ಸಿಡಿ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ರಾಮಚರಿತಮಾನಸದ ಸಂಗೀತ ಡಿಜಿಟಲ್ ಸಿಡಿ ಪ್ರಧಾನಿ ಬಿಡುಗಡೆ

'ರಾಮಚರಿತಮಾನಸ' ಮಹಾಕಾವ್ಯವಾಗಿದ್ದು, ಅದು ಭಾರತದ ಅಗತ್ಯವನ್ನು ಒಳಗೊಂಡಿದೆ ಎಂದು ವ್ಯಾಖ್ಯಾನಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಆಕಾಶವಾಣಿ ಸಂಗ್ರಹಿಸಿರುವ...

ನವದೆಹಲಿ: 'ರಾಮಚರಿತಮಾನಸ' ಮಹಾಕಾವ್ಯವಾಗಿದ್ದು, ಅದು ಭಾರತದ ಅಗತ್ಯವನ್ನು ಒಳಗೊಂಡಿದೆ ಎಂದು ವ್ಯಾಖ್ಯಾನಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಆಕಾಶವಾಣಿ ಸಂಗ್ರಹಿಸಿರುವ ರಾಮಚರಿತಮಾನಸದ ಧ್ವನಿ ಮುದ್ರಣದ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದರು.

ನಂತರ ಅವರು ಮಾತನಾಡಿ, ಕಲಾವಿದರು ಕೇವಲ ಸಂಗೀತವನ್ನು ಮಾತ್ರ ಹೇಳಲಿಲ್ಲ. ಅವರ ಸಂಸ್ಕೃತಿ ಮತ್ತು ಸಂಸ್ಕಾರ ಎದ್ದು ಕಾಣುತ್ತದೆ ಎಂದು ಹೇಳಿದರು. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿರುವ ಭಾರತೀಯರು ಭಾರತದೊಂದಿಗೆ ಹಲವು ವರ್ಷಗಳು ಕಳೆದ ನಂತರವೂ ಸಂಪರ್ಕ ಇಟ್ಟುಕೊಂಡಿದ್ದಾರೆ. ಅದಕ್ಕೆ ರಾಮಚರಿತಮಾನಸದಂತಹ ಮಹಾಗ್ರಂಥಗಳು ಕಾರಣವಾಗುತ್ತವೆ ಎಂದರು.

ರಾಮಚರಿತಮಾನಸದ ಸಿಡಿಯನ್ನು 20-22 ವರ್ಷಗಳ ಅವಧಿಯಲ್ಲಿ ತಯಾರಿಸಲಾಗಿದೆ. ಇದೊಂದು ಅದ್ವಿತೀಯ ಸಾಧನೆ ಎಂದರು. ಆಕಾಶವಾಣಿಯಲ್ಲಿ ದೇಶಾದ್ಯಂತ ಅನೇಕ ಕಲಾವಿದರು ಹಾಡಿದ್ದಾರೆ. 9 ಲಕ್ಷ ಗಂಟೆಗಳ ಧ್ವನಿ ಮುದ್ರಣವಿದೆ. ಈ ಸಿಡಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದೊಂದು ಅಮೂಲ್ಯ ಸಂಗ್ರಹವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT