ಕಾಶ್ಮೀರಿ ಪ್ರತ್ಯೇಕವಾದಿ ಮುಖಂಡರು 
ದೇಶ

ಯಾರು ಮೊದಲು ಹಿಂದೆ ಸರಿಯುವವರು?

ಇಬ್ಬರು ಕಾಶ್ಮೀರಿ ಪ್ರತ್ಯೇಕವಾದಿಗಳ ಹಠಾತ್ ಬಂಧನ ಮತ್ತು ಬಿಡುಗಡೆ ನಾಡಿದ್ದು ಭಾನುವಾರ ನಿಗದಿಯಾಗಿರುವ...

ನವದೆಹಲಿ: ಇಬ್ಬರು ಕಾಶ್ಮೀರಿ ಪ್ರತ್ಯೇಕವಾದಿಗಳ ಹಠಾತ್ ಬಂಧನ ಮತ್ತು ಬಿಡುಗಡೆ ನಾಡಿದ್ದು ಭಾನುವಾರ ನಿಗದಿಯಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಗೆ ಹಿನ್ನೆಡೆ ಉಂಟಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಯಾರು ಮೊದಲು ಮಾತುಕತೆಯಿಂದ ಹಿಂದಕ್ಕೆ ಸರಿಯುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.

ಹುರ್ರಿಯತ್ ನಾಯಕರಾದ ಸಯ್ಯದ್ ಆಲಿ ಶಾಹ್ ಗಿಲಾನಿ ಮತ್ತು ಇನ್ನಿಬ್ಬರು ನಾಯಕರನ್ನು ಪಾಕಿಸ್ತಾನ ಹೈ ಕಮಿಷನ್ ನಾಡಿದ್ದಿನ ಸಭೆಗೆ ಆಹ್ವಾನಿಸಿದ್ದು, ಭಾರತವನ್ನು ಕಂಗೆಡಿಸಿದೆ. ಆದರೆ ಇದು ಸಾಮಾನ್ಯ ಭೇಟಿ ಮತ್ತು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಎಂದು ಪಾಕಿಸ್ತಾನ ಹೇಳಿದೆ.

ಇಂದು ಹುರ್ರಿಯತ್ ನಾಯಕರ ಹಠಾತ್ ಬಂಧನ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಗೆ ಹೊಸ ಅಂಶವನ್ನು ತಂದಿದ್ದು, ಇದಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ.

ಪ್ರತ್ಯೇಕತಾವಾದಿ ಮುಖಂಡರ ಬಂಧನದ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಣ ಭಯೋತ್ಪಾದನೆ ವಿಷಯಕ್ಕೆ ಸಂಬಂಧಪಟ್ಟ ಮಾತುಕತೆಯಲ್ಲಿ ಇಬ್ಬರನ್ನು ಬಿಟ್ಟರೆ ಮೂರನೆಯವರ ಪ್ರವೇಶ ಬೇಡ ಎಂಬ ಸಂದೇಶವನ್ನು ಭಾರತ, ಪಾಕಿಸ್ತಾನಕ್ಕೆ ಕೊಟ್ಟಂತಿದೆ. ನಾಡಿದ್ದು ಸಭೆಯಲ್ಲಿ ಅವರು ಪಾಕಿಸ್ತಾನದ ಭದ್ರತಾ ಸಲಹೆಗಾರ ಸರ್ತಜ್ ಅಜೀಜ್ ಅವರನ್ನು ಭೇಟಿ ಮಾಡಿದರೆ ಮತ್ತೆ ಬಂಧನಕ್ಕೊಳಗಾಗಬೇಕಾದೀತು ಎಂಬ ಸೂಚನೆ ಕೂಡ ಇದರಲ್ಲಿದೆ. ಒಟ್ಟಾರೆಯಾಗಿ ಹುರ್ರಿಯತ್ ಮುಖಂಡರ ಇಂದಿನ ಬಂಧನ-ಬಿಡುಗಡೆ ಪ್ರಕರಣ ಭಾರತ-ಪಾಕ್ ನಡುವಣ ಮಾತುಕತೆಗೆ ಹೊಸ ತಿರುವು ನೀಡಲಿದೆ.

ಪಾಕಿಸ್ತಾನ ಹೈ ಕಮಿಷನರ್ ಕಾಶ್ಮೀರಿ ಪ್ರತ್ಯೇಕತಾವಾದಿ ಮುಖಂಡರ  ಸಲಹೆ ಕೇಳಿದ್ದರಿಂದ ಕಳೆದ ವರ್ಷ ಭಾರತ-ಪಾಕಿಸ್ತಾನದ ವಿದೇಶಾಂಗ ಮಟ್ಟದ ಮಾತುಕತೆ ಮುರಿದುಬಿದ್ದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT