ಐಐಟಿ 
ದೇಶ

ಐಐಟಿ, ಎನ್ಐಟಿಯಿಂದ ಮೂರು ವರ್ಷಗಳಲ್ಲಿ 4, 400 ವಿದ್ಯಾರ್ಥಿಗಳು ಡ್ರಾಪ್ ಔಟ್!

ಕಳೆದ ಮೂರು ವರ್ಷದಲ್ಲಿ ಸುಮಾರು 4 , 400 ಕ್ಕೂ ಹೆಚ್ಚು ಐಐಟಿ ಎನ್.ಐ.ಟಿ ವಿದ್ಯಾರ್ಥಿಗಳು ಅರ್ಧದಲ್ಲೇ ಕೋರ್ಸ್ ಗಳನ್ನು ಮೊಟಕುಗೊಳಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ನವದೆಹಲಿ: ಕಳೆದ ಮೂರು ವರ್ಷದಲ್ಲಿ ಸುಮಾರು 4 , 400 ಕ್ಕೂ ಹೆಚ್ಚು ಐಐಟಿ, ಎನ್.ಐ.ಟಿ ವಿದ್ಯಾರ್ಥಿಗಳು ಅರ್ಧದಲ್ಲೇ ಕೋರ್ಸ್ ಗಳನ್ನು ಮೊಟಕುಗೊಳಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ವಿದ್ಯಾರ್ಥಿಗಳು ಭಾರತೀಯ ತಂತ್ರಜ್ಞಾನ ಸಂಸ್ಥೆ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಕೋರ್ಸ್ ಗಳನ್ನು ಅರ್ಧಕ್ಕೇ ಮೊಟಕುಗೊಳಿಸಲು ಶೈಕ್ಷಣಿಕ ಒತ್ತಡವೇ ಪ್ರಮುಖ ಕಾರಣ ಎಂದು ಸರ್ಕಾರ ತಿಳಿಸಿದೆ. ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ, 2012 -13 ಹಾಗೂ 2014 -15 ನೇ ಸಾಲಿನಲ್ಲಿ ವಿವಿಧ ಐಐಟಿಗಳಿಂದ ಸುಮಾರು 2,060 ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದರೆ, ಎನ್ಐಟಿ ಯಲ್ಲಿದ್ದ ಸುಮಾರು 2,352 ವಿದ್ಯಾರ್ಥಿಗಳು ಮಧ್ಯಭಾಗದಲ್ಲೇ ಕೋರ್ಸ್ ಗಳನ್ನು ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

4 ವರ್ಷದ ಪದವಿಪೂರ್ವ ಶಿಕ್ಷಣವನ್ನು 7ವರ್ಷಗಳಲ್ಲಿಪೂರ್ಣಗೊಳಿಸಬಹುದಾಗಿದೆಯಾದರೂ, ಡ್ರಾಪ್ ಔಟ್ ಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ.2012 -13 ರಲ್ಲಿ 606 , 2013 - 14  ರಲ್ಲಿ 697 ಇದ್ದ ಡ್ರಾಪ್ ಔಟ್ ವಿದ್ಯಾರ್ಥಿಗಳ ಸಂಖ್ಯೆ ನಂತರದ ವರ್ಷದಲ್ಲಿ 757 ಕ್ಕೆ ಏರಿಕೆಯಾಗಿದೆ.  
16 ಐಐಟಿಗಳಲ್ಲಿ ರೂರ್ಕಿ ಐಐಟಿ(228 ) ಅತಿ ಹೆಚ್ಚು ವಿದ್ಯಾರ್ಥಿಗಳು ಕೋರ್ಸ್ ಗಳನ್ನು ಅರ್ಧಕ್ಕೇ ಮೊಟಕುಗೊಳಿಸಿ ವಾಪಸ್ಸಾಗಿದ್ದಾರೆ,  ನಂತರದ ಸ್ಥಾನದಲ್ಲಿರುವ ಖರಗ್ಪುರ ಐಐಟಿ, ದೆಹಲಿ ಐಐಟಿಗಳಲ್ಲಿ ಅನುಕ್ರಮವಾಗಿ 209 169  ವಿದ್ಯಾರ್ಥಿಗಳು  ಡ್ರಾಪ್ ಔಟ್ ಆಗಿದ್ದಾರೆ.

ವಿಶೇಷವೆಂದರೆ 2014 - 15 ನೇ ಸಾಲಿನ್ನಲ್ಲಿ ಮದ್ರಾಸ್ ಐಐಟಿ, ಖಾನ್ ಪುರ, ಜೋಧ್ ಪುರ, ರೋಪಾರ್ ಐಐಟಿಗಳಲ್ಲಿ ಡ್ರಾಪ್ ಔಟ್ ಪ್ರಕರಣಗಳೇ ವರದಿಯಾಗಿಲ್ಲ.  ಒಟ್ಟಾರೆ ಡ್ರಾಪ್ ಔಟ್ ಗಳ ಸಂಖ್ಯೆ ಎನ್ಐಟಿಗಳಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ.

ಐಐಟಿ/ ಎನ್ಐಟಿ ಶಿಕ್ಷಣವನ್ನು ಅರ್ಧದಲ್ಲೇ ಬಿಡುವುದಕ್ಕೆ ಬೇರೆ ಕಾಲೇಜು/ ಸಂಸ್ಥೆಗಳಿಗೆ ವರ್ಗಾವಣೆಯಾಗುವುದು, ವಯಕ್ತಿಕ , ವೈದ್ಯಕೀಯ, ಪಿಜಿ ಕೋರ್ಸ್ ಗಳ ವೇಳೆ ನೌಕರಿ ಸಿಗುವುದು ಶೈಕ್ಷಣಿಕ ಒತ್ತಡವನ್ನು ತಡೆಯಲಾಗದೆ ಇರುವುದು ಪ್ರಮುಖ ಕಾರಣಗಳಿರಬಹುದು ಎಂದು ಸ್ಮೃತಿ ಇರಾನಿ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT