ಸಾಂದರ್ಭಿಕ ಚಿತ್ರ 
ದೇಶ

ಆತ್ಮಹತ್ಯೆಗೆ ಒಪ್ಪಿಗೆ ಕೋರಿದ 25 ಸಾವಿರ ಅನ್ನದಾತರು!

ಭೂಮಿಗೆ ಪರಿಹಾರ ಕೋರಿ 17 ವರ್ಷಗಳಿಂದ ನಡೆಸುತ್ತಿರುವ ತಮ್ಮನಿರಂತರ ಹೋರಾಟಕ್ಕೆ ಸರ್ಕಾರ ಕಿವಿಗೊಡದ ಹಿನ್ನೆಲೆಯಲ್ಲಿ ಮಥುರಾದ...

ಲಖನೌ: ಭೂಮಿಗೆ ಪರಿಹಾರ ಕೋರಿ 17 ವರ್ಷಗಳಿಂದ ನಡೆಸುತ್ತಿರುವ ತಮ್ಮನಿರಂತರ ಹೋರಾಟಕ್ಕೆ ಸರ್ಕಾರ ಕಿವಿಗೊಡದ ಹಿನ್ನೆಲೆಯಲ್ಲಿ ಮಥುರಾದ 25 ಸಾವಿರ ರೈತರು, ಆ.15ರಂದು ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ನೀಡಬೇಕೆಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ಪತ್ರ ಬರೆದಿದ್ದಾರೆ. ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ, ವ್ಯಾಪಂ ಹಗರಣದ 70 ಮಂದಿ ಸಂತ್ರಸ್ತರು ಆತ್ಮಹತ್ಯೆಗೆ ಅನು ಮತಿ ಕೋರಿ ಪತ್ರ ಬರೆದ ಮಾರನೇ ದಿನವೇ, ಅಲ್ಲಿಂದ 175 ಕಿ.ಮೀ. ದೂರದ ಮಥುರಾದಲ್ಲಿ ರೈತರ ಅದೇ ಮಾದರಿಯನ್ನು ಅನುಸರಿಸಿದ್ದಾರೆ.ಗೋಕುಲ್ ಬ್ಯಾರೇಜ್‍ನಲ್ಲಿ ಮುಳುಗಡೆಯಾಗಿರುವ ತಮ್ಮ 700 ಎಕರೆ ಜಮೀನಿಗೆ 800 ಕೋಟಿ ಪರಿಹಾರ ನೀಡಬೇಕೆಂದು 1998ರಿಂದ ಮಥುರಾ ದ 11 ಹಳ್ಳಿಗಳ 25 ಸಾವಿರ ರೈತರು ಧರಣಿ ನಡೆಸುತ್ತಿದ್ದಾರೆ ಎಂದು ಟೈಮ್ಸ್ ಆಫ್  ಇಂಡಿಯಾ ವರದಿ ಮಾಡಿದೆ. ಆರ್‍ಎಸ್‍ಎಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ 17 ವರ್ಷ ಕಾಲ ನಡೆದ ರೈತರ ಧರಣಿಗೆ ರಾಜ್ಯ, ಕೇಂದ್ರ ಸರ್ಕಾರಗಳು ಕಿವುಡಾ ಗಿದ್ದು, ಕಳೆದ ನವೆಂಬರ್‍ನಲ್ಲಿ ಧರಣಿ ನಿರತರ ಮೇಲೆ ಪೊಲೀಸರಿಂದ ಗೋಲಿ ಬಾರ್ ಕೂಡ ನಡೆದಿತ್ತು. ಜತೆಗೆ ಪ್ರತಿ ಭಟನೆ ಬಗ್ಗುಬಡಿಯುವ ಯತ್ನವಾಗಿ ರಾಜ್ಯ ಸರ್ಕಾರ ಧರಣಿನಿರತರ ವಿರುದ್ಧ ಸುಳ್ಳು ಕೇಸುಗಳನ್ನೂ ಹಾಕಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT