇಂದ್ರನ್ ಅವರು ಜಂಟಿಯಾಗಿ ಈ ಲೇಖನವನ್ನು ಬರೆದಿದ್ದರು. ಜತೆಗೆ, ತಮ್ಮ ವಾದವನ್ನು ಪುಷ್ಟೀಕರಿಸಲು ಐತಿಹಾಸಿಕ ಪುರಾವೆಗಳನ್ನೂ ಅವರು ಒದಗಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT