ನರರೂಪ ರಾಕ್ಷಸ ಹತ್ಯೆಗೈದ ಆಂಡ್ರ್ಯೂ ಚಿಮ್ಹೋಜಾ 
ದೇಶ

ಮಾಜಿ ಗೆಳತಿ ಮಾತು ಕೇಳಿ ಕೊಲೆ ಮಾಡಿ ಹೃದಯ ತಿಂದವನಿಗೆ 18 ವರ್ಷ ಜೈಲು!

ಮಾಜಿ ಪ್ರಿಯತಮೆ ಮಾತು ಕೇಳಿದ ಭೂಪನೊಬ್ಬ ಆಕೆಯ ಗೆಳೆಯನನ್ನು ಕೊಂದು ಹೃದಯ ತಿಂದ ಪಾಪಕ್ಕೆ ಇದೀಗ 18 ವರ್ಷ ಸೆರೆವಾಸದಲ್ಲಿರುವಂತಾಗಿದೆ...

ಜೋಹಾನ್ಸ್ಬರ್ಗ್: ಮಾಜಿ ಪ್ರಿಯತಮೆ ಮಾತು ಕೇಳಿದ ಭೂಪನೊಬ್ಬ ಆಕೆಯ ಗೆಳೆಯನನ್ನು ಕೊಂದು ಹೃದಯ ತಿಂದ ಪಾಪಕ್ಕೆ ಇದೀಗ 18 ವರ್ಷ ಸೆರೆವಾಸದಲ್ಲಿರುವಂತಾಗಿದೆ.

ಆಂಡ್ರ್ಯೂ ಚಿಮ್ಹೋಜಾ(34) ಎಂಬಾತ ಮೂಲತಃ ದಕ್ಷಿಣ ಆಫ್ರಿಕಾದವನಾಗಿದ್ದು, ಈತ ಪ್ರೀತಿ ಎಂಬ ಮಾಯಾ ಲೋಕದಲ್ಲಿ ಸಿಲುಕಿದ್ದ. ಕೆಲವು ವರ್ಷಗಳ ಹಿಂದೆ ಈತ ಪ್ರೀತಿಸಿದ್ದ ಪ್ರಿಯತಮೆ ಈತನನ್ನು ಬಿಟ್ಟು ಹೋಗಿದ್ದಳು. ಪ್ರಿಯತಮೆ ಪ್ರೀತಿಯ ಗುಂಗಿನಲ್ಲೇ ಇದ್ದವನಿಗೆ ಮಾನಸಿಕ ಅಸ್ವಸ್ಥನಾಗಿರುವಂತೆ ವರ್ತಿಸುತ್ತಿದ್ದ.

ಆಂಡ್ರ್ಯೂ ಚಿಮ್ಹೋಜಾ ಪ್ರೀತಿಸಿದ ಯುವತಿ ಮತ್ತೊಬ್ಬ ಯುವಕ ಬುಯಿಸೆಲೋ ಮನೋನಾ ಎಂಬಾತನನ್ನು ಪ್ರೀತಿಸಿದ್ದಳು. ಆದಾವ ಕಾರಣಕ್ಕೋ ಏನೋ ಇದ್ದಕ್ಕಿದ್ದಂತೆ ಆಂಡ್ರ್ಯೂ ಚಿಮ್ಹೋಜಾ ಬಳಿ ಬಂದ ಆಕೆ ತನ್ನ ಗೆಳೆಯನನ್ನು ಕೊಂದು ಆತನ ಹೃದಯವನ್ನು ತರುವಂತೆ ಹೇಳಿದ್ದಾಳೆ. ಪ್ರಿಯತಮೆ ಪ್ರೀತಿಯಲ್ಲಿ ಬಿದ್ದಿದ್ದ ಆಂಡ್ರ್ಯೂ ಚಿಮ್ಹೋಜಾ ಆಕೆಯ ಮಾತನ್ನು ಕೇಳಿ ಜೂನ್ 2014ರ ಕೆಪ್ಟೌನ್ ನಗರದ ಗುಗುಲೆಯಥು ಪ್ರದೇಶದಲ್ಲಿ ಬುಯಿಸೆಲೋ ಮನೋನಾನನ್ನು ಹತ್ಯೆ ಗೈದು ಚಾಕುವಿನಿಂದ ಇರಿದು, ಆತನ ಹೃದಯವನ್ನು ಕಚ್ಚಿ ಎಳೆದು ತಿನ್ನುವ ಮೂಲಕ ರಾಕ್ಷಸ ಸ್ವರೂಪವನ್ನು ಪ್ರದರ್ಶಿಸಿದ್ದ.

ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದರು. ವಿಚಾರಣೆ ಸಮಯದಲ್ಲಿ ತಾನು ಮಾಡಿದ ಪೈಶಾಚಿಕ ಕೃತ್ಯವನ್ನು ಈತ ಒಪ್ಪಿಕೊಂಡಿದ್ದಾನೆ. ಇದಕ್ಕೆ ಆತನ ಗೆಳತಿ ಸೃಷ್ಟಿಸಿದ ಅನಿವಾರ್ಯತೆಯೇ ಕಾರಣ ಎಂದು ಆತ ಹೇಳಿದ್ದನು.

ಈತನ ಮಾತು ಕೇಳಿದ ನ್ಯಾಯಾಂಗವು ಮನೋರೋಗ ಪರೀಕ್ಷೆಗೆ ಒಳಪಡಿಸಿದ್ದಾರು. ಮನೋರೋಗ ಪರೀಕ್ಷೆಯ ವೇಳೆ ಈತ ಯಾವುದೇ ಸಮಸ್ಯೆಯಿಂದ ಬಳುತ್ತಿಲ್ಲ ಎಂಬುದನ್ನು ಅರಿತ ನ್ಯಾಯಾಲಯವು, ಇಂದು ಈತನಿಗೆ 18 ವರ್ಷಗಳ ಕಾಲ ಕಠಿಣ ಸೆರೆವಾಸ ಶಿಕ್ಷೆ ವಿಧಿಸುವಂತೆ ಆದೇಶ ಹೊರಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT